ಪ್ರಧಾನಿಯಾಗುವ ಆಸೆ ಬಿಚ್ಚಿಟ್ಟ ಮಾಯಾವತಿ
ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಬಿಎಸ್ ಪಿ ನಾಯಕಿ ಮಾಯಾವತಿ ತಮ್ಮ ಆಸೆ ಬಿಚ್ಚಿಟ್ಟಿದ್ದಾರೆ.
ಅಂಬೇಡ್ಕರ್ ನಗರ : ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಬಿಎಸ್ಪಿ ಪರಮೋಚ್ಚ ನಾಯಕಿ ಮಾಯಾವತಿ ಅವರು ಪ್ರಧಾನಿ ಹುದ್ದೆ ಮೇಲೆ ತಮಗಿರುವ ಆಸೆಯನ್ನು ತೆರೆದಿಟ್ಟಿದ್ದಾರೆ.
ನನಗೆ ದೇಶದ ಪ್ರಧಾನಿಯಾಗುವ ಅವಕಾಶ ದೊರೆತರೆ ಉತ್ತರಪ್ರದೇಶದ ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಅದಕ್ಕೆ ಕಾರಣವನ್ನೂ ನೀಡಿ ರಾಷ್ಟ್ರ ರಾಜಕಾರಣದ ರಸ್ತೆ ಅಂಬೇಡ್ಕರ್ ನಗರದ ಮೂಲಕವೇ ಹಾದು ಹೋಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪರ ಮತ ಯಾಚಿಸಿದ BSP ನಾಯಕಿ ಮಾಯಾವತಿ!: ಏನಿದರ ಮರ್ಮ?