Asianet Suvarna News Asianet Suvarna News

ರಾಮ​ನ​ಗರ: ರಾಜೀವ್‌ ಗಾಂಧಿ ಆರೋಗ್ಯ ವಿವಿ ಕನ​ಸಿಗೆ ಮತ್ತೆ ಜೀವ..!

ವಿಶ್ವ​ವಿ​ದ್ಯಾ​ಲಯ ನಿರ್ಮಾ​ಣಕ್ಕೆ ಸಚಿ​ವ ಸಂಪುಟ ಅನು​ಮೋ​ದನೆ, ಒಂದೂ​ವರೆ ದಶ​ಕ​ದಿಂದ ನೆನ​ಗು​ದಿಗೆ ಬಿದ್ದಿದ್ದ ವಿವಿ ಕಾರ್ಯ, 330ರಿಂದ 600 ಕೋಟಿ ಬಜೆಟ್‌ ಹೆಚ್ಚಳ

Dream of Rajiv Gandhi University of Health Sciences Alive Again in Ramanagara grg
Author
First Published Nov 19, 2022, 11:30 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ನ.19): ಒಂದೂ​ವರೆ ದಶ​ಕ​ದಿಂದ ನೆನೆ​ಗು​ದಿಗೆ ಬಿದ್ದಿದ್ದ ಜಿಲ್ಲಾ ಕೇಂದ್ರ ರಾಮ​ನ​ಗ​ರ​ದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ​ವಿ​ದ್ಯಾ​ಲಯ ನಿರ್ಮಿ​ಸುವ ಕನ​ಸಿಗೆ ಮತ್ತೆ ಜೀವ ಬಂದಿದೆ. ಬೆಂಗ​ಳೂ​ರಲ್ಲಿ ಮುಖ್ಯ​ಮಂತ್ರಿ​ಗಳ ಅಧ್ಯ​ಕ್ಷ​ತೆ​ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜೀವ್‌ ಗಾಂಧಿ ವಿವಿಯ ಕ್ಯಾಂಪಸ್‌ ಹಾಗೂ ಇತರ ಪೂರಕ ಕಟ್ಟಡಗಳನ್ನು 600 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೊದನೆ ದೊರೆತಿದ್ದು, ವಿವಿ ನಿರ್ಮಾಣ ಕಾರ್ಯದ ನನಸಾಗುವ ಕಾಲ ಸನಿಹಗೊಂಡಿದೆ. ಕಳೆದ ಜನ​ವ​ರಿ​ಯಲ್ಲಿ ರಾಮ​ನ​ಗ​ರಕ್ಕೆ ಆಗ​ಮಿ​ಸಿದ್ದ ವೇಳೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ ಆರೋಗ್ಯ ವಿವಿ ನಿರ್ಮಾ​ಣಕ್ಕೆ ಇರುವ ತೊಂದ​ರೆ​ಯನ್ನು ಪರಿ​ಹ​ರಿಸಿ ನಾನೇ ಸ್ವತಃ ಬಂದು ಶಂಕು​ಸ್ಥಾ​ಪನೆ ನೆರ​ವೇ​ರಿ​ಸು​ವು​ದಾಗಿ ಭರ​ವಸೆ ನೀಡಿ​ದ್ದರು.

ಇದಕ್ಕೆ ಪೂರಕ ಎಂಬಂತೆ 2022-23ನೇ ಆಯ​ವ್ಯಯ ಮಂಡಿ​ಸಿದ ಮುಖ್ಯ​ಮಂತ್ರಿ​ಗಳು 600 ಕೋಟಿ ರುಪಾ​ಯಿ ಅನು​ದಾ​ನ ಘೋಷಿ​ಸಿ​ದರು. ಇದೀಗ 10 ತಿಂಗಳ ಬಳಿಕ ಯೋಜ​ನೆಗೆ ಆಡ​ಳಿ​ತಾ​ತ್ಮಕ ಅನು​ಮೋ​ದನೆ ನೀಡಿ​ದ್ದಾ​ರೆ. ಇದು ಜಿಲ್ಲೆಯ ಪಾಲಿಗೆ ಸಂತೋಷದ ಸಂಗತಿಯೂ ಆಗಿದೆ. ಈ ಮಧ್ಯೆ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕುಪ​ಪ​ತಿ​ಗಳು, ರಾಜ್ಯ ಸರ್ಕಾರ ವಿವಿಗೆ ನೀಡಿ​ರುವ ಜಾಗದ ವ್ಯಾಜ್ಯ ಮುಕ್ತಾ​ಯಗೊ​ಳಿ​ಸಿ ಅಗತ್ಯ ಇರುವಷ್ಟುಜಾಗವನ್ನು ಉಚಿತವಾಗಿ ನೀಡುವವರೆಗೆ ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣ ಹಾಗೂ ಕ್ಯಾಂಪಸ್‌ ಸ್ಥಳಾಂತರಿಸುವುದಿಲ್ಲ ಎಂದು ಹೇಳಿ​ದ್ದರು. ಆದ​ರೀಗ ವಿವಿ ನಿರ್ಮಾಣ ವಿಚಾ​ರ​ವನ್ನು ಸ್ವತಃ ಮುಖ್ಯ​ಮಂತ್ರಿ​ಗಳೇ ಮುತು​ವರ್ಜಿ ವಹಿ​ಸಿ​ದಂತೆ ಕಾಣು​ತ್ತಿದೆ.

Reva University; ರೇವಾ ವಿವಿಯಲ್ಲಿ ಪಂಚಭೂತಗಳ ಮಹತ್ವ, ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ

ಬ​ಜೆಟ್‌ ಗಾತ್ರವೂ ಹೆಚ್ಚಳ:

2006-07ರಲ್ಲಿ ಜೆಡಿ​ಎಸ್‌-ಬಿಜೆಪಿ ಮೈತ್ರಿ ಸರ್ಕಾರದ ಅವ​ಧಿ​ಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ ಅನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ರಾಮನಗರದ ಅರ್ಚಕರಹಳ್ಳಿ ಗ್ರಾಮದ ಬಳಿ 216.16 ಎಕರೆ ವಿಸ್ತೀ​ರ್ಣ​ದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ಮತ್ತು ಸೂಪರ್‌ ಸ್ಪೆಷಾ​ಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರು​ತಿ​ಸ​ಲಾ​ಗಿತ್ತು. ಇದಕ್ಕಾಗಿ ಬಜೆಟ್‌ನಲ್ಲಿ 330 ಕೋಟಿ ರು. ಹಣ ಮಂಜೂರು ಮಾಡಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಈಗ ಯೋಜ​ನೆಯ ಗಾತ್ರ ಸುಮಾರು 600 ಕೋಟಿ ರುಪಾ​ಯಿಗೆ ಏರಿ​ಕೆಯಾಗಿದೆ.

ಈ ಯೋಜನೆಯಂತೆ ಇಲ್ಲಿ ಆಡಳಿತ ಭವನ, ವೈದ್ಯಕೀಯ, ದಂತ, ನರ್ಸಿಂಗ್‌ ಕಾಲೇಜುಗಳು, 750 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು 250 ಹಾಸಿಗೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯಾರ್ಥಿನಿಲಯ, ವಸತಿ ಗೃಹಗಳು ಸೇರಿದಂತೆ 12 ಬೃಹತ್‌ ಕಟ್ಟಡಗಳನ್ನು ನಿರ್ಮಿ​ಸ​ಲಾ​ಗು​ತ್ತದೆ. ಈ ಯೋಜನೆ ಉದ್ದೇಶ ಹಳೇ ಮೈಸೂರು ಭಾಗದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆ ನೀಡುವುದಾ​ಗಿ​ದೆ.

ಜಮೀನು ವ್ಯಾಜ್ಯವೇ ಸಮಸ್ಯೆ:

ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಅರ್ಚ​ಕ​ರ​ಹ​ಳ್ಳಿ​ಯಲ್ಲಿ 274 ಎಕರೆ ಜಾಗದ ಅವ​ಶ್ಯ​ಕತೆ ಇತ್ತು. 2007 - 08ರಲ್ಲಿ 20 ಕೋಟಿ ರು.ಗಳನ್ನು ನೀಡಿ 41 ಎಕರೆ ಸರ್ಕಾರಿ ಗೋಮಾಳದ ಜತೆಗೆ ರೈತರ 80 ಎಕರೆ ಜಮೀನನ್ನು ಖರೀದಿ ಮಾಡಲಾಗಿತ್ತು. 2015 ರವರೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಾಕಿ ಇರುವ ಎಲ್ಲಾ ದಾವೆಗಳನ್ನು ಸುಪ್ರೀಂಕೋರ್ಚ್‌ ತೆರವುಗೊಳಿಸಿತ್ತು. ಆದರೆ, 79 ಎಕರೆ ಜಮೀ​ನಿನ 17 ರೈತರು ಮತ್ತೆ ಹೆಚ್ಚಿನ ಪರಿಹಾರ ಬೇಕೆಂದು ನ್ಯಾಯಾಲಯದ ಮೊರೆ ಹೋದರು. ಇದರಿಂದಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ವಿಳಂಬವಾಯಿತು.

ಇನ್ನುಳಿದ ರೈತರು ಭೂಮಿ ನೀಡಲು ಸಮ್ಮತಿಸಿದ್ದರು. ಹೀಗಾಗಿಯೇ ಸಂಸದ ಡಿ.ಕೆ.​ಸು​ರೇಶ್‌, ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯ​ಣ​ರ​ವರ ಅಧ್ಯಕ್ಷತೆಯಲ್ಲಿ ಸಾಕಷ್ಟುಸಭೆ ನಡೆಸಿದರೂ, ಪ್ರಯೋಜನವಾಗಿರಲಿಲ್ಲ. ಒಂದೂ​ವರೆ ದಶ​ಕ​ದಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿವಿ ನಿರ್ಮಾ​ಣ​ಕ್ಕಾಗಿ ಮೂವರು ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಧಿ​ಕಾ​ರಕ್ಕೆ ಬಂದ ಸರ್ಕಾ​ರ​ಗಳು ಬಜೆಟ್‌ ಗಾತ್ರವನ್ನು ಹೆಚ್ಚಳ ಮಾಡಿವೆ. ಆದರೆ, ವಿವಿ ಮಾತ್ರ ನಿರ್ಮಾಣಗೊಂಡಿಲ್ಲ. ಈಗ ದೊರೆ​ತಿ​ರುವ ಆಡಳಿತಾತ್ಮಕ ಅನುಮೊದನೆ ಸ್ಥಗಿ​ತ​ಗೊ​ಳ್ಳದೆ ಕಾಮ​ಗಾರಿ ಪ್ರಾರಂಭ​ಗೊ​ಳ್ಳು​ವುದೇ ಕಾದು ನೋಡ​ಬೇ​ಕಿದೆ.

ಉನ್ನತ ಶಿಕ್ಷಣ ಅಕಾಡೆಮಿಯಿಂದ ಪ್ರಾಧ್ಯಾಪಕರ ಮೌಲ್ಯಮಾಪನ

ವಿವಿಯಲ್ಲಿ ಏನೇನು ಇರಲಿದೆ?

ರಾಜೀವಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ಆಡಳಿತ ಭವನ, 34,35 ಕೋಟಿ ವಚ್ಚದಲ್ಲಿ 750 ಹಾಸಿಗೆಯ ಹೈಟೆಕ್‌ ಆಸ್ಪತ್ರೆ, 78,63 ಕೋಟಿ, 250 ಹಾಸಿಗೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ 53,27 ಕೋಟಿ, ವ್ಯೆದ್ಯಕೀಯ ಕಾಲೇಜು, 72,28 ಕೋಟಿ, ದಂತ ವ್ಯೆದ್ಯಕೀಯ ಕಾಲೇಜು, 24,56 ಕೋಟಿ, ಫಾರ್ಮಸಿ ಕಾಲೇಜು,12,95 ಕೋಟಿ, ನರ್ಸಿಂಗ್‌ ಕಾಲೇಜು, 8,13 ಕೋಟಿ, ಪುರುಷರ ಹಾಸ್ಟೆಲ್‌ 14,07 ಕೋಟಿ, ಮಹಿಳೆಯರ ಹಾಸ್ಟೆಲ್‌ 14,07 ಕೋಟಿ, ನರ್ಸಿಂಗ್‌ ಹಾಸ್ಟೆಲ್‌ 3,52 ಕೋಟಿ, ಸಿಬ್ಬಂದಿ ಕ್ವಾಟ್ರಸ್‌ 12,49 ಕೋಟಿ, ವಿಶ್ರಾಂತಿ ಕೊಠಡಿಗಳು 2,63 ಕೋಟಿ, ಕ್ಯಾಂಟೀನ್‌ ಬ್ಲಾಕ್‌ 0,96 ಲಕ್ಷ , ಅನಿಮಲ್‌ ಪ್ಲಾಂಟ್‌ 1,34 ಕೋಟಿ, ಭದ್ರತಾ ಸಿಬ್ಬಂದಿ ಕೊಠಡಿ 23ಲಕ್ಷ ಮತ್ತು ಇತರೆ ಕಟ್ಟಡ ಖರ್ಚಿಗಾಗಿ 7 ಲಕ್ಷ ರು.ಗಳ ಖರ್ಚುಗಳುಳ್ಳ ನೀಲಿ ನಕ್ಷೆ ಸಿದ್ಧವಾಗಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ​ವಿ​ದ್ಯಾ​ಲಯ ನಿರ್ಮಾ​ಣಕ್ಕೆ ಆಡ​ಳಿ​ತಾ​ತ್ಮಕ ಅನು​ಮೋ​ದನೆ ನೀಡುವ ಮೂಲಕ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ​ರ​ವರು ನುಡಿ​ದಂತೆ ನಡೆದು ತೋರಿ​ಸಿ​ದ್ದಾರೆ. ಆದಷ್ಟುಶೀಘ್ರ​ದಲ್ಲಿ ಕಾಮ​ಗಾರಿ ಪ್ರಾರಂಭ​ಗೊ​ಳ್ಳುವ ನಿರೀಕ್ಷೆ ಇದೆ. ಇದಕ್ಕೆ ಕಾರ​ಣ​ರಾದ ಜಿಲ್ಲಾ ಉಸ್ತು​ವಾಸಿ ಸಚಿವ ಅಶ್ವತ್ಥ ನಾರಾ​ಯಣರವರ ಶ್ರಮ ಮರೆ​ಯು​ವಂತಿಲ್ಲ. ಸಿಎಂ ಬೊಮ್ಮಾ​ಯಿ ಮತ್ತು ಸಚಿವ ಅಶ್ವತ್ಥ ನಾರಾ​ಯಣ ಅವ​ರಿಗೆ ಧನ್ಯ​ವಾ​ದ​ಗಳು ಅಂತ ಕರ್ನಾ​ಟಕ ರೇಷ್ಮೆ ನಿಗಮ ಮಂಡ​ಳಿ ಅಧ್ಯ​ಕ್ಷ ಗೌತಮ್‌ಗೌಡ ತಿಳಿಸಿದ್ದಾರೆ. 
 

Follow Us:
Download App:
  • android
  • ios