ಲಾಕ್‌ಡೌನ್ ವೇಳೆ ಸಾವಿರಾರು ಕಾರ್ಮಿಕರಿಗೆ ನೆರವಾದ, ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್ ನಟ ಇದೀಗ ಮತ್ತೊಂದು ಕಾರ್ಯಕ್ಕೆ ಕೈಹಾಕಿದ್ದಾರೆ. 

ಬಾಲಿವುಡ್ ನಟ ಸೋನು ಸೂದ್, ಬಡವರ ಪಾಲಿನ ಆರಾದ್ಯ ದೈವ ಆಗಿದ್ದಾರೆ. ಸರ್ಕಾರಗಳು ಮಾಡಲಾಗದ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸೋನು ಮಾಡಿದ ಸಹಾಯಗಳನ್ನ ವರ್ಣಿಸಲು ಅಸಾಧ್ಯ. ಅದೆಷ್ಟೋ ವಲಸೆ ಕಾರ್ಮಿಕರ, ನೊಂದವರ ಬಾಳಿಗೆ ಬೆಳಕಾದವರು. ಸೋಷಿಯಲ್ ಮೀಡಿಯಾಗಳ ಮೂಲಕ ಜನರ ಸೇವೆ ಮಾಡಿದವರು. ಕಷ್ಟ ಎಂದು ಬಂದ ಯಾರನ್ನೂ ಬರಿಗೈಲೇ ವಾಪಸ್ ಕಳುಹಿಸಿಲ್ಲ. ಇದೀಗ ಮಾನವ ಹಕ್ಕುಗಳ ಜೊತೆಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನ ತಿಳಿಸಲು ಟೊಂಕಕಟ್ಟಿ ನಿಂತಿದ್ದಾರೆ.

Add Asianetnews Kannada as a Preferred SourcegooglePreferred

ಮಾನವ ಹಕ್ಕು ಅತ್ಯಂತ ಮುಖ್ಯ ವಾದದ್ದು ಎಂಬ ನಿಲುವು ತಳೆದಿರುವ ನಟಿ ಸೋನಾಕ್ಷಿ ಸಿನ್ಹಾ, ರವೀನಾ ಟಂಡನ್, ಆರ್. ಬಾಲ್ಕಿ, ಅಶ್ವಿನಿ ಅಯ್ಯರ್ ತಿವಾರಿ, ಇಮ್ತಿಯಾಜ್ ಅಲಿ, ನಂದಿತಾ ದಾಸ್, ಸಾಕೇತ್ ಚೌಧರಿ, ಅಲಂಕೃತ ಶ್ರೀವಾಸ್ತವ, ರುಚಿ ನಾಯರ್ ಮತ್ತು ಶೋನಾಲಿ ಬೋಸ್ ಸೇರಿದಂತೆ ಬಾಲಿವುಡ್ ನಟರು ಹಾಗೂ ನಿರ್ಮಾಪಕರ ಗುಂಪಿಗೆ ಈಗ ಸೋನು ಸೂದ್ ಕೂಡ ಸೇರ್ಪಡೆಯಾಗಿದ್ದಾರೆ.

ಬೆಳಗಾವಿಯೊಂದರಲ್ಲೇ ಕೋವಿಡ್‌ನಿಂದ 110 ಶಿಕ್ಷಕರ ಸಾವು

ಯುನೈಟೆಡ್ ಫಾರ್ ಹ್ಯೂಮನ್ ರೈಟ್ಸ್ ನ ಹುಟ್ಟು ಉಚಿತ ಹಾಗೂ ಸಮಾನ ಎಂಬ ಕಾರ್ಯಕ್ರಮ ದಲ್ಲಿ ಸೋನು ಸೂದ್, ಪ್ರತಿಯೊಬ್ಬರೂ ಆಹಾರ ಹಾಗೂ ಆಶ್ರಯ ಹೊಂದುವುದು ಮಾನವ ಹಕ್ಕು. ಇವುಗಳನ್ನ ಪಡೆಯಲು ಎಲ್ಲರೂ ಅನರ್ಹರು ಎಂಬ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಆದ್ರೆ ಅದೆಷ್ಟೋ ಜನ ಊಟವಿಲ್ಲದೇ ಎರಡು ಮೂರು ದಿನ ಕಳೆಯುತ್ತಾರೆ ಅಂತ ಉದಾಹರಣೆ ಸಹಿತ ವಿವರಿಸಿದ್ರು. ಸರ್ಕಾರ ವಿತರಿಸಿದ ಆಹಾರ ಬಹಳಷ್ಟು ಸ್ಥಳಗಳನ್ನು ತಲುಪುತ್ತದೆ, ಆದರೆ ನಮ್ಮಲ್ಲಿ ಕನಿಷ್ಠ 30 ರಿಂದ 40% ಜನರು, ತಮ್ಮ ಎಲ್ಲಾ ಅಗತ್ಯಗಳು ಮತ್ತು ಅವರ ಹಕ್ಕುಗಳಿಂದ ವಂಚಿತರಾಗುತ್ತಾರೆ ಅನ್ನೋದನ್ನ ನಾವು ಗಮನಿಸಬೇಕು. ಹಾಗಾದ್ರೆ ಅರಿವು ಮೂಡಿಸೊದಾದ್ರು ಹೇಗೆ?ಅಂತಾರೆ ಸೋನು ಸೂದ್.

ಅರ್ಧದಷ್ಟು ಮಂದಿಗೆ ಅಂದ್ರೆ 10 ಜನರಲ್ಲಿ ಐವರಿಗೆ ತಮ್ಮ ಹಕ್ಕುಗಳ ಬಳಕೆ ಬಗ್ಗೆ ಅರಿವಿಲ್ಲ. ಒಂದು ವೇಳೆ ಗೊತ್ತಿದ್ರೂ ಅವರಿಗೆ ಸ್ವಲ್ಪ ಜ್ಞಾನವಿದೆ ಎಂದು ಸೋನು ಸೂದ್ ಭಾವಿಸುತ್ತಾರೆ.

ನಾನು ಒಂದು ಕೋಟಿ ಮಕ್ಕಳ ಪೋಷಕ: ಸುರೇಶ್ ಕುಮಾರ್ ಸ್ಪಷ್ಟನೆ

 ಈ ಸಮಾಜಗಳ ಅಂತರಂಗದ ಜನರು, ನಿಜವಾದ ಜನರು ಬಳಲುತ್ತಿದ್ದಾರೆ. ಅವರು ಮುಂದೆ ಬರಬೇಕು.‌ ಸರ್ಕಾರ ಮಾಡಿರುವ ಈ ಎಲ್ಲಾ ಯೋಜನೆಗಳು ಅವರನ್ನು ತಲುಪಬೇಕು.

'ನಾನು ಈ ಎಲ್ಲಾ ಸಣ್ಣ ಸ್ಥಳಗಳಿಗೆ ಹೋಗುತ್ತೇನೆ - ಅರ್ಧದಷ್ಟು ಜನರು ಇನ್ನೂ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ, ಆದ್ದರಿಂದ ನಮಗೆ ಹೆಚ್ಚಿನ ಶಿಕ್ಷಣ ಕಾರ್ಯಕ್ರಮಗಳು ಬೇಕಾಗುತ್ತವೆ. ಶಿಕ್ಷಣ ಕಾರ್ಯಕ್ರಮ ಗಳ ಮೂಲಕ ನಾವು ಅವರಿಗೆ ಅರಿವು ಮೂಡಿಸಬಹುದು. ನಿರ್ದಿಷ್ಟ ಕುಟುಂಬದ ಜನರು ಅಥವಾ ಪ್ರಮುಖ ಸಮಾಜದ ಜನರು ಮುಂದೆ ಬಂದಾಗ ಮಾತ್ರ ಹಕ್ಕುಗಳು ಅವರನ್ನ ತಲುಪಬಹುದು. ಮತ್ತು ಸರ್ಕಾರದ ಸರಬರಾಜು ಪ್ರತಿ ಹಳ್ಳಿ ಹಳ್ಳಿಗೂ ಮುಟ್ಟಬಹುದು ಅಂತ ಹೇಳಿದ್ದಾರೆ.

"

ಲಾಕ್‌ಡೌನ್ ಹೀರೋ
ಸೋನು ಸೂದ್ ಅವರು ಲಾಕ್‌ಡೌನ್ ವೇಳೆ ಮಾಡಿದ ಮಾನವೀಯ ಕಾರ್ಯಗಳನ್ನು ಮರಿತಾರೆ ಹೇಳಿ. ಸಾವಿರಾರು ವಲಸೆ ಕಾರ್ಮಿಕರು ಸೋನು ಸೂದ್ ಅವರಿಂದಾಗಿ ತಮ್ಮ ಹಳ್ಳಿಗಳನ್ನು ಸೇರುವಂತಾಯಿತು. ಕೊರೋನಾ ಬಿಕ್ಕಟ್ಟಿನ ವೇಳೆ ವಿದೇಶದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ತವರಿಗೆ ಕರೆ ತರುವಲ್ಲಿ ನೆರವಾದರು. ಭಾರತದೊಳಗೇ ಬೇರೆ ಬೇರೆ ರಾಜ್ಯಗಳಲ್ಲಿದ್ದು ತಮ್ಮ ಹಳ್ಳಿಗಳಿಗೆ ಹೋಗಲಾಗ ಎಷ್ಟೋ ಕಾರ್ಮಿಕರಿಗೆ ನೆರವು ನೀಡಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಕಾರ್ಮಿಕರು ಇದ್ದಾರೆ. ಅವರ ಈ ಮಾನವೀಯ ಕಾರ್ಯವನ್ನು ಮೆಚ್ಚಿ ಮೊನ್ನೆಯಷ್ಟೇ, ಯುನೈಟೆಡ್ ನೇಷನ್ ಡೆವಲಪ್‌ಮೆಂಟ್ ಪ್ರೊಗ್ರಾಮ್(ಯುಎನ್‌ಡಿಪಿ) ಸೋನು ಸೂದ್ ಅವರಿಗೆ ಎಸ್‌ಡಿಜಿ ಸ್ಪೇಷಲ್ ಹ್ಯೂಮಾನಿಟಿರಿಯನ್ ಆಕ್ಷನ್ ಅವಾರ್ಡ್ ನೀಡಿ ಗೌರವಿಸಿದೆ.

ಶಾಲೆ ತೆರೆಯಬೇಕೆ? ನಾಯಕರು ಕೊಟ್ಟ ಅದ್ಭುತ ಸಲಹೆಗಳಿಗೆ ತಲೆಬಾಗಲೇಬೇಕು