Asianet Suvarna News Asianet Suvarna News

Textbookಗಳ ಮರು ಮುದ್ರಣ ಇಲ್ಲ; ಸಚಿವ ಬಿಸಿ.ನಾಗೇಶ್

ಯಾವ ಕಾರಣಕ್ಕೂ ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

BC Nagesh rules out re-print of textbooks gow
Author
Bengaluru, First Published Jun 5, 2022, 10:46 AM IST

ಬೆಂಗಳೂರು(ಜೂ.5): ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣವನ್ನು ನಿಲ್ಲಿಸುವುದಿಲ್ಲ, ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh ) ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ. 

ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕಗಳ ವಿತರಣೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಮತ್ತು ಮರು ಪರಿಷ್ಕರಣೆಯಿಂದಾಗಿ ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುವುದಿಲ್ಲ. ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿರುವ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕುರಿತಾದ ವಿಷಯವನ್ನು ಮಾತ್ರ ಮರುಪರಿಶೀಲನೆಗೆ ಪರಿಗಣಿಸಲಾಗಿರುವುದರಿಂದ ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡಲಾಗುವುದಿಲ್ಲ. ಬಸವಣ್ಣನವರ ಪರಿಷ್ಕೃತ ವಿಷಯದ ಪ್ರತ್ಯೇಕ ಕಿರುಪುಸ್ತಕವನ್ನು ಮಾತ್ರ ಮುದ್ರಿಸಿ ಪಠ್ಯಪುಸ್ತಕಗಳೊಂದಿಗೆ ಶಾಲೆಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ರೋಹಿತ್ ಚಕ್ರತೀರ್ಥ () ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಬಸವಣ್ಣನವರ ವಿಷಯ ಮರು ಪರಿಷ್ಕರಣೆ ಮೇಲ್ವಿಚಾರಣೆಗೆ ಯಾವುದೇ ಹೊಸ ಸಮಿತಿಯನ್ನು ರಚಿಸುವುದಿಲ್ಲ ಎಂದು ನಾಗೇಶ್ ಪುನರುಚ್ಚರಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾ ಮಾಡಿಲ್ಲ: ಸಚಿವ ಅಶ್ವತ್ಥನಾರಾಯಣ

ರಾಜ್ಯ ಸರ್ಕಾರವು ಕೆಲವು ತಜ್ಞರನ್ನು ಸಂಪರ್ಕಿಸಲು ಚಿಂತನೆ ನಡೆಸಿದೆ. ಆದರೆ, ತಜ್ಞರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಶುಕ್ರವಾರ ರಾತ್ರಿಯವರೆಗೆ ಶೇ.79.70ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ಶೇ.66.98ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗಿದೆ. ಹದಿನೈದು ದಿನದೊಳಗೆ ಮುದ್ರಣ ಮತ್ತು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

ಇತ್ತೀಚಿನ ಮರು-ಪರಿಷ್ಕರಣೆಯೊಂದಿಗೆ ಪಠ್ಯಪುಸ್ತಕಗಳ ಮರುಮುದ್ರಣ ಮಾಡುವುದು ಎಂದರೆ ನಡೆಯುತ್ತಿರುವ ಮುದ್ರಣವನ್ನು ನಿಲ್ಲಿಸಬೇಕಿದೆ. ಇದು ಶಾಲೆಗಳ ಮೇಲೆ ಪರಿಣಾಮ ಬೀರಲಿದೆ. 

ಕುವೆಂಪು ಪಠ್ಯವನ್ನು ಚಕ್ರತೀರ್ಥ ಮುಟ್ಟಿಲ್ಲ: ನಾಗೇಶ್‌

14 ಲೇಖಕರ ಪೈಕಿ 7 ಮಂದಿಯ ಪಠ್ಯವನ್ನು ಮಾತ್ರ ಮರುಮುದ್ರಿಸಲಾಗಿದೆ: ಚಕ್ರತೀರ್ಥ ನೇತೃತ್ವದ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ತಮ್ಮ ವಿಷಯವನ್ನು ಸೇರಿಸಲು ಲೇಖಕರು ತಮ್ಮ ಅನುಮತಿಯನ್ನು ಹಿಂಪಡೆದಿರುವ ವಿಷಯದ ಕುರಿತು ಮಾತನಾಡಿದ ಸಚಿವರು, “ಅನುಮತಿ ಹಿಂಪಡೆಯಲು ಕೋರಿರುವ 14 ಲೇಖಕರ ಪೈಕಿ ಏಳು ಲೇಖಕರ ಅಧ್ಯಾಯಗಳು/ಕವನಗಳನ್ನು ಮಾತ್ರ ಮುದ್ರಿಸಲಾಗಿದೆ. ಉಳಿದವರು ಸುಮ್ಮನೆ ಹೇಳಿಕೆ ನೀಡಿದ್ದಾರೆ. ಆದರೆ, ಈ ಏಳು ಲೇಖಕರಲ್ಲಿ ಯಾರೂ ತಮ್ಮ ಒಪ್ಪಿಗೆ ನೀಡಿದ ನಂತರ ಕಾನೂನುಬದ್ಧವಾಗಿ ಅನುಮತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವರ ಪಾಠಗಳನ್ನು ಕೈಬಿಡುವ ಅಥವಾ ಪಠ್ಯಪುಸ್ತಕಗಳನ್ನು ಮತ್ತೆ ಮುದ್ರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಪಠ್ಯಪುಸ್ತಕಗಳು ಈಗಾಗಲೇ ಮುದ್ರಣಗೊಂಡಿರುವಾಗ ಮತ್ತು ಕಳೆದ ವರ್ಷವೇ ಸಲ್ಲಿಸಲಾದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ವರದಿಯ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಸಂದರ್ಭದಲ್ಲಿ ಈ ರೀತಿ ಮಾಡಬಾರದಿತ್ತು. ಆದರೂ, ನಾವು ಈಗಾಗಲೇ ಸಾಹಿತಿ ದೇವನೂರು ಮಹಾದೇವ ಅವರಿಗೆ ಪತ್ರ ಬರೆದಿದ್ದು, ಉಳಿದ ಆರು ಲೇಖಕರಿಗೆ ಅವರ ಗೌರವಾರ್ಥವಾಗಿ ಪತ್ರ ಬರೆಯಲಾಗುತ್ತದೆ ಎಂದಿದ್ದಾರೆ. 

ಇದೇ ವೇಳೆ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ (kb hedgewar) ಪಾಠವನ್ನು ಪಠ್ಯ ಪುಸ್ತಕದಿಂದ (Textbook) ತೆಗೆದುಹಾಕಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಸಿಎಂ ಬೊಮ್ಮಾಯಿ ತಿರಸ್ಕರಿಸಿದರು. ಪಾಠವನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.  

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಲಾಗಿದೆಯೇ ಅಥವಾ ವಿಸರ್ಜಿಸಲಾಗಿದೆಯೇ ಎಂಬುದರ ಕುರಿತು ಮಾತನಾಡಿ, ಸಮಿತಿಯ ಕೆಲಸ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ವಿಸರ್ಜಿಸಲಾಗಿದೆ, ಹೊಸ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ ಎಂದು ಹೇಳಿದರು. 
 
ಚಕ್ರತೀರ್ಥ ಸಮಿತಿಯು ವಾಸ್ತವದ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆಯೇ ಹೊರತು ಸ್ವಾಮೀಜಿಗಳ ಒತ್ತಡದಿಂದಲ್ಲ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ ಬಸವಣ್ಣನವರ ಪಠ್ಯಕ್ಕೂ ಈಗಿನದ್ದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ತಿಳಿಸಿದರು.

ಹೊಸ ಪಠ್ಯಪುಸ್ತಕದಲ್ಲಿ ಒಂದು ವಾಕ್ಯದಲ್ಲಿ ವ್ಯತ್ಯಾಸವಿದ್ದು ಅದನ್ನು ಸರಿಪಡಿಸಲಾಗುವುದು. ತಮ್ಮ ಸರ್ಕಾರ ಬಸವ ಪಥದಲ್ಲಿ ನಡೆಯುತ್ತಿದ್ದು, ಹೊಸ ಪಠ್ಯಪುಸ್ತಕಗಳಲ್ಲಿ ಉತ್ತಮ ವಚನಗಳನ್ನು ಅಳವಡಿಸಲಾಗಿದೆ, ಈ ಬಗ್ಗೆ ಸ್ವಾಮೀಜಿಗಳು ಹಾಗೂ ಇತರೆ ಸಂಬಂಧಪಟ್ಟವರೊಂದಿಗೆ ಎಂದು ಹೇಳಿದರು. 

ಪಿಯು-II ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವನ್ನು ಪರಿಷ್ಕರಿಸಲು ಯೋಜಿಸಿದ್ದರೂ ಅದಕ್ಕೂ ಆಕ್ಷೇಪಣೆಗಳು ಕೇಳಿ ಬಂದಿರುವುದರಿಂದ, ಸದ್ಯಕ್ಕೆ ಈ ಆಲೋಚನೆಯನ್ನು ಕೈಬಿಡಲು ಯೋಜಿಸಲಾಗಿದೆ ಎಂದು ಸಚಿವ ನಾಗೇಶ್ ಹೇಳಿದರು.

Follow Us:
Download App:
  • android
  • ios