Asianet Suvarna News Asianet Suvarna News

Daily Horoscope: ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ

9 ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕ ರಾಶಿಗೆ ಮಾನಸಿಕ ಕಿರಿಕಿರಿ, ತುಲಾ, ವೃಶ್ಚಿಕ ರಾಶಿಗೆ ಅಚ್ಛೇದಿನ್

Dina Bhavishya of December 9th 2021 in Kannada SKR
Author
Bangalore, First Published Dec 9, 2021, 5:03 AM IST

ಮೇಷ(Aries): ಉದ್ಯೋಗದಲ್ಲಿ ಮೇಲಿನವರಿಂದ ಕಿರಿಕಿರಿ, ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ. ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಸಾಲ ಮರುಪಾವತಿ ಮಾಡದೆ ಸಂಕಷ್ಟ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಮನಸ್ತಾಪ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ(Taurus): ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ ಹೆಚ್ಚುವುದು. ಮಾತಿನಲ್ಲಿ ವ್ಯತ್ಯಾಸವಾಗಿ ಸ್ವಲ್ಪ ಅಸಮಾಧಾನವಾಗಬಹುದು. ನಾಲಿಗೆ ಮೇಲೆ ಹಿಡಿತ ಅಗತ್ಯ. ಅವಿವಾಹಿತರಿಗೆ ಶುಭಸುದ್ದಿ. ಕಾರ್ಯನಿಮಿತ್ತ ಕೈಗೊಂಡ ದೂರ ಪ್ರವಾಸ ಯಶಸ್ವಿಯಾಗುವುದು. ನವಗ್ರಹ ಪ್ರಾರ್ಥನೆ ಮಾಡಿ. 

ಮಿಥುನ(Gemini): ಪಾಲುದಾರಿಕೆ ಕೆಲಸದಲ್ಲಿ, ನೀವು ಪ್ರತಿಯೊಂದು ಅಂಶಕ್ಕೂ ಗಮನ ಕೊಡಬೇಕು. ಅತಿಯಾದ ನಂಬಿಕೆಯಿಂದ ಮೋಸ ಹೋಗಬಹುದು. ಹಣಕಾಸಿನ ಪರಿಸ್ಥಿತಿ ವ್ಯತ್ಯಾಸವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮನಸ್ಸಿಗೆ ಕಸಿವಿಸಿ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಭಂಗವಾಗುತ್ತದೆ. ಅಮ್ಮನವರಿಗೆ ಕೆಂಪು ಹೂಗಳನ್ನು ಏರಿಸಿ ಪ್ರಾರ್ಥಿಸಿ. 

Career and Zodiacs: ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್ ತಿಳ್ಕೊಳಿ..

ಕಟಕ(Cancer): ದಾಂಪತ್ಯದಲ್ಲಿ ಜಗಳ, ಮುನಿಸುಗಳು ಕಾಣಬಹುದು. ಮಾತುಗಳನ್ನು ನುಂಗಿಕೊಂಡು ಕೂರುವ ಬದಲು, ಮನಸ್ಸಿನಲ್ಲಿರುವುದನ್ನೆಲ್ಲ ಸಮಾಧಾನವಾಗಿ ಹೇಳಿ, ಬಹುಕಾಲದಿಂದ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ವೃತ್ತಿಯಲ್ಲಿ ಅನುಕೂಲ, ಹೊಸ ಅವಕಾಶಗಳು ಬರಬಹುದು. ಧೈರ್ಯದಿಂದ ಮುನ್ನುಗ್ಗಿದರೆ ಪ್ರಶಂಸೆ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಸಿಂಹ(Leo): ಮಕ್ಕಳ ಸಲುವಾಗಿ ಖರ್ಚು ಹೆಚ್ಚುವುದು. ಮಕ್ಕಳ ಹಾಗೂ ಕುಟುಂಬದವರ ಆರೋಗ್ಯದಲ್ಲಿ ಏರುಪೇರಾಗಬಹುದು. ಯಾವುದೋ ಕಾರಣಕ್ಕಾಗಿ ಶ್ರಮ ವ್ಯರ್ಥ. ನಿಮ್ಮ ಕೈಗೆಟುಕದ ವಸ್ತುವಿಗಾಗಿ ಸಮಯ ವ್ಯರ್ಥ ಮಾಡದಿರಿ. ನಿರುದ್ಯೋಗಿಗಳು ಪರರಿಂದ ನಿರ್ಲಕ್ಷ್ಯಕ್ಕೊಳಗಾಗುವರು. ಗಣಪತಿಗೆ 21 ದರ್ಬೆಗಳನ್ನು ಏರಿಸಿ. 

Career Horoscope 2022: ಹೊಸ ವರ್ಷಕ್ಕೆ ಈ ರಾಶಿಯವರ ಲಕ್ ತಿರುಗ್ತು ಅಂತಾನೇ ಲೆಕ್ಕ!

ಕನ್ಯಾ(Virgo): ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಕೆಲಸ ನಿಮಿತ್ತ ದೂರ ಪ್ರಯಾಣ. ಚರ್ಮ ವ್ಯಾಧಿ ಬಾಧೆಯಿಂದ ಕಂಗಾಲು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ, ಮೃತ್ತಿಕೆ ಹಚ್ಚಿಕೊಳ್ಳಿ. 

ತುಲಾ(Libra): ನಿರಾಳದ ದಿನ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಬಹುಕಾಲದಿಂದ ಮುಂದೂಡಿಕೊಂಡು ಬಂದ ಬ್ಯಾಂಕ್ ಕೆಲಸಗಳು ಸರಾಗ. ಧನ ಸಮೃದ್ಧಿಯಿಂದ ಸಂತೋಷ. ನೀರಿನ ಸಮೀಪದಲ್ಲಿ ಎಚ್ಚರವಾಗಿರಿ. ರೈತರು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ಗುರು ರಾಯರ ಸ್ಮರಣೆ ಮಾಡಿ. ಶುಭಕ್ಕೆ ಧನ್ಯವಾದ ಅರ್ಪಿಸಿ.

ವೃಶ್ಚಿಕ(Scorpio): ಧನ ಸಮೃದ್ಧಿ, ಎಲೆಕ್ಟ್ರಿಕ್, ದಿನಸಿ, ವಸ್ತ್ರ, ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಲಾಭದ ದಿನ. ವಿದ್ಯಾರ್ಥಿಗಳಿಗೆ ಅನುಕೂಲದ ದಿನ. ಎಲ್ಲರ ಗಮನದ ಕೇಂದ್ರಬಿಂದುವಾಗುವ ಅವಕಾಶ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿ ಬರುವುದು. ನಿರುದ್ಯೋಗಿಗಳಿಗೆ ಅದೃಷ್ಟ ಖುಲಾಯಿಸಲಿದೆ. ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ.

ಧನುಸ್ಸು(Sagittarius): ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ. ಆಹಾರದಲ್ಲಿ ವ್ಯತ್ಯಾಸವಾಗಿ ಉದರ ಸಮಸ್ಯೆಗಳು ಎದುರಾಗಬಹುದು.  ಬಂಧುಮಿತ್ರರ ಮನೆಗೆ ಭೇಟಿ. ವೃತ್ತಿಯಲ್ಲಿ ಹೊಸ ಅವಕಾಶದಿಂದ ಸಂತೋಷ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ಮಕರ(Capricorn): ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ನಿರ್ಲಕ್ಷ್ಯ ಮಾಡದಿರಿ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲವಲ್ಲ. ನಿತ್ಯದ ಕೆಲಸ ತುಸು ಶ್ರಮ ಎನಿಸಲಿದೆ. ವಿಷ್ಣು ಸಹಸ್ರನಾಮ ಪಠಿಸಿ.

ಕುಂಭ(Aquarius): ಮಕ್ಕಳು, ಮನೆಯವರಿಗಾಗಿ ಅಧಿಕ ಖರ್ಚು. ಉದ್ಯೋಗದಲ್ಲಿ ಅನುಕೂಲ. ಪೋಷಕರ ಭಾವನೆಗಳನ್ನು ಗೌರವಿಸಿ, ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ. ಇದರಿಂದ ಮಾನಸಿಕ ಶಾಂತಿ ಹೆಚ್ಚುವುದು. ಹಳೆ ಸ್ನೇಹಿತರ ಅಚಾನಕ್ ಭೇಟಿ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ಮೀನ(Pisces): ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸುದಿನ. ಕೆಲಸ ತುಸು ಶ್ರಮ ಎನಿಸಿದರೂ ಕಡೆಯಲ್ಲಿ ಲಾಭವಿದೆ, ಖರ್ಚೂ ಇದೆ. ದಾಂಪತ್ಯದಲ್ಲಿ ಸಹಕಾರ. ಕೋರ್ಟ್ ಕಚೇರಿ ಕೆಲಸಗಳು ಸುಗಮವಾಗಿ ಮನಸ್ಸು ಹಗುರ. ಲೇವಾದೇವಿ ವ್ಯವಹಾರಗಳಿಂದ ಲಾಭ. ರಾಮನಾಮ ಜಪ ಮಾಡಿ. 
 

Follow Us:
Download App:
  • android
  • ios