Asianet Suvarna News Asianet Suvarna News

Daily Horoscope: ಶನಿ ಅಮಾವಾಸ್ಯೆಯ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ?

30 ಏಪ್ರಿಲ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಹಣದ ವಿಷಯವಾಗಿ ತಲೆನೋವು, ಕನ್ಯಾ ರಾಶಿಗೆ ಧನಲಾಭ

Dina Bhavishya of April 30th 2022 in Kannada SKR
Author
Bangalore, First Published Apr 30, 2022, 5:00 AM IST | Last Updated Apr 30, 2022, 7:04 AM IST

ಮೇಷ(Aries): ಮನೆಯ ಕೆಲ ವಸ್ತುಗಳು ಹಾಳಾಗಿ ಕಿರಿಕಿರಿಯಾಗಬಹುದು. ಹೊಸದನ್ನು ಕಲಿಯುವ ಮನಸ್ಥಿತಿಯಿಂದ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ತೆರೆಯುತ್ತದೆ. ಮನರಂಜನೆಗಾಗಿ ಮಾರ್ಗಗಳನ್ನು ಹುಡುಕುವಿರಿ. ಶನಿ ಚಾಲೀಸಾ ಹೇಳಿಕೊಳ್ಳಿ. 

ವೃಷಭ(Taurus): ಯಾವುದೋ ವಿಚಾರಕ್ಕೆ ಸಾಕಷ್ಟುಹಣ ಹೂಡಿಕೆ ಮಾಡುತ್ತೀರಿ. ಕೂಡಿಟ್ಟಿರುವ ಹಣ ಎಲ್ಲ ಅಲ್ಲಿ ಹೋಗಿರುವ ಕಾರಣ ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು. ಯಾವುದೇ ಅನಗತ್ಯ ಪ್ರಯಾಣವು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಮಿಥುನ(Gemini): ಹೆತ್ತವರು ಇಲ್ಲವೇ ಅತ್ತೆ ಮಾವನ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಒಂಟಿತನ, ಅಸಹಾಯಕತೆ ಕಾಡಲಿದೆ. ತಿರುಗಾಟಗಳಿಂದ ಧನವ್ಯಯ. ಸಹೋದರರ ಬೆಂಬಲ ಸಿಗುವುದು. ಹೊಸ ವಸ್ತು ಖರೀದಿಸುವಿರಿ. ಶಿವ ಶತನಾಮಾವಳಿ ಜಪಿಸಿ. 

ಕಟಕ(Cancer): ಸ್ನೇಹಿತರೊಂದಿಗೆ ಸಂಬಂಧ ಸುಧಾರಿಸುತ್ತದೆ. ವೃಥಾ ಹರಟೆ, ತಿರುಗಾಟದಿಂದ ಸಂತಸ, ನಿಮ್ಮಿಂದ ಅಪರಿಚಿತರಿಗೆ ನೆರವು ದೊರಕುವ ಅವಕಾಶಗಳು ಎದುರಾಗುತ್ತವೆ. ತಾಯಿಗೆ ಅನಾರೋಗ್ಯ ಕಾಡಬಹುದು. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ. ಆಂಜನೇಯ ಸ್ಮರಣೆ ಮಾಡಿ.

Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ

ಸಿಂಹ(Leo): ಮನೆ ಕೆಲಸಗಳಿಗೆ ಖರ್ಚು ಮಾಡುವಿರಿ. ಆಸ್ತಿ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸುವಿರಿ. ಖರ್ಚು ಹೆಚ್ಚಾದರೂ ಕೆಲಸಗಳು ಮುಂದುವರೆಯುತ್ತಿರುವ ಸಮಾಧಾನವಿರಲಿದೆ. ಕುಟುಂಬದ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ಚಪಾತಿಗೆ ಸಾಸಿವೆ ಎಣ್ಣೆ ಹಚ್ಚಿ ಕಪ್ಪು ನಾಯಿಗೆ ನೀಡಿ. 

ಕನ್ಯಾ(Virgo): ಸ್ವಂತ ವ್ಯಾಪಾರ ಮಾಡುವವರಿಗೆ ಅದ್ಭುತ ಲಾಭವಿರುತ್ತದೆ. ವಿದೇಶದ ಸಂಪರ್ಕ ಹೊಂದಿದ್ದರೆ ಹಣಕಾಸಿನ ಪ್ರಯೋಜನಗಳನ್ನು ಪಡೆಯುವಿರಿ. ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಮಾಡಿ. ತಂದೆ ತಾಯಿಯ ಅಭಿಪ್ರಾಯಗಳನ್ನು ಪ್ರಮುಖ ವಿಚಾರಗಳಲ್ಲಿ ಕೇಳಿ. ಅಶ್ವತ್ಥ ಕಟ್ಟೆಗೆ ದೀಪ ಹಚ್ಚಿ ನಮಸ್ಕರಿಸಿ. 

ತುಲಾ(Libra): ಮಾನಸಿಕ ದುಃಖ, ಸಂಕಟ, ಆರೋಗ್ಯ ಸಮಸ್ಯೆ ಉಂಟಾಗಬಹುದು. ದೇವಸ್ಥಾನಗಳಿಗೆ ಹೋಗುವುದು, ಗುರುವಿನ ಭೇಟಿ ಇತ್ಯಾದಿಯಿಂದ ಮನಸ್ಸಿಗೆ ಸಮಾಧಾನ. ತಾಯಿಯ ಮುನಿಸು ಕಠಿಣವೆನಿಸುವುದು. ಮನಸ್ಸು ಬಿಚ್ಚಿ ಮಾತನಾಡಿ. ಕಪ್ಪು ವಸ್ತು ದಾನ ಮಾಡಿ. 

Akshaya Tritiya 2022: ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?

ವೃಶ್ಚಿಕ(Scorpio): ಕೊಂಚ ಸೋಮಾರಿತನ ಕಾಡಬಹುದು. ನಕಾರಾತ್ಮಕ ಪರಿಣಾಮ ಬೀರುವಂತಹ ಪರಿಸ್ಥಿತಿಯನ್ನು ಎದುರಿಸದಿರಲು ಸಿದ್ಧರಾಗಿ. ಸರಿತಪ್ಪುಗಳನ್ನು ಪರಾಮರ್ಶಿಸಿ ಮುಂದುವರಿಯಿರಿ. ಕೋಪದ ಕೈಗೆ ಬುದ್ಧಿ ಕೊಡಬೇಡಿ.  ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಧನುಸ್ಸು(Sagittarius): ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೆಲಸ ಸರಾಗವಾಗಿ ನಡೆದು ಹೋಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ನಿರೀಕ್ಷೆಗೆ ತಕ್ಕ ಲಾಭ ಸಿಗದಿದ್ದರೂ ಸಮಾಧಾನವಿರುತ್ತದೆ. ಸಾಲ ಕೊಂಚ ಮಟ್ಟಿಗೆ ತೀರಲಿದೆ. ಕಪ್ಪು ಎಳ್ಳು, ಎಳ್ಳೆಣ್ಣೆ ದಾನ ಮಾಡಿ. 

ಮಕರ(Capricorn): ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತೀರಿ. ನಿಮ್ಮೆಲ್ಲ ಯೋಜನೆಗಳನ್ನು ಸಫಲಗೊಳಿಸುತ್ತೀರಿ. ಹಿರಿಯರ ಸಲಹೆಗಳನ್ನು ಪರಿಗಣಿಸಿ. ಅವಿವಾಹಿತರಿಗೆ ಕಂಕಣ ಬಲ. ದಾಂಪತ್ಯದಲ್ಲಿ ಹೆಚ್ಚುವ ಸಂತಸ. ಪ್ರವಾಸ ಸಾಧ್ಯತೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕುಂಭ(Aquarius): ಜೀವನಶೈಲಿಯಲ್ಲಿ ಬದಲಾವಣೆ ಕಾಣಲಿದ್ದೀರಿ. ಇದರಿಂದ ಹೆಚ್ಚು ಕಿರಿಕಿರಿ ಉಂಟಾಗಬಹುದು. ಹೊಸಬರ ಭೇಟಿಯಿಂದ ಸಂತಸವೂ, ಮುಜುಗರವೂ ಎದುರಾಗುವುದು. ಸುಸ್ತು, ತಲೆನೋವು ಕಾಡುವುದು. ಭಜರಂಗ ಬಾಣ ಹೇಳಿಕೊಳ್ಳಿ. 

Solar Eclipse 2022: ಶನಿ ಅಮಾವಾಸ್ಯೆ ದಿನ ಈ 3 ರಾಶಿಯವರು ಅಲರ್ಟ್ ಆಗಿರಿ!

ಮೀನ(Pisces): ನಿಮ್ಮ ಮಕ್ಕಳ ಕಡೆಗೆ ಭಾವನಾತ್ಮಕ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಿಸುವ ಅಗತ್ಯವಿದೆ. ಮಕ್ಕಳಲ್ಲಿ ಅಭದ್ರತೆ ಕಾಡಬಹುದು. ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ಶನಿ ಚಾಲೀಸಾ ಹೇಳಿಕೊಳ್ಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios