Asianet Suvarna News Asianet Suvarna News

Daily Horoscope: ಮಕರಕ್ಕೆ ಮರೆವಿನಿಂದ ನಷ್ಟ, ಮೇಷಕ್ಕೆ ಹೆಚ್ಚುವ ಖರ್ಚು ವೆಚ್ಚ

3 ಏಪ್ರಿಲ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗಿದೆ ಕಂಕಣ ಬಲ

Daily horoscope of April 3rd 2022 in Kannada SKR
Author
Bangalore, First Published Apr 3, 2022, 5:00 AM IST | Last Updated Apr 3, 2022, 5:00 AM IST

ಮೇಷ(Aries): ಕೆಲವೊಂದು ಸಂದರ್ಭಗಳು ದಾರಿ ತಪ್ಪಿಸುವಂತೆ ಕಂಡರೂ ಅಂತಿಮವಾಗಿ ಒಳ್ಳೆಯದೇ ಆಗುವುದು. ಆಕಸ್ಮಿಕ ಖರ್ಚು ವೆಚ್ಚಗಳು ಕಂಡುಬರುವುವು. ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗುವುವು. ಉದರ ಸಂಬಂಧಿ ಸಮಸ್ಯೆಗಳು ಬಾಧಿಸಬಹುದು. ಇಷ್ಟ ದೇವರ ಸ್ಮರಣೆ ಮಾಡಿ. 

ವೃಷಭ(Taurus): ನಿಮ್ಮ ಮನೋಕಾಮನೆಗಳು ಸಾಕಾರಗೊಳ್ಳಲು ಸಕಾಲ ಇಂದು. ಸಮಾಜಸೇವೆ ಕಾರ್ಯಗಳಲ್ಲಿ ತೊಡಗುವವರಿಗೆ ಗೌರವ ಪ್ರಾಪ್ತಿ, ಖರ್ಚಿನ ವಿಚಾರದಲ್ಲಿ ಹೆಚ್ಚಿನ ಹಿಡಿತ ಸಾಧಿಸುವತ್ತ ಗಮನ ಹರಿಸಿ. ವ್ಯವಸಾಯದಲ್ಲಿ ಉನ್ನತಿ, ಧನಲಾಭ ಇರಲಿದೆ. ಆದಿತ್ಯ ಹೃದಯ ಪಠಿಸಿ. 

ಮಿಥುನ(Gemini): ವೃಥಾ ಅಲೆದಾಟ ಇರಬಹುದು. ನೂತನ ಕಾರ್ಯಭಾರಕ್ಕೆ ಸಕಾಲ. ದಾಂಪತ್ಯ ಜೀವನದಲ್ಲಿ ತಪ್ಪು ಅಭಿಪ್ರಾಯ ಮೂಡುತ್ತಿರುವುದನ್ನು ಆರಂಭದಲ್ಲೇ ಸರಿ ಪಡಿಸಿಕೊಳ್ಳಿ. ಋಣಬಾಧೆ ಪರಿಹಾರ ಕಾಣಲಿದೆ. ಸೂರ್ಯನಿಗೆ ಅರ್ಘ್ಯ ನೀಡಿ. 

ಕಟಕ(Cancer): ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯದ ಮೇಲೆ ನಿಮ್ಮ ಯಶಸ್ಸು ಅವಲಂಬಿತವಾಗಿದೆ ಎಂಬುದನ್ನು ಮರೆಯಬೇಡಿ. ಮಕ್ಕಳ ಸಂಬಂಧಿ ಖರ್ಚುವೆಚ್ಚಗಳು ಹೆಚ್ಚಲಿವೆ. ಮನೆಯಲ್ಲಿ ಉತ್ಸಾಹದಾಯಕ ವಾತಾವರಣ ತೋರಿ ಬರಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಹೊಸ ಸಂವತ್ಸರದಲ್ಲಿ ಎಲ್ಲ ರಾಶಿಗಳ ಮೇಲೆ ಹೀಗಿದೆ Saturn Effect

ಸಿಂಹ(Leo): ಒಳ್ಳೆಯದೆಲ್ಲವೂ ನಿಮ್ಮತ್ತ ಆಕರ್ಷಿತವಾಗಿ ಬರುತ್ತಿದೆ. ಕುರುಡುತನ ತೋರಿಸಬೇಡಿ. ಕೌಟುಂಬಿಕವಾಗಿ ಸಂತೃಪ್ತಿ ಇರಲಿದೆ. ಎಲ್ಲ ಕಾರ್ಯಗಳು ತ್ವರಿತವಾಗಿ ನಡೆಯಲಿವೆ. ಮನೆಯಲ್ಲಿ ಶುಭ ಕಾರ್ಯಕ್ಕೆ ಮುನ್ನಡಿ ಇಡಲಿದ್ದೀರಿ. ಅವಿವಾಹಿತರಿಗೆ ಕಂಕಣಬಲ ಇರಲಿದೆ. ವಿಷ್ಣು ಸ್ಮರಣೆ ಮಾಡಿ. 

ಕನ್ಯಾ(Virgo): ಕಾರ್ಯಭಾರಗಳು ಹೆಚ್ಚಿದಂತೆ ಭಾಸವಾಗಬಹುದು. ಎಲ್ಲವೂ ನಿಮ್ಮ ಸಾಮರ್ಥ್ಯ ಹಿಗ್ಗಿಸುವ ಅವಕಾಶಗಳು ಎಂದು ಕಾಣಿರಿ. ಉದ್ಯೋಗಿಗಳು ತಮ್ಮ ಕೆಲಸದ ಮೇಲೆ ಎಷ್ಟೇ ಅಸಮಾಧಾನ ಇದ್ದರೂ ಸಧ್ಯ ಹೊಂದಾಣಿಕೆ ಮಾಡಿಕೊಳ್ಳುವುದೇ ಉತ್ತಮ. ಬಿಳಿ, ಹಳದಿ ಧಾನ್ಯಗಳ ದಾನ ಮಾಡಿ. 

ತುಲಾ(Libra): ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರಕ್ಕೂ ವಾದ, ಹಿತಶತ್ರುಗಳ ಪೀಡೆ, ಕಿರಿಕಿರಿ ಹೆಚ್ಚುವುದು. ಕೋಪ ಕೈ ಮೀರಿದರೆ ಬಹಳಷ್ಟು ನಷ್ಟ ಎದುರಿಸಬೇಕಾಗುವುದು. ಸಮಾಧಾನ ಚಿತ್ತರಾಗಿ ಯಾವುದಾದರೂ ಕೆಲಸಗಳಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ನೋಡಿ. ಮನೆದೇವರ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಋಣಾತ್ಮಕ ಯೋಚನೆಗಳು, ಚಿಂತೆಗಳು, ಕೋಪ, ಉದ್ವೇಗ ಹೆಚ್ಚುವುದು. ಸ್ನೇಹಿತರೊಬ್ಬರ ಸಕಾಲಿಕ ನೆರವು ಸಿಗಲಿದೆ. ಕಿರು ಸಂಚಾರ ಯೋಗವಿದೆ. ಆಪ್ತರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದುವಿರಿ. ಆರೋಗ್ಯದಲ್ಲಿ ತಲೆನೋವು, ಕತ್ತು ನೋವು ಹೆಚ್ಚಬಹುದು. ಕುಲದೇವರ ಮೊರೆ ಹೋಗಿ. 

ಶುಭಕೃತ್ ಸಂವತ್ಸರ 12 ರಾಶಿಗಳಿಗೆ ಯಾವೆಲ್ಲ ಫಲಗಳನ್ನು ತರಲಿದೆ ನೋಡಿ..

ಧನುಸ್ಸು(Sagittarius): ಕುಟುಂಬದವರ ಹಿತನುಡಿ, ಸಹವರ್ತಿಗಳ ಸಕಾಲಿಕ ಪ್ರೇರಣೆಯನ್ನು ಕಡೆಗಣಿಸಬೇಡಿ. ಅದರಿಂದ ಬಹಳ ಎತ್ತರಕ್ಕೇರಲಿರುವಿರಿ. ವಿದ್ಯಾರ್ಥಿ ವರ್ಗದವರಿಗೆ ಪ್ರಗತಿ ಇರಲಿದೆ. ಸಾಮಾಜಿಕವಾಗಿ ಗೌರವಕ್ಕೆ ಪಾತ್ರರಾಗಲಿರುವಿರಿ. ಪ್ರಾಣಿ ಪಕ್ಷಿಗಳಿಗೆ ಹೊಟ್ಟೆ ತುಂಬಿಸಿ. 

ಮಕರ(Capricorn): ಮರೆವಿನ ಕಾರಣದಿಂದ ಮಹತ್ತರವಾದುದನ್ನು ಕಳೆದುಕೊಳ್ಳಬೇಕಾಗಬಹುದು. ನಾನಾ ರೀತಿಯ ಧನಾಗಮ ಇದ್ದರೂ ಅದೇ ವೇಗದಲ್ಲಿ ಖರ್ಚು ವೆಚ್ಚ ಹೆಚ್ಚಿ ಕಂಗಾಲಾಗುವಿರಿ. ಏನೇ ಆದರೂ ಸ್ವಂತಿಕೆ ಬಿಡದೆ ಮುಂದಡಿ ಇಡಿ. ವಿಷ್ಣುವಿಗೆ ಆಲೂಗೆಡ್ಡೆ, ಗೆಣಸನ್ನು ನೀಡಿ. 

ಕುಂಭ(Aquarius): ವೃತ್ತಿ ಕಳೆದುಕೊಳ್ಳುವ ಭಯ ಆವರಿಸುವುದು. ಭವಿಷ್ಯದ ಬಗ್ಗೆ ಚಿಂತಿತರಾಗುವಿರಿ. ಸಜ್ಜನರ ಸಮಾಗಮ ಸಮಾಧಾನ ತರುವುದು. ಗೃಹಾಲಂಕಾರಕ್ಕಾಗಿ ಖರ್ಚು ಮಾಡುವಿರಿ. ಕೆಮ್ಮು, ಗಂಟಲ ಕಿರಿಕಿರಿಯಂಥ ಸಮಸ್ಯೆಗಳು ಬಾಧಿಸಲಿವೆ. ಆದಿತ್ಯ ಹೃದಯ ಪಠಣ ಮಾಡಿ. 

ನಿಮ್ಮಿಷ್ಟದ ಉದ್ಯೋಗ ಪಡೆಯಲು ಇಲ್ಲಿವೆ Astro Tips..

ಮೀನ(Pisces): ದೂರ ಸಂಚಾರದಿಂದ ಉಲ್ಲಾಸ. ಕೌಟುಂಬಿಕ ಸಮಸ್ಯೆಗಳು ಪ್ರಯತ್ನವೇ ಇಲ್ಲದೆ ಬಗೆಹರಿಯಲಿವೆ. ಬರುವ ಅವಕಾಶಗಳೆಲ್ಲವನ್ನೂ ಸದ್ಬಳಕೆ ಮಾಡಿಕೊಳ್ಳಿ. ಅವು ನಿಮ್ಮನ್ನು ಸಾಕಷ್ಟು ದೂರ ತೆಗೆದುಕೊಂಡು ಹೋಗುತ್ತವೆ ಎಂಬುದನ್ನು ಮರೆಯಬೇಡಿ. ಬಡವರಿಗೆ ಕೈಲಾದ ಸಹಾಯ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios