ದಿನ ಭವಿಷ್ಯ: ಈ ರಾಶಿಯವರು ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ!
28 ಜುಲೈ 2020 ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಸಂಗಾತಿಯಿಂದ ಸಮಾಧಾನದ ಮಾತುಗಳು, ವಸ್ತು ನಷ್ಟ, ಪೇಚಾಡುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ
ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ವಸ್ತು ಪ್ರಾಪ್ತಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ
ಮಿಥುನ - ಭದ್ರಯೋಗ, ಹಂಸ ಯೋಗದ ಫಲಗಳಿಂದ ಅನುಕೂಲ, ಉತ್ತಮ ಫಲಗಳನ್ನು ಕಾಣುತ್ತೀರಿ ನಾಗ ಪ್ರಾರ್ಥನೆ ಮಾಡಿ
ಕಟಕ - ಕೃಷಿಕರಿಗೆ, ಹೈನುಗಾರಿಕೆಯವರಿಗೆ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಅಜೀರ್ಣತೆ ಕಾಡಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!
ಸಿಂಹ - ಸಹೋದರರಿಂದ ಸಹಕಾರ, ಧನ ಸಮೃದ್ಧಿ, ಮಾತಿಗೆ ಮಾನ್ಯತೆ ಸಿಗಲಿದೆ, ಪ್ರಯಾಣದಲ್ಲಿ ತೊಂದರೆ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ಕನ್ಯಾ - ಸ್ತ್ರೀಯರಿಂದ ಧನಲಾಭ,ಸ್ತ್ರೀಯರಿಂದ ಸಹಕಾರ, ಉತ್ತಮ ಫಲಗಳಿದ್ದಾವೆ, ಪಿತೃದೇವತೆಗಳ ಆರಾಧನೆ ಮಾಡಿ
ತುಲಾ - ಸ್ತ್ರೀಯರ ಕೆಲಸಕ್ಕೆ ಪ್ರಾಶಸ್ತ್ಯ, ಹಣಕಾಸಿನಲ್ಲಿ ಕೊಂಚ ತೊಂದರೆ, ಮಾತು ಒರಟಾಗಲಿದೆ, ಲಲಿತಾ ಪ್ರಾರ್ಥನೆ ಮಾಡಿ
ವೃಶ್ಚಿಕ - ಆರೋಗ್ಯದಲ್ಲಿ ವ್ಯತ್ಯಾಸ, ಬೋಧಕರಿಗೆ ಉತ್ತಮ ದಿನ, ಆತಂಕ ಬೇಡ, ಆದಿತ್ಯ ಹೃದಯ ಪಠಿಸಿ
ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?
ಧನುಸ್ಸು - ಉತ್ತಮ ಲಾಭ, ಕೃಷಿಕರಿಗೆ ಅನುಕೂಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಕರ - ಶುಭಲಾಭ, ವೃದ್ಧರಿಗೆ ಅನುಕೂಲದ ದಿನ, ಸಂಗಾತಿಯ ಸಹಕಾರ, ಹುರುಳಿ-ಉದ್ದು ಧಾನ್ಯ ದಾನ ಮಾಡಿ
ಕುಂಭ - ಮನೆಯಲ್ಲಿ ಘರ್ಷಣೆ, ಬೆಂಕಿಯಿಂದ ದೂರವಿರಿ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ದೇಹದಲ್ಲಿ ತರಚುವ ಸಾಧ್ಯತೆ ಇದೆ, ಉಳಿದಂತೆ ಅನುಕೂಲದ ವಾತಾವರಣ ಇದೆ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ