Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಭಯದ ವಾತಾವರಣ ಇರಲಿದೆ!

24 ಸಪ್ಟೆಂಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 24 September 2020 in kannada pod
Author
Bangalore, First Published Sep 24, 2020, 7:05 AM IST

ಮೇಷ - ಹಣಕಾಸಿನಲ್ಲಿ ವ್ಯತ್ಯಾಸ, ಮಾತಿನಲ್ಲಿ ಹಿಡಿತವಿರಲಿ, ಸಮೃದ್ಧಿ ಯೋಗ ಇರಲಿದೆ, ಗುರುಹಿರಿಯರ ಮಾರ್ಗದರ್ಶನ ಪಡೆಯಿರಿ, ಕೃಷ್ಣನಿಗೆ ತುಳಸಿ ಸಮರ್ಪಿಸಿ

ವೃಷಭ - ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ದಾಂಪತ್ಯ ಭಾವದಲ್ಲಿ ಏರುಪೇರು, ಕಳೆದ ವಸ್ತು ಸಿಗಲಿದೆ, ದುರ್ಗಾ ದೇವಸ್ಥಾನಕ್ಕೆ ಗರಿಕೆ ಸಮರ್ಪಿಸಿ

ಮಿಥುನ - ಹಣಕಾಸಿನ ಸಮೃದ್ಧಿ, ಮಾತಿನಿಂದ ಕಾರ್ಯ ಸಾಧನೆ, ಬೋಧನಾರಂಗದಲ್ಲಿರುವವರಿಗೆ ಉತ್ತಮ ಫಲ, ವ್ಯಾಪಾರಿಗಳಿಗೆ ಲಾಭ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸಮೃದ್ಧಿಯ ಫಲ, ರೋಗ ನಿವಾರಣೆ, ದೇಹದಲ್ಲಿ ಸದೃಢತೆ, ಸಹೋದರರ ಬಂಧುಗಳ ಸಹಕಾರ ಇರಲಿದೆ, ಅಮ್ಮನವರ ದೇವಸ್ಥಾನಕ್ಕೆ ಕ್ಷೀರಾಭಿಷೇಕ ಮಾಡಿಸಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಸಹೋದರರಿಂದ ಅನುಕೂಲ, ಮಕ್ಕಳಿಗೆ ವಿಶೇಷ ಸ್ಥಾನ, ಸ್ತ್ರೀಯರು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಸ್ವಂತ ಉದ್ಯೋಗಿಗಳಿಗೆ ಹಣ ಸಮೃದ್ಧಿ, ಗಂಟಲಿನಲ್ಲಿ ಕಿರಿಕಿರಿ, ಭಯದ ವಾತಾವರಣ ಇರಲಿದೆ, ಕೃಷಿಕರಿಗೆ ಹೋಟೆಲ್ ಉದ್ದಿಮೆಯವರಿಗೆ ಅನುಕೂಲ, ದುರ್ಗಾ ಕವಚ ಪಠಿಸಿ

ತುಲಾ - ಕೆಲಸದಲ್ಲಿ ಸಹೋದರರ ಸಹಕಾರ, ಹಣಕಾಸಿಗೆ ಪರದಾಟ, ಮಾತು ಕಠಿಣವಾಗುತ್ತದೆ, ಜಾಗ್ರತೆ ಇರಲಿ, ಶನೈಶ್ಚರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಬೇಸರ, ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು - ಸ್ವಂತ ವ್ಯಾಪಾರಿಗಳಿಗೆ ಉತ್ತಮ ಫಲ, ರಾಜಕೀಯ, ಸರ್ಕಾರಿ ನೌಕರಿಯಲ್ಲಿರುವವರಿಗೆ ಉತ್ತಮ ಫಲ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭದಿನ, ಮನಸ್ಸಿಗೆ ಬೇಸರ, ಆಹಾರದ ಬಗ್ಗೆ ಗಮನವಿರಲಿ, ಆರೋಗ್ಯದ ಕಡೆ ಗಮನವಿರಲಿ, ದತ್ತ ಪ್ರಾರ್ಥನೆ ಮಾಡಿ

ಕುಂಭ - ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ, ಲಾಭವೂ ಇದೆ, ಅಕ್ಕ-ಅಣ್ಣಂದಿರಿಂದ ನೆರವು, ಗಣಪತಿಗೆ ಕೆಂಪು ಚಂದನ ಲೇಪಿಸಿ

ಮೀನ - ವಿಶೇಷ ಫಲ ಇದೆ, ಮಾತಿಗೆ ಮನ್ನಣೆ ಸಿಗಲಿದೆ, ಶುಭದಿನ, ಗಣಪತಿ ಪ್ರಾರ್ಥನೆ ಮಾಡಿ
 

Follow Us:
Download App:
  • android
  • ios