ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ!
22 ಜುಲೈ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ದಾಂಪತ್ಯ ಭಾವದಲ್ಲಿ ಏರುಪೇರು, ಮಿತ್ರರಲ್ಲಿ ಅಪನಂಬಿಕೆ, ವ್ಯಾಪಾರದಲ್ಲಿ ಮೋಸ, ಅಮ್ಮನವರ ಪ್ರಾರ್ಥನೆ ಮಾಡಿ
ವೃಷಭ - ಶುಭ ಫಲಗಳಿದ್ದಾವೆ, ಬಂಧುಗಳ ಸಹಕಾರ, ಅನುಕೂಲದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ
ಮಿಥುನ - ಸಹೋದರರಿಂದ ಸಹಕಾರ, ಮಕ್ಕಳ ವಿಷಯವಾಗಿ ಕಲಹ, ಬುದ್ಧಿ ಮಂಕಾಗಲಿದೆ, ಹರಿಹರರ ಪ್ರಾರ್ಥನೆ ಮಾಡಿ
ಕಟಕ - ತಂದೆಯಿಂದ ಸಹಕಾರ, ಕೃಷಿಕರಿಗೆ ಹಿನ್ನಡೆ, ಮಿಶ್ರಫಲವಾಗಿದೆ, ಜಲದುರ್ಗೆಯ ಪ್ರಾರ್ಥನೆ ಮಾಡಿ
ಸಿಂಹ - ಆರೋಗ್ಯದ ಕಡೆ ಗಮನಕೊಡಿ, ಸಹೋದರರಿಂದ ಕಿರಿಕಿರಿ, ಅಂಜಿಕೆ ಕಾಡಲಿದೆ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ
ಕನ್ಯಾ - ಹಣಕಾಸಿನ ವಿಚಾರಲ್ಲಿ ಕ್ಲಿಷ್ಟತೆ, ಸಹಕಾರವೂ ಸಿಗಲಿದೆ, ಆತಂಕ ಬೇಡ, ಬುದ್ಧಿ ಶಕ್ತಿಯಿಂದ ಕಾರ್ಯ ಸಾಧನೆ, ಮನೆ ದೇವರ ಪ್ರಾರ್ಥನೆ ಮಾಡಿ
ತುಲಾ - ಆರೋಗ್ಯದ ಕಡೆ ಗಮನವಿರಲಿ, ಧೈರ್ಯದ ದಿನ, ಸ್ತ್ರೀಯರಿಗೆ ಅನುಕೂಲದ ದಿನ, ಪಿತೃದೇವತೆಗಳ ಪ್ರಾರ್ಥನೆ ಮಾಡಿ
ವೃಶ್ಚಿಕ - ಭಾಗ್ಯ ಸಮೃದ್ಧಿ, ಧರ್ಮ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಶುಭಫಲ, ಕುಜ ಪ್ರಾರ್ಥನೆ ಮಾಡಿ
ಧನುಸ್ಸು - ತಂದೆ - ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಹಿರಿಯರ ಸಲಹೆ ಪಡೆಯಿರಿ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಕರ - ಆತಂಕ ಬೇಡ, ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಲಿದೆ, ಸೂರ್ಯ ಕವಚ ಅಥವಾ ಶಿವ ಕವಚ ಪಠಿಸಿ
ಕುಂಭ - ಪೂಜಾಕಾರ್ಯಗಳಲ್ಲಿ ಆಸಕ್ತಿ, ವಾಹನ - ವಸ್ತ್ರಗಳ ಅನುಕೂಲ, ಹಣಕಾಸು-ಮಾತಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಹಿರಿಯರು ಎಚ್ಚರವಾಗಿರಬೇಕು, ಬಂಧುಗಳಿಂದ ಸಹಕಾರವಿದೆ, ಮಕ್ಕಳ ಸಹಕಾರ, ಶಿವ ಕವಚ ಪಠಿಸಿ