ದಿನ ಭವಿಷ್ಯ: ಈ ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ, ಕೃಷಿಯಲ್ಲಿ ಲಾಭ!
17 ಫೆಬ್ರವರಿ 2021 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಅನುಕೂಲದ ದಿನ, ಸಂಗಾತಿ, ತಾಯಿಯಿಂದ ಸಹಕಾರ, ಕೃಷಿ ಸಮೃದ್ಧಿ, ಕುಲದೇವತಾರಾಧನೆ ಮಾಡಿ
ವೃಷಭ - ಸ್ತ್ರೀಯರಿಗೆ ಧನ ಸಮೃದ್ಧಿ, ಸಹೋದರರ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ವಸ್ತು ನಷ್ಟವಾಗುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ
ಮಿಥುನ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮಕ್ಕಳಿಂದ ಸಹಕಾರ ಇರಲಿದೆ, ನೆಮ್ಮದಿಯ ದಿನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ಕಟಕ - ಮನಸ್ಸಿಗೆ ನೆಮ್ಮದಿ, ಕೃಷಿಯಲ್ಲಿ ಲಾಭ, ತಾಯಿಯಿಂದ ಅನುಕೂಲ, ದುರ್ಗಾ ದೇವಿಗೆ ಕ್ಷೀರ ದಾನ ಮಾಡಿ
ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!
ಸಿಂಹ - ಸಂಗಾತಿಯಿಂದ ಖರ್ಚು, ದೇಹಾಯಾಸ, ಮಾನಸಿಕವಾಗಿ ಕುಗ್ಗುತ್ತೀರಿ, ಚಂದ್ರನ ಉಪಾಸನೆ ಮಾಡಿ
ಕನ್ಯಾ - ಶುಭಫಲ ವೃದ್ಧಿಸಲಿದೆ, ಉದ್ಯೋಗಿಗಳಿಗೆ ಅನುಕೂಲದ ದಿನ, ಮನೆಯಲ್ಲಿ ನೆಮ್ಮದಿಯ ದಿನ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ತುಲಾ - ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ, ಸಹೋದರರಿಂದ ಸಹಕಾರ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಈಶ್ವರ ಪ್ರಾರ್ಥನೆ ಮಾಡಿ
ವೃಶ್ಚಿಕ - ಸಮಾಧಾನದ ದಿನ, ತಾಯಿಯಿಂದ ಸಹಕಾರ, ನೀರಿನ ವ್ಯಾಪಾರಿಗಳಿಗೆ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ
ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !
ಧನುಸ್ಸು - ಅಜೀರ್ಣತೆ, ಮಕ್ಕಳಿಂದ ಮಾನಸಿಕ ಕುಗ್ಗುವಿಕೆ, ಅಮ್ಮನವರ ಪ್ರಾರ್ಥನೆ ಮಾಡಿ
ಮಕರ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಆತಂಕ ಬೇಡ, ಚಂದ್ರ ಪ್ರಾರ್ಥನೆಯಿಂದ ಸಮಾಧಾನ
ಕುಂಭ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಂಜಿಕೆ, ಸ್ತ್ರೀಯರಿಗೆ ಆತಂಕ, ದಾಂಪತ್ಯದಲ್ಲಿ ವ್ಯತ್ಯಾಸ, ಚಂದ್ರ ಪ್ರಾರ್ಥನೆ ಮಾಡಿ
ಮೀನ - ಆಹಾರದಲ್ಲಿ ವ್ಯತ್ಯಾಸ, ಸುಲಲಿತ ದಿನ, ಶುಭಫಲವಿದೆ, ಸ್ತ್ರೀಯರು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ