Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಅಧೈರ್ಯ, ಅಂಜಿಕೆ ಉಂಟಾಗಲಿದೆ, ಸುಖಕ್ಕೆ ಕತ್ತರಿ ಬೀಳಲಿದೆ!

12 ಏಪ್ರಿಲ್ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 12 April 2021 in kannada pod
Author
Bangalore, First Published Apr 12, 2021, 7:06 AM IST

ಮೇಷ - ಮಾನಸಿಕ ನೋವು, ಸ್ತ್ರೀಯರಿಂದ ಬೇಸರ, ಮಾತಿನಿಂದ ಶುಭಫಲ, ಮಿಶ್ರಫಲವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಭಾಗ್ಯ ನಷ್ಟ, ಆತಂಕ ಬೇಡ, ಶಿವಶಕ್ತಿಯರ ಪ್ರಾರ್ಥನೆಯಿಂದ ಅನುಕೂಲ

ಮಿಥುನ - ಆತಂಕ ಬೇಡ ಕೊಂಚ ನಷ್ಟ ಫಲಗಳಿದ್ದಾವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ದಂಪತಿಯಲ್ಲಿ ಬೇಸರ, ಆರೋಗ್ಯದ ಕಡೆ ಗಮನಕೊಡಿ, ಅಮ್ಮನವರ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಅನುಕೂಲದ ವಾತಾವರಣ, ಶುಭಫಲಗಳಿವೆ, ಹಣಕಾಸಿನ ವಿಚಾರದಲ್ಲಿ ಕೊಂಚ ಪೇಚಾಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ -  ದೇಹದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ವಿಶೇಷ ಫಲಗಳಿದ್ದಾವೆ, ಕಾರ್ಯ ಸಾಧನೆ, ದುರ್ಜನರ ಸಹವಾಸದಿಂದ ದೂರವಿರಿ, ಈಶ್ವರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

 

ಧನುಸ್ಸು - ಮಾನಸಿಕವಾಗಿ ಕುಗ್ಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರವಿರಲಿ, ನವಗ್ರಹ ಸ್ತೋತ್ರ ಮಾಡಿ

ಮಕರ - ಅಧೈರ್ಯ, ಅಂಜಿಕೆ ಉಂಟಾಗಲಿದೆ, ಸುಖಕ್ಕೆ ಕತ್ತರಿ ಬೀಳಲಿದೆ, ಸಮಾಧಾನ ಸಿದ್ಧಿಗೆ ದುರ್ಗಾ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ, ನೀರಿನಿಂದ ಆರೋಗ್ಯ ಹಾಳಾಗಲಿದೆ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಸಂಜೀವಿನಿ ಯಂತ್ರ ಧಾರಣೆ ಮಾಡಿ

ಮೀನ - ತುಂಬ ಎಚ್ಚರಿಕೆಯಿಂದ ಇರಬೇಕಾದ ದಿನ, ತಂದೆ-ಮಕ್ಕಳಲ್ಲಿ ವೈಮನಸ್ಸು ಮೂಡಲಿದೆ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

Follow Us:
Download App:
  • android
  • ios