Asianet Suvarna News Asianet Suvarna News

ಈ ರಾಶಿಗೆ ದಿನಾಂತ್ಯಕ್ಕೆ ಶುಭವೊಂದು ಕಾದಿದೆ

ನಿಮ್ಮ ದಿನವು ಹೇಗಿರುತ್ತೆ..? ಇಂದು ನಿಮಗೆ ಯಾವ ಶುಭ ಫಲ ಕಾದಿದೆ. ಏನು ಮಾಡಿದರೆ ಒಳಿತು..?

Daily Bhavishya 2 March 2019
Author
Bengaluru, First Published Mar 2, 2019, 7:09 AM IST

ಮೇಷ : ಶಾಂತ ಮನಸ್ಸಿನಿಂದ ಕೆಲಸಗಳು ಹೆಚ್ಚು ಯಶ ಕಾಣುತ್ತವೆ. ಹಾಗಾಗಿ ಬೆಳಗ್ಗೆಯೇ ಶಾಂತಚಿತ್ತದಿಂದ ಇರಿ

ವೃಷಭ : ನೀವು ಇರುವ ಸ್ಥಳದ ಬಗ್ಗೆ ನಿಮಗೆ ಅರಿವು ಇರಲಿ. ಹೆಚ್ಚು ಮಾತನಾಡುವುದು ಬೇಡ, ಸಲ್ಲದ ವಿಚಾರಗಳನ್ನು ಮನಸ್ಸಿನಿಂದ ತೆಗೆಯಿರಿ

ಮಿಥುನ :ಸ್ವಾರ್ಥಿಗಳ  ಸಂಗಡದಿಂದ ದೂರವಾಗಿರಿ, ನಿಮ್ಮ ಎಲ್ಲಾ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದು ಬೇಡ. 

ಕಟಕ : ಸ್ನೇಹಿತರ ಹೊಸ ಕೆಲಸಗಳಿಗೆ ನೀವು ನೆರವು ನೀಡಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಾ ಬನ್ನಿ

ಸಿಂಹ :  ಅತಿಯಾದ ಹೊಗಳಿಕೆಯ ಮಾತುಗಳಿಗೆ ಕಿವಿಯಾಗದಿರಿ. ಧೈರ್ಯದಿಂದ ಹೊಸ ನಿರ್ಧಾರ ಕೈಗೊಳ್ಳುವಿರಿ

ಕನ್ಯಾ : ನಿಮ್ಮಲ್ಲಿರುವ ಒಳ್ಳೆಯ ಚಿಂತನೆಯಿಂದ  ದಿನಾಂತ್ಯಕ್ಕೆ ಒಳ್ಳೆಯ ಕಾರ್ಯವೂ ಆಗಲಿದೆ. ಕೆಡುಕು ಮಾಡುವವರು ಕಡಿಮೆಯಾಗಲಿದ್ದಾರೆ. 

ತುಲಾ : ದಿನವಿಡಿ ನಗುವಿನಿಂದ ಇರುವಿರಿ, ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಿ.

ವರಶ್ಚಿಕ : ಎಲ್ಲಾ ಕಡೆಗಳನ್ನೂ ದೇವರನ್ನು ಹುಡುಕಿ ಹೊರಡದಿರಿ.  ಮಾಡುವ ಕೆಲಸದಲ್ಲೇ ಅವನು ನಿಮಗೆ ಸಿಗುತ್ತಾನೆ. 

ಧನಸ್ಸು : ದೂರುಗಳಿಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಆಡಿಕೊಳ್ಳುವವರ ಮುಂದೆ ಬೆಳೆದು ನಿಲ್ಲುತ್ತೇನೆ ಎನ್ನುವ ಸಂಕಲ್ಪ ಮಾಡಿ

ಮಕರ : ಆತುರದ ಕೈಗೆ ಬುದ್ದಿ ಕೊಡದಿರಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದರಿಂದ ನಿಮಗೂ ಎಲ್ಲರಿಂದ ಪ್ರೀತಿ ದೊರೆಯುತ್ತದೆ

ಕುಂಭ : ಪ್ರಸ್ತುತ ರಾಜಕಾರಣದ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಶಕ್ತಿಗೆ ತಕ್ಕಂತ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಿರಿ.

ಮೀನ : ಮತ್ತೊಬ್ಬರ ಬಗ್ಗೆ ಚಿಂತೆ ಬೇಡ. ನಿಮ್ಮ ಕೆಲಸದಲ್ಲಿ ನಿರತರಾಗಿ 

Follow Us:
Download App:
  • android
  • ios