Asianet Suvarna News Asianet Suvarna News

ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ

ಮಹಿಳೆಯೊಬ್ಬಳ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಂದ ದುಷ್ಕರ್ಮಿಗಳು| ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದಲ್ಲಿ ನಡೆದ ಘಟನೆ| ಹತ್ಯೆಯಲ್ಲಿ ಮೃತಳ ಪತಿ ಮತ್ತು ಆತನ ಸ್ನೇಹಿತನ ಪಾತ್ರವಿರುವ ಬಗ್ಗೆ ಪೊಲೀಸರ ಶಂಕೆ|  

Woman Murder in Bengaluru
Author
Bengaluru, First Published Aug 14, 2020, 8:20 AM IST

ಬೆಂಗಳೂರು(ಆ.14): ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಂದಿರುವ ಘಟನೆ ಜೆ.ಪಿ.ನಗರದ 6ನೇ ಹಂತದಲ್ಲಿ ನಡೆದಿದೆ.

ತಲಘಟ್ಟಪುರ ನಿವಾಸಿ ಚಂದ್ರಕಲಾ ಕೊಲೆಯಾದ ದುರ್ದೈವಿ. ಈ ಹತ್ಯೆಯಲ್ಲಿ ಮೃತಳ ಪತಿ ಮತ್ತು ಆತನ ಸ್ನೇಹಿತನ ಪಾತ್ರವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಜೆ.ಪಿ.ನಗರದ ರಸ್ತೆ ಬದಿಯಲ್ಲಿ ಚಂದ್ರಕಲಾ ಮೇಲೆ ಬುಧವಾರ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೂಡಲೇ ಗಾಯಾಳು ರಕ್ಷಣೆಗೆ ಧಾವಿಸಿದ ಸ್ಥಳೀಯರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಚಂದ್ರಕಲಾ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮಾತೀರದ ರೌಡಿ ಹತ್ಯೆ; ಜೊತೆಗಿದ್ದವರೇ ದುಶ್ಮನ್‌ಗಳಾದ್ರಾ?

ತಲಘಟ್ಟಪುರದಲ್ಲಿ ನೆಲೆಸಿದ್ದ ಚಂದ್ರಕಲಾ, ಮನೆಗೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಳು. ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಕಲಾ ಮೇಲೆ ಹಲ್ಲೆ ನಡೆಸಿ ಮೃತಳ ಪತಿ ಕೊಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios