Asianet Suvarna News Asianet Suvarna News

ರಾಮನಗರ: ಪಿಎಸ್‌ಐನಿಂದ ಕಿರುಕುಳ, ಮಹಿಳೆ ಆತ್ಮಹತ್ಯೆಗೆ ಯತ್ನ

ಉದ್ದೇಶ ಪೂರ್ವಕವಾಗಿ, ದ್ವೇಷದಿಂದ ನನ್ನ ಪತಿಯನ್ನ ಬಂಧಿಸಿದ್ದಾರೆಂದು ಪತ್ನಿ ಆರೋಪಿಸಿದ್ದರು. ನನ್ನ ಗಂಡನಿಗೆ ಪಿಎಸ್ಐ ತನ್ವೀರ್ ಟಾರ್ಗೆಟ್ ಮಾಡಿದ್ದಾರೆ. ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲ, ದ್ವೇಷದಿಂದ ಅವರನ್ನ ಬಂಧಿಸಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ 

woman attempted to self death for harassment by psi in ramanagara grg
Author
First Published Jul 24, 2024, 11:27 PM IST | Last Updated Jul 25, 2024, 9:42 AM IST

ರಾಮನಗರ(ಜು.24):  ಪಿಎಸ್‌ಐ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಐಜೂರಿನಲ್ಲಿ ಇಂದು(ಬುಧವಾರ) ನಡೆದಿದೆ. ಐಜೂರು ಪಿಎಸ್ಐ ತನ್ವೀರ್ ಹುಸೇನ್ ಮೇಲೆ ಕಿರುಕುಳದ ಆರೋಪ ಕೇಳಿ ಬಂದಿದೆ. 

ಡೆತ್ ನೋಟ್ ಬರೆದಿಟ್ಟು, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರಾಧಾ(ಹೆಸರು ಬದಲಾಯಿಸಲಾಗಿದೆ). ನಿರೀಕ್ಷಣಾ ಜಾಮೀನಿನ ಮೇಲಿದ್ದ ಮಹಾಲಿಂಗು ಎಂಬಾತನನ್ನ ಐಜೂರು ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಠಾಣೆಗೆ ಜಾಮೀನು ಪತ್ರ ನೀಡಿಲ್ಲವೆಂದು ಆರೋಪಿಸಿ ಮಹಾಲಿಂಗುನನ್ನ ಪೊಲೀಸರು ಬಂಧಿಸಿದ್ದರು.

ಹಾಸನ: ಅರಸೀಕೆರೆಯಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!

ಉದ್ದೇಶ ಪೂರ್ವಕವಾಗಿ, ದ್ವೇಷದಿಂದ ನನ್ನ ಪತಿಯನ್ನ ಬಂಧಿಸಿದ್ದಾರೆಂದು ಪತ್ನಿ ಆರೋಪಿಸಿದ್ದರು. ನನ್ನ ಗಂಡನಿಗೆ ಪಿಎಸ್ಐ ತನ್ವೀರ್ ಟಾರ್ಗೆಟ್ ಮಾಡಿದ್ದಾರೆ. ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲ, ದ್ವೇಷದಿಂದ ಅವರನ್ನ ಬಂಧಿಸಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಹಿಳೆಗೆ ರಾಮನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Latest Videos
Follow Us:
Download App:
  • android
  • ios