ಚಾಮರಾಜನಗರ ಸಮೀಪ‌ ತಮಿಳುನಾಡಿನ ಟಿಟಿ‌ ಪಲ್ಟಿ: ಮೂವರು ಸಾವು, 14 ಮಂದಿಗೆ ಗಾಯ

ಚಾಮರಾಜನಗರ(ಜ.08): ತಮಿಳುನಾಡಿನ‌‌ ತಿರುಪೂರಿನಿಂದ ಮೈಸೂರಿನ‌ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದ ಟೆಂಪೋ‌ ಟ್ರಾವೆಲ್ಲರ್ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪ ಗುಡಿಬೋರೆ ಎಂಬಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಪತಿ ಸುಬ್ರಮಣ್ಯ (65), ಪತ್ನಿ ಅಮರವತಿ (55) ಹಾಗೂ ಈಕೆಯ ಮಗಳು ಸಾವನ್ನಪ್ಪಿದ ದುರ್ದೈವಿಗಳಾಗಿದ್ದು 4 ಮಕ್ಕಳು ಸೇರಿದಂತೆ 14 ಮಂದಿ ಗಾಯಗೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ 8 ವಲಯಗಳ 8 ಕಡೆ ಡ್ರೈರನ್

ಘಟನೆ ಬೆಳಗಿನ ಜಾವ 4 ರ ಸುಮಾರಿಗೆ ನಡೆದಿದೆ. ದೇವರ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಇಡೀ ಕುಟುಂಬ ಬರುತ್ತಿತ್ತು ಎನ್ನಲಾಗಿದ್ದು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.