Bengaluru Crime News: ಹಣದಾಸೆಗೆ ಗರ್ಭಿಣಿ ಹಸು ಹತ್ಯೆ: ಇಬ್ಬರ ಬಂಧನ
ಹೆಣ್ಣೂರು ಗುಂಡು ತೋಪಿನ ಬಳಿ ಆರೋಪಿಗಳು ಮನೆ ಬಳಿ ಕಟ್ಟಿ ಹಾಕಿದ್ದ ಹಸು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಬಳಿ ಹತ್ಯೆ ಮಾಡಿದ್ದ ಗರ್ಭಿಣಿ ಹಸು, ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಾಲಾಗಿದೆ
ವರದಿ: ಕಿರಣ್.ಕೆ.ಎನ್, ಬೆಂಗಳೂರು
ಬೆಂಗಳೂರು (ಜೂ. 11): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ ಮಾಡಿರುವ ಅಮಾನವೀಯ ಕೃತ್ಯ ನಡೆದಿದೆ. ಹಸು ಕದ್ದು ಹತ್ಯೆ (Cow Theft) ಮಾಡಿದ ಇಬ್ಬರು ಆರೋಪಿಗಳನ್ನು ಹೆಣ್ಣುರು ಪೋಲಿಸರು (Hennur Police) ಬಂಧಿಸಿದ್ದಾರೆ. ಬರ್ಕತ್, ಮೊಹಮದ್ ಇಮ್ರಾನ್ ಪಾಷಾ - ಇಬ್ಬರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸುಹೈಲ್ ಪರಾರಿಯಗಿದ್ದಾನೆ.
ಜೂನ್ 6ರಂದು ಹೆಚ್ಬಿಆರ್ ಲೇಔಟಿನಲ್ಲಿ ಬೆಳಗಿನ ಜಾವ ಪೊಲೀಸರು ಗಸ್ತಿನಲ್ಲಿದ್ದರು. ಈ ವೇಳೆ ಆಟೋದಲ್ಲಿ ಅನುಮಾನಸ್ಪದವಾಗಿ ಮೂವರು ವ್ಯಕ್ತಿಗಳು ಹೋಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಆಟೋ ನಿಲ್ಲಿಸುವಂತೆ ಸೂಚಿಸಿದಾಗ, ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ಚೇಸ್ ಮಾಡಿ ಬೀಟ್ ಪೊಲೀಸರು ಆಟೋ ನಿಲ್ಲಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಹಸು ಕಳ್ಳತನ ಬೆಳಕಿಗೆ ಬಂದಿದೆ.
ಹೆಣ್ಣೂರು ಗುಂಡು ತೋಪಿನ ಬಳಿ ಆರೋಪಿಗಳು ಮನೆ ಬಳಿ ಕಟ್ಟಿ ಹಾಕಿದ್ದ ಹಸು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಬಳಿ ಹತ್ಯೆ ಮಾಡಿದ್ದ ಗರ್ಭಿಣಿ ಹಸು, ಚರ್ಮ ಹಾಗೂ ಅದರ ಕರುವಿನ ಮೃತದೇಹ ವಶಕ್ಕೆ ಪಡೆಯಾಲಾಗಿದೆ. ಹಸು ಹತ್ಯೆ ಮಾಡಿ ಆರೋಪಿಗಳು ಮಾಂಸದ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೀಟ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಘಟನೆ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (Crime News) ದಾಖಲಾಗಿದೆ. ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ, ಆಟೋ ಜಪ್ತಿ ಮಾಡಿದ್ದಾರೆ. ಪೊಲೀಸ್ ತನಿಖೆ ಮುಂದುವರೆದಿದ್ದು ಮತ್ತೊಬ್ಬ ಆರೋಪಿ ಸುಹೈಲ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಅತ್ಯಾಚಾರ, ಚಾಕು ತೋರಿಸಿ ಕುಕೃತ್ಯವೆಸಗಿದ ಕಾಮುಕ!
ಇದನ್ನೂ ಓದಿ: ಸಾಲ ತೀರಿಸಲು ಮೊಮ್ಮಗನನ್ನೇ ಮಾರಿದ ಅಜ್ಜ!