Asianet Suvarna News Asianet Suvarna News

ರಾಯ​ಚೂರು: ಹಣ​ಕ್ಕಾಗಿ ತಂದೆಯನ್ನೇ ಕೊಂದು ರಸ್ತೆ ಪಕ್ಕ ಹೂತಿಟ್ಟ ಪಾಪಿ ಮಗ..!

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣ ತಡ​ವಾಗಿ ಬೆಳ​ಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವ​ನಪ್ಪ ಹತ್ಯೆಯಾದ ತಂದೆ​. ಈತನ ಮಗ ಈರ​ಣ್ಣ ಎಂಬಾತ ಕೊಲೆಗಾರ.

Son Killed His Father for Money in Raichur grg
Author
First Published Jul 20, 2023, 12:30 AM IST

ರಾಯ​ಚೂರು(ಜು.20): ಭೂಸ್ವಾಧೀನ ಪರಿ​ಹಾರದ ಹಣ​ಕ್ಕಾಗಿ ಮಗ​ನೇ ತಂದೆ​ಯನ್ನು ಕೊಲೆ ಮಾಡಿ, ಮೃತದೇಹವನ್ನು ಗುಟ್ಟಾಗಿ ಹೂತಿಟ್ಟ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ತಡ​ವಾಗಿ ಬೆಳ​ಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವ​ನಪ್ಪ (70) ಹತ್ಯೆಯಾದ ದುರ್ದೈವಿ ತಂದೆ​. ಈತನ ಮಗ ಈರ​ಣ್ಣ ಎಂಬಾತ ಕೊಲೆಗಾರ.

ಭಾರತ್‌ ಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಇವರು ತಮ್ಮ ಜಮೀನು ನೀಡಿದ್ದರು. ಇದರಿಂದ ಬಂದ ಪರಿ​ಹಾ​ರದ ಹಣ​ಕ್ಕಾಗಿ ತಂದೆ ಹಾಗೂ ಮಗನ ನಡುವೆ 15 ದಿನಗಳ ಹಿಂದೆ ಗಲಾ​ಟೆ​ಯಾ​ಗಿತ್ತು. ಈ ವೇಳೆ, ಕೋಪ​ಗೊಂಡ ಈರಣ್ಣ, ತಂದೆ ತಲೆಗೆ ಕಬ್ಬಿ​ಣ​ದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದ. ನಂತರ, ಯಾರಿಗೂ ಅನು​ಮಾನ ಬಾರ​ದಂತೆ ಶವ​ವನ್ನು ಹೆದ್ದಾರಿ ಪಕ್ಕದ ಮಣ್ಣಲ್ಲಿ ಹೂತಿ​ಟ್ಟಿದ್ದ. ನಂತರ, ಮನೆಗೆ ಬಂದು ತಂದೆ ಕಾಣೆಯಾಗಿದ್ದಾನೆ ಎಂಬ ನಾಟಕವಾಡಿದ್ದ. ತಾಯಿ ಜೊತೆ ತಾನೇ ಪೊಲೀಸ್‌ ಠಾಣೆಗೆ ಹೋಗಿ, ತಂದೆ ಕಾಣೆ​ಯಾ​ಗಿ​ದ್ದಾ​ನೆಂದು ದೂರು ಕೊಟ್ಟಿ​ದ್ದ.

Bengaluru : ಜನ್ಮವಿತ್ತ ತಂದೆ-ತಾಯಿಯನ್ನೇ ಕೊಲೆಗೈದು ಪರಾರಿಯಾದ ಸೈಕೋ ಪುತ್ರ

ಮೃತನ ಸಹೋದರರು ಅನುಮಾನಗೊಂಡು ಈತನನ್ನು ವಿಚಾರಿಸಿದಾಗ ಹೆದರಿ ಸತ್ಯ ಬಾಯಿಬಿಟ್ಟ. ಬಳಿಕ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.

Follow Us:
Download App:
  • android
  • ios