*   ಕುಖ್ಯಾತ ರೌಡಿ ಹಾಗೂ ಆತನ ಸಹಚರರ ಸೆರೆ*   ಆರೋಪಿಗಳಿಂದ ಮಾರಕಾಸ್ತ್ರ ಜಪ್ತಿ *   ನಾಗರಿಕರಿಗೆ ಬೆದರಿಸಿ ಹಣ ಸುಲಿಗೆಗೆ ಸಜ್ಜಾಗಿದ್ದ ವಾಸಿಂ

ಬೆಂಗಳೂರು(ಫೆ.25): ನಗರದ ಡಿ.ಜೆ.ಹಳ್ಳಿ ಸಮೀಪದ ಶಾಂಪುರ ಮುಖ್ಯರಸ್ತೆಯ ರೈಲ್ವೆ ಹಳಿ ಹತ್ತಿರ ಜನರಿಗೆ ಬೆದರಿಕೆ ಹಾಕಿ ಸುಲಿಗೆಗೆ(Robbery) ಯತ್ನಿಸಿದ್ದ ಕುಖ್ಯಾತ ರೌಡಿ ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು(CCB Police) ಸೆರೆ ಹಿಡಿದಿದ್ದಾರೆ.

ಯಲಹಂಕ ಠಾಣೆ ರೌಡಿಶೀಟರ್‌ ವಾಸಿಂ ಅಲಿಯಾಸ್‌ ಕುಳ್ಳ ವಾಸಿಂ, ಆತನ ಸಹಚರರಾದ ಯಾಸಿನ್‌ ನಗರದ ನಜೀಮ್‌ ಪಾಷ ಹಾಗೂ ದೆಹಲಿ ಮೂಲದ ಮೋಹಿನ್‌ ಖಾನ್‌ ಬಂಧಿತರು(Arrest). ಆರೋಪಿಗಳಿಂದ(Accused) ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಶಾಂಪುರ ಮುಖ್ಯರಸ್ತೆಯ ರೈಲ್ವೆ ಹಳಿ ಸಮೀಪ ತನ್ನ ಸಹಚರರ ಜತೆ ನಾಗರಿಕರಿಗೆ ಬೆದರಿಸಿ ಹಣ ಸುಲಿಗೆಗೆ ವಸೀಂ ಸಜ್ಜಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

Bengaluru Crime: ಆಂಧ್ರದಿಂದ ಬಂದು ಬೆಂಗ್ಳೂರಲ್ಲಿ ಮನೆಗಳವು ಮಾಡುತ್ತಿದ್ದವ ಅರೆಸ್ಟ್‌

2014ರಿಂದ ರೌಡಿ ಚಟುವಟಿಕೆಯಲ್ಲಿ ವಾಸಿಂ ತೊಡಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್‌(Criminal) ಚರಿತ್ರೆ ಹಿನ್ನೆಲೆಯಲ್ಲಿ ಯಲಹಂಕ ಠಾಣೆಯಲ್ಲಿ ಆತನ ಮೇಲೆ ರೌಡಿ ಪಟ್ಟಿ ತೆರೆಯಲಾಗಿತ್ತು. ಇತ್ತೀಚಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ವಾಸಿಂ ಸಕ್ರಿಯವಾಗಿದ್ದ. ಭೂ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಿ ಜನರಿಗೆ ಬೆದರಿಕೆ ಹಾಕಿ ಭೂ ಅತಿಕ್ರಮಣ ಮಾಡುತ್ತಿದ್ದ ಬಗ್ಗೆ ಸಹ ದೂರುಗಳಿವೆ. ಇನ್ನುಳಿದ ಆತನ ಸಹಚರ ನಜೀಮ್‌ ವಿರುದ್ಧ ಕೂಡಾ ಕೊಲೆ ಪ್ರಕರಣ ಇದ್ದು, ವಾಸಿಂಗೆ ದೆಹಲಿ ಮೂಲದ ಮೋಹಿನ್‌ ಕಾರು ಚಾಲಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗ್ಳೂರಲ್ಲಿ ದಂತಚೋರರ ಗ್ಯಾಂಗ್‌: 8 ಮಂದಿ ಬಂಧನ

ಆನೇಕಲ್‌: ಕಾಡಿನಲ್ಲಿ(Forest) ಒಂಟಿ ಸಲಗಗಳ ಕೊಂದು, ಅವುಗಳ ದೇಹ ಕೊಳೆತ ನಂತರ ಅದರ ದಂತಗಳನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದ ಖತರ್ನಾಕ್‌ ದಂತ ಚೋರರ ತಂಡವನ್ನು ಹೆಬ್ಬಗೋಡಿ ಪೊಲೀಸರು(Police) ಮಾಲು ಸಹಿತ ಬಂಧಿಸಿ(Arrest) ಜೈಲಿಗಟ್ಟಿದ್ದಾರೆ.

ತುಮಿಳುನಾಡಿನ(Tamil Nadu) ಬಾಗಲೂರಿನ ಸಯ್ಯದ್‌ ರಫೀಕ್‌ ಅ. ಮಹಬೂಬ್‌ ಪಾಷ, ಸೂಳಗಿರಿ ತಾಲೂಕಿನ ಹನುಮಂತಪುರದ ಹರೀಶ(22), ಮುಗಳೂರಿನ ತ್ಯಾಗರಾಜು(32), ದೊಡ್ಡ ಬೂದುಕೋಟೆಯ ಎಂ.ಮಣಿ(32), ನಾಗರಸಮ್ಮಪಟ್ಟಿಯ ಮಣಿಕಂಠ(33), ಕುಪ್ಪಚ್ಚಿಪಾರೈ ವಾಸಿ ಪೆರಿಯಾನ್‌ ಅ. ಗಣಪತಿ (31), ಬೆಟ್ಟಮುಗ್ಗಲಾ ಗ್ರಾಮ ವಾಸಿ ಪವನ್‌ರಾಜ್‌(43), ಮುಕ್ಕನ್‌ ಕರೈ ವಾಸಿ ಬಸವರಾಜು ಅ. ಪಸುವರಾಜು(38) ಬಂಧಿತರು. ಆರೋಪಿಗಳಿಂದ ಅಂದಾಜು 42 ಲಕ್ಷ ಮೌಲ್ಯದ 14 ಕೆ.ಜಿ. ತೂಕವುಳ್ಳ 2 ದಂತಗಳನ್ನು(Elephant Ivory) ವಶಪಡಿಸಿಕೊಳ್ಳಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಜಗದೀಶ್‌ ತಿಳಿಸಿದರು.

Robbery Case: ಗೋಡೆ ಕೊರೆದು 1 ಕೇಜಿ ಚಿನ್ನ ದೋಚಿ ಪರಾರಿ

ಆರೋಪಿಗಳೆಲ್ಲ ತುಮಿಳುನಾಡಿನ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ತಮಿಳುನಾಡಿನ ಡೆಂಕಣಿಕೋಟೆ ಸರಹದ್ದಿನ ಬೆಟ್ಟಮುಗಲಾಳ ಅರಣ್ಯ ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತು ಒಂಟಿ ಸಲಗಗಳನ್ನೇ ಗುರಿಯಾಗಿಸಿ ಸಾಯಿಸಿ ದಂತ ದೋಚುವುದರಲ್ಲಿ ಕುಖ್ಯಾತರಾಗಿದ್ದರು. ದ್ವಿಚಕ್ರ ವಾಹನದಲ್ಲಿ ದಂತಗಳನ್ನು ಮಾರಾಟ ಮಾಡಲು ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಡಿ.ಮಾರ್ಟ್‌ ಬಳಿ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ರಫೀಕ್‌ ಮತ್ತು ಹರೀಶ್‌ನನ್ನು ಬಂಧಿಸಲಾಯಿತು. ಬಳಿಕ ಅವರು ನೀಡಿದ ಮಾಹಿತಿ ಆಧರಿಸಿ ಇನ್ನುಳಿದ 6 ಮಂದಿಯನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.

ವ್ಯಾಪಾರಿಗಳ ಸೋಗಲ್ಲಿ ಅಕ್ಕಸಾಲಿಗರಿಗೆ ವಂಚಿಸಿದ್ದವರ ಸೆರೆ

ಬೆಂಗಳೂರು: ಚಿನ್ನಾಭರಣ(Gold) ವ್ಯಾಪಾರಿಗಳ ಸೋಗಿನಲ್ಲಿ ಒಡವೆ ಖರೀದಿಸುವುದಾಗಿ ನಂಬಿಸಿ ತಮ್ಮ ಅಂಗಡಿಗೆ ಕರೆಸಿಕೊಂಡು ಅಕ್ಕಸಾಲಿಗರೊಬ್ಬರಿಂದ ಆಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಮೂವರು ಚಾಲಾಕಿ ಖದೀಮರು ಮಾಗಡಿ ರಸ್ತೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.