Asianet Suvarna News Asianet Suvarna News

ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌: ನಟ ದರ್ಶನ್‌ಗೆ 40 ಲಕ್ಷ ರು. ನೀಡಿದವರಿಗೆ ಪೊಲೀಸ್ ಸಮನ್ಸ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ತಾವು ಬಚಾವಾಗಲು ಅಗತ್ಯವಿರುವ ಹಣಕ್ಕಾಗಿ ಮೋಹನ್ ರಾಜ್ ಅವರಿಂದ 40 ಲಕ್ಷ ರು. ಹಣವನ್ನು ದರ್ಶನ್ ಪಡೆದಿದ್ದರು. ಆನಂತರ ಆ ಹಣವನ್ನು ಅವರ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದರು. 

Police Summons to Mohan Raj who Given 40 lakhs for Actor Darshan on Renukaswamy Murder Case grg
Author
First Published Jun 22, 2024, 10:48 AM IST | Last Updated Jun 22, 2024, 10:48 AM IST

ಬೆಂಗಳೂರು(ಜೂ.22):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್ ಅವರಿಗೆ 40 ಲಕ್ಷ ರು. ಕೊಟ್ಟಿದ್ದ ಅವರ ದರ್ಶನ್ ಅವರ ಸ್ನೇಹಿತ ಮೋಹನ್ ರಾಜ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. 

ದರ್ಶನ್ ಬಂಧನವಾದ ಬಳಿಕ ಪೊಲೀಸರ ಸಂಪರ್ಕಕ್ಕೆ ಸಿಗದೆ ಬಿಜೆಪಿ ಮುಖಂಡ ಎನ್ನಲಾದ ಮೋಹನ್ ರಾಜ್ ಅವರು ಅಜ್ಞಾತವಾಗಿದ್ದಾರೆ ಎಂದು ತಿಳಿದುಬಂದಿದೆ.

'ಡಿ' ಗ್ಯಾಂಗ್‌ ಸಿನಿಮಾ ಟೈಟಲ್‌ ನೀಡಲು ಫಿಲ್ಕ್ ಛೇಂಬ‌ರ್ ನಕಾರ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ತಾವು ಬಚಾವಾಗಲು ಅಗತ್ಯವಿರುವ ಹಣಕ್ಕಾಗಿ ಮೋಹನ್ ರಾಜ್ ಅವರಿಂದ 40 ಲಕ್ಷ ರು. ಹಣವನ್ನು ದರ್ಶನ್ ಪಡೆದಿದ್ದರು. ಆನಂತರ ಆ ಹಣವನ್ನು ಅವರ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದರು. 

Latest Videos
Follow Us:
Download App:
  • android
  • ios