* ಮಗುವಿನ ಧಾರ್ಮಿಕ ಹಕ್ಕು ಪ್ರಕರಣ* ಹೆಣ್ಣು ಮಗಳ ಕೂದಲು ಕತ್ತರಿಸದಂತೆ ಹೈಕೋರ್ಟ್ ಗೆ ಟರ್ಜಿ* ಸಿಖ್ ದಮುದಾಯದ ವ್ಯಕ್ತಿಯಿಂದ ಅರ್ಜಿ

ಬೆಂಗಳೂರು( ಜ. 04) ತಮ್ಮ ಮಗಳ (Daughter)ಕೂದಲು (Hair) ಕತ್ತರಿಸದಂತೆ ಸಿಖ್ (Sikh) ಸಮುದಾಯದ ವ್ಯಕ್ತಿ ಹೈಕೋರ್ಟ್ ಗೆ (Karnataka High Court) ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಆದೇಶದವರೆಗೂ ಕೂದಲು ಕಟ್ ಮಾಡುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.

Add Asianetnews Kannada as a Preferred SourcegooglePreferred

ಅರ್ಜಿ ಸಲ್ಲಿಸಿದ ಸಿಖ್ ವ್ಯಕ್ತಿಯ ಪತ್ನಿಗೆ (Wife) ಹೈಕೋರ್ಟ್ ಸೂಚನೆ ನೀಡಿದೆ. ಧಾರ್ಮಿಕ ಗುರುತು ಬದಲಿಸಬಾರದು ಎಂದು ತಿಳಿಸಿದೆ ಮಗಳನ್ನು ತನ್ನ ಸುಪರ್ದಿಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವ ವ್ಯಕ್ತಿ ಕೇಳಿಕೊಂಡಿದ್ದಾರೆ.

ಸಂಪ್ರದಾಯ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ ಹೆಣ್ಣು ಮಗುವೂ ಪಂಚಕ್ ಸಂಪ್ರದಾಯ ಪಾಲಿಸಬೇಕು . ಸಂಪ್ರದಾಯದಂತೆ ಕೂದಲಿಗೆ ಕತ್ತರಿ ಹಾಕುವಂತಿಲ್ಲ . ಮಗುವಿನ ಧಾರ್ಮಿಕ ಗುರುತು ಬದಲಿಸಬಾರದು ಎಂದಿದೆ. ಮಗುವಿನ ತಾಯಿ ವಿಚಾರಣೆಗೆ ಗೈರಾಗಿದ್ದರು. 

Woman Suicide : ಮದುವೆಗೂ ಮುನ್ನವೇ ಒಂದಾಗಿದ್ದ ಜೋಡಿ, ಸಾನಿಟೈಸರ್ ಕುಡಿದು ಗರ್ಭಿಣಿ ಸುಸೈಡ್!

ಆನೆ ಕದಿಯಲು ಮುಂದಾಗಿದ್ದರು:  ಹಣಕ್ಕಾಗಿ ದೊಡ್ಡ ವ್ಯಕ್ತಿಗಳನ್ನು, ದೊಡ್ಡವರ ಮಕ್ಕಳನ್ನು ಕಿಡ್ನಾಪ್ ಮಾಡಿದ ಹಲವು ಸ್ಟೋರಿಗಳಿವೆ. ಆದರೆ ಇಲ್ಲಿ ಹಣಕ್ಕಾಗಿ ಆನೆಯನ್ನೇ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಮಠಕ್ಕೆ (Tumkur Mutt) ಸೇರಿದ ಆನೆಯನ್ನೇ (Elephant) ಕಿಡ್ನಾಪ್ (Kiodnap) ಮಾಡಲು ಯತ್ನಿಸಲಾಗಿತ್ತು. ತುಮಕೂರು ನಗರದ ಹೊರಪೇಟೆಯ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಹೆಣ್ಣಾನೆ ಕಳ್ಳತನಕ್ಕೆ ಸಂಚು ರೂಪಿಸಲಾಗಿತ್ತು.

ವಿಚಿತ್ರ ಎಂದರೆ ಈ ಸಂಚಿನಲ್ಲಿ ಅರಣ್ಯ (Forest Department) ಇಲಾಖೆ ಅಧಿಕಾರಿಗಳ ಪಾತ್ರವೂ ಇತ್ತು ಎಂಬ ಮಾಹಿತಿ. ಮಠಕ್ಕೆ ವಂಚಿಸಿ ಗುಜರಾತಿಗೆ ಆನೆ ಸಾಗಿಸಲು ಪ್ಲಾನ್ ರೂಪಿಸಿದ್ದರು. ಬನ್ನೇರುಘಟ್ಟಕ್ಕೆ ಕೆರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆಂದು ಕರೆದೊಯ್ದ ಖದೀಮರು ದಾಬಬಸ್‌ ಪೇಟೆಯಲ್ಲಿ ಬಳಿ ಮಾವುತನ ಮೇಲೆ ಹಲ್ಲೆ ನಡೆಸಿದ್ದಾರೆ. ಲಾರಿಯಿಂದ ಮಾವುತನನ್ನು ಕೆಳಗಿಸಿದ್ದರು.

ನಿದ್ದೆ ಮಾಡುತ್ತಿದ್ದವನ ಮೇಲೆ ನೀರು:  ಉದ್ಯಮಿ ಕಾರು ಚಾಲಕ , ಅದೇ ಮನೆಯಲ್ಲಿ ಕೆಲಸ ಮಾಡುವವನ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಚಾಲಕ ಸಂತೋಷ್ ಹಾಗೂ ಪಿಓಪಿ ಕೆಲಸ ಮಾಡುವ ರಾಜೇಶ್ ಶ್ಯಾಂ ಎಂಬುವನ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ನಿದ್ರೆ ಮಾಡುತ್ತಿದ್ದ ವಾಚ್ ಮ್ಯಾನ್ ಈಶ್ವರಪ್ಪ ಎಂಬುವರ ಮೇಲೆ ನೀರು ರಾಜೇಶ್ ಶ್ಯಾಂ ನೀರು ಹಾಕಿದ್ದ.

ಕಳೆದ 6 ತಿಂಗಳಿನಿಂದ ಕೃಷ್ಣ ಅವರ ಮನೆಯಲ್ಲಿ ಸಂತೋಷ್‌ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಡಿ.22ರಂದು ರಾತ್ರಿ 9.30ರಲ್ಲಿ ಸಂತೋಷ್‌, ರಾಜೇಶ್‌ ಶ್ಯಾಮ್‌ ಹಾಗೂ ವಾಚ್‌ಮ್ಯಾನ್‌ ಈಶ್ವರಪ್ಪ ಊಟ ಮಾಡಿ ಮಲಗಿದ್ದರು. ಆ ವೇಳೆ ಈಶ್ವರಪ್ಪ ಮೇಲೆ ರಾಜೇಶ್‌ ಶ್ಯಾಮ್‌ ನೀರು ಚೆಲ್ಲಿ ತೊಂದರೆ ಕೊಡುತ್ತಿದ್ದ.

ಮಲಗಿರುವವರ ಮೇಲೆ ನೀರು ಚೆಲ್ಲಿ ಏಕೆ ತೊಂದರೆ ಕೊಡುತ್ತಿದ್ದೀಯಾ ಎಂದು ಸಂತೋಷ್‌ ಆತನನ್ನು ಪ್ರಶ್ನಿಸಿದ್ದ. ಇದರಿಂದ ಆಕ್ರೋಶಗೊಂಡ ರಾಜೇಶ್‌ ಶ್ಯಾಮ್‌, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂತೋಷ್‌ ಜತೆಗೆ ಜಗಳ ಮಾಡಿದ್ದ. ಗಲಾಟೆಯಲ್ಲಿ ಒಬ್ಬನ ತುಟಿಯೇ ಕಟ್ ಆಗಿ ಬಿದ್ದಿತ್ತು.