Asianet Suvarna News Asianet Suvarna News

Drink and Drive: ನೈಟ್ ಕರ್ಪ್ಯೂಗೆ  ಡೋಂಟ್ ಕೇರ್, ಸಿಕ್ಕಾಕಿಕೊಂಡ 443 ಮದ್ಯಪ್ರಿಯರು!

*ಸರ್ಕಾರದ ಟಫ್ ರೂಲ್ಸ್ ಗೆ ಜನರ ಸಹಕಾರ ಹೇಗಿದೆ?
* ಈ ಅಂಕಿ ಅಂಶಗಳು ನೀಡುತ್ತಿರುವ ಮಾಹಿತಿಯೇ ಸಾಕಲ್ಲವೆ
* ವರ್ಷಾರಂಭದಲ್ಲಿ ಸಾಲು ಸಾಲು ಮದ್ಯಪಾನ ಮಾಡಿ ವಾಹನ ಚಾಲನೆ ಪ್ರಕರಣಗಳು
* ನೈಟ್ ಕರ್ಫ್ಯೂ  ವಿಧಿಸಿದ್ದರೂ ಜನರ ಮದ್ಯಪ್ರಿಯರು ಕ್ಯಾರೇ ಎಂದಿಲ್ಲ

New Year s Eve total 443 Drink and drive cases in Bengaluru mah
Author
Bengaluru, First Published Jan 3, 2022, 1:00 AM IST

ಬೆಂಗಳೂರು(ಡಿ. 03)  ಕೊರೋನಾ (Coronavirus) ಮತ್ತು ರೂಪಾಂತರಿ (omicron) ಓಮಿಕ್ರೋನ್ ತಡೆಗೆ ರಾಜ್ಯ ಸರ್ಕಾರ (Karnataka Govt) ಟಫ್ ರೂಲ್ಸ್, ನೈಟ್ ಕರ್ಪ್ಯೂ ಜಾರಿ ಮಾಡಿದೆ. ಜನರು ಸಹಕಾರ ನೀಡದ ಪರಿಸ್ಥಿತಿ ಎದುರಾದರೆ ಲಾಕ್ ಡೌನ್ (LockDown) ಅನಿವಾರ್ಯ ಎಂದು ಹೇಳುತ್ತಿದೆ. ಈ ನಡುವೆ ನಮ್ಮ ಮುಂದೆ ಇರುವ ಅಂಕಿ ಅಂಶಗಳು ಜನರ ಸಹಕಾರ ಹೇಗಿದೆ? ಎನ್ನುವುದರ ಒಂದಷ್ಟು ಹಿಂಟ್ ನೀಡುತ್ತದೆ.

ನೈಟ್ ಕರ್ಪ್ಯೂ ಟೈಟ್ ರೂಲ್ಸ್ ಗೂ  ತಮಗೂ ಸಂಬಂಧವೇ ಇಲ್ಲ ಎಂಬಂತೆ ಮದ್ಯಪ್ರಿಯರು ವರ್ತನೆ ತೋರಿದ್ದಾರೆ. ಅದು ಹೇಳಿ ಕೇಳಿ ಕಳೆದ ವಾರ ಎಂದರೆ ಹೊಸ ವರ್ಷಕ್ಕೆ ಕಾಲಿಡುತ್ತಿರುವ ವಾರ.  ಒಂದು ವಾರದಲ್ಲಿ 443 ಡ್ರಿಂಕ್ ಆಂಡ್ ಡ್ರೈವ್ (Drink and Drive) ಪ್ರಕರಣ ದಾಖಲಾಗಿದೆ.

ಕರ್ಫ್ಯೂ ಅವಧಿಯಲ್ಲೇ ಸಾಲು ಸಾಲು ಡ್ರಿಂಕ್ ಆಂಡ್  ಡ್ರೈವ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ ಒಟ್ಟು 200 ಪ್ರಕರಣ ದಾಖಲಾಗಿದ್ದರೆ ಡಿ. 31 ರಾತ್ರಿ  ಮತ್ತು  ಜ.1-2022 ರಂದು ಒಟ್ಟು 100 ಜನ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದರು.

ಪೂರ್ವ ವಿಭಾಗದಲ್ಲಿ ಒಟ್ಟು 183  ಕೇಸುಗಳಿದ್ದರೆ ಡಿಸೆಂಬರ್ 31ರ ರಾತ್ರಿ  37 ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಉತ್ತರ ವಿಭಾಗದಲ್ಲಿ ದಾಖಲಾದ ಒಟ್ಟು 55 ಪ್ರಕರಣ ದಾಖಲಾಗಿದೆ. ಡಿಸೆಂಬರ್ 31ರ ರಾತ್ರಿ ನಗರದಲ್ಲಿ ಬರೋಬ್ಬರಿ  174  ಜನ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Coronavirus Lockdown:  ಲಾಕ್ ಡೌನ್‌ ತಪ್ಪಿಸಲು ಇದೊಂದೇ ಸೂತ್ರ ಎಂದ ಬೊಮ್ಮಾಯಿ

ಸೋಂಕಿತರ ಸಂಖ್ಯೆ ಭಾರೀ ಏರಿಕೆ, 284 ಸಾವು, ಒಮಿಕ್ರಾನ್‌ ಕೂಡಾ ಹೆಚ್ಚಳ! ದೇಶದಲ್ಲಿ ಕೊರೋನಾ ಪ್ರಕರಣಗಳು ಮತ್ತೊಮ್ಮೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಸಮಯದಲ್ಲಿ, ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನ ವಿಷಯದಲ್ಲಿಯೂ ಜಿಗಿತ ಕಂಡುಬಂದಿದೆ, ಇದು ಅಪಾಯಕಾರಿ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 27,553 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 284 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,22,801 ಕ್ಕೆ ಏರಿದೆ. ಅದೇ ಸಮಯದಲ್ಲಿ, ಭಾರತದಲ್ಲಿ 1,525 ಓಮಿಕ್ರಾನ್ ಪ್ರಕರಣಗಳಿವೆ.

ಈಗಾಗಲೇ ಕೊರೋನಾ ವೈರಸ್‌ನ ಎರಡು ಅಲೆಗಳನ್ನು ಎದುರಿಸುತ್ತಿರುವ ನಂತರ, ಮೂರನೇ ಅಲೆಯ ಅಬ್ಬರವೂ ಜನರನ್ನು ಹೆದರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಮತ್ತು ಓಮಿಕ್ರಾನ್ ಬಗ್ಗೆ ತುಂಬಾ ಸಕ್ರಿಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಹಲವು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನೂ ವಿಧಿಸಲಾಗಿದೆ. ಇದರಲ್ಲಿ ರಾತ್ರಿ ಕರ್ಫ್ಯೂ ಮತ್ತು ಸೆಕ್ಷನ್ 144 ನಂತಹ ನಿಯಮಗಳಿವೆ

ಏತನ್ಮಧ್ಯೆ, ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ಕೊರೋನಾ ಮತ್ತು ಓಮಿಕ್ರಾನ್ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳದಿಂದಾಗಿ, ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆಗಳಲ್ಲಿ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆದ್ದರಿಂದ ಕ್ಷೇತ್ರ ಮಟ್ಟದಲ್ಲಿ ಪಾಳಿ ಆಸ್ಪತ್ರೆಗಳನ್ನು ಮಾಡಲು ಸಚಿವಾಲಯ ಸೂಚನೆ ನೀಡಿದೆ. ಇದರೊಂದಿಗೆ ಜಿಲ್ಲಾ ಮಟ್ಟದಲ್ಲೂ ಕಣ್ಗಾವಲು ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸ್ಥಳಗಳಲ್ಲಿ ವಿವಿಧ ಸ್ಥಳಗಳಲ್ಲಿ 24x7 ಕ್ಷಿಪ್ರ ಪ್ರತಿಜನಕ ಪರೀಕ್ಷಾ ಬೂತ್‌ಗಳನ್ನು ಸ್ಥಾಪಿಸಲು ಸೂಚಿಸಿದೆ. ಜ್ವರ, ಗಂಟಲು ನೋವು, ಅತಿಸಾರ, ಉಸಿರಾಟದ ತೊಂದರೆ ಇರುವವರಿಗೆ ಕರೋನಾ ಪರೀಕ್ಷೆಯನ್ನು ಮಾಡಬೇಕು ಎಂದು ಹೇಳಲಾಗಿದೆ. ಮತ್ತೊಂದೆಡೆ, ಹೊಸ ವರ್ಷದ ಮುನ್ನಾದಿನದಂದು, ಅನೇಕ ರಾಜ್ಯಗಳು ಕರೋನಾ ಪ್ರಕರಣಗಳಲ್ಲಿ ಭಾರಿ ಹೆಚ್ಚಳದ ಬಗ್ಗೆ ಮಾಹಿತಿಯನ್ನು ನೀಡಿವೆ.

 

 

Follow Us:
Download App:
  • android
  • ios