Asianet Suvarna News Asianet Suvarna News

ನೈಂಟಿ ಕೊಡಿಸದ್ದಕ್ಕೆ ಹಿರಿಯ ನಾಗರಿಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪುಂಡ!

ಕುಡಿಯಲು ನೈಂಟಿ ಎಣ್ಣೆ ಕೊಡಿಸದ್ದಕ್ಕೆ ಪುಂಡನೋರ್ವ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ ಘಟನೆ ಗಿರಿನಗರದ ಮೂಕಾಂಬಿಕನಗರದಲ್ಲಿ ನಡೆದಿದೆ. ಸಿಂಗಾರ ವೇಲು ಹಲ್ಲೆಗೊಳಗಾದ ಹಿರಿಯ ನಾಗರಿಕ. ಮುಖದ ಭಾಗಕ್ಕೆ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿರೋ ಸಿಂಗಾರವೇಲು. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಹಿಡಿದಿದೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಧರ್ಮ

Miscreant attacked a senior citizen with a brick for giving him ninety at girinagar bengaluru rav
Author
First Published Jan 5, 2024, 9:07 AM IST

ಬೆಂಗಳೂರು (ಜ.5): ಕುಡಿಯಲು ನೈಂಟಿ ಎಣ್ಣೆ ಕೊಡಿಸದ್ದಕ್ಕೆ ಪುಂಡನೋರ್ವ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ ಘಟನೆ ಗಿರಿನಗರದ ಮೂಕಾಂಬಿಕನಗರದಲ್ಲಿ ನಡೆದಿದೆ.

ಸಿಂಗಾರ ವೇಲು ಹಲ್ಲೆಗೊಳಗಾದ ಹಿರಿಯ ನಾಗರಿಕ. ಮುಖದ ಭಾಗಕ್ಕೆ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿರೋ ಸಿಂಗಾರವೇಲು. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಹಿಡಿದಿದೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಧರ್ಮ

ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್​ ಡ್ರಗ್ಸ್​ ಕುರಿತು ಹೇಳಿದ್ದೇನು?

ಘಟನೆ ಹಿನ್ನೆಲೆ

ಸಿಂಗಾರ ವೇಲು ಹಿರಿಯ ನಾಗರಿಕನಾಗಿದ್ದು ಗಿರಿನಗರದ ಮನೆಬಳಿ ಕಬಾಬ್ ತಿನ್ನುತ್ತಿದ್ರು. ಈ ವೇಳೆ ಎಂಟ್ರಿಕೊಟ್ಟಿದ್ದ ಆರೋಪಿ ಧರ್ಮ. ಕುಡಿಯಲು ನೈಂಟಿ ಕೊಡಿಸುವಂತೆ ಪೀಡಿಸಿದ್ದಾನೆ. ಆದರೆ ವೇಲು ಎಣ್ಣೆ ಕೊಡಿಸಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡು ಪಕ್ಕದಲ್ಲೇ ಇದ್ದ ಇಟ್ಟಿಗೆ ಕೈಗೆ ತೆಗೆದುಕೊಂಡು ವೇಲು ಎಂಬುವವರಿಗೆ ಕಾಲಲ್ಲಿ ಒದ್ದು, ಮುಖದ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿ.ಇಟ್ಟಿಗೆಯಿಂದ ಹೊಡೆದ ಪರಿಣಾಮ ತುಟಿಗೆ ಗಂಭೀರವಾಗಿದೆ. ಗಾಯಾಳು ವೇಲು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕುಡಿತೀರಾ? ಏನೂ ತಲೆಯೇ ಓಡ್ತಿಲ್ಲವೆಂದ್ರೆ ಆಲ್ಕೋಹಾಲ್ ನಿಲ್ಲಿಸಿ ನೋಡಿ!

ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಆರೋಪಿ ಪತ್ತೆಗೆ ಶೋಧಕಾರ್ಯಕ್ಕೆ ಮುಂದಾಗಿರುವ ಪೊಲೀಸರು.

Follow Us:
Download App:
  • android
  • ios