Asianet Suvarna News Asianet Suvarna News

ಮಂಗಳೂರು; ತಲ್ವಾರ್‌ ನಿಂದ ಕೊಚ್ಚಿ ರೌಡಿ ಶೀಟರ್ ಹತ್ಯೆ

ಮಂಗಳೂರಿನಲ್ಲಿ ಮತ್ತೆ ಚೆಲ್ಲಿದ ರಕ್ತ/ ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ಮೇಲೆ ತಲವಾರ್ ನಿಂದ ದಾಳಿ/ ರೌಡಿ ಶೀಟರ ಆಗಿರುವ ಫಾರೂಕ್/ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Mangaluru rowdy-sheeter hacked to death Bantwal mah
Author
Bengaluru, First Published Oct 23, 2020, 6:21 PM IST

ಮಂಗಳೂರು(ಅ. 23) ತುಳು ನಟ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಕೊಲೆ ನಂತರ ಮಂಗಳೂರಿನಲ್ಲಿ ವಾತಾವರಣ ಕೊಂಚ ತಿರುವು ಪಡೆದುಕೊಂಡಂತೆ ಕಾಣುತ್ತಿದೆ. ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಕಲ್ಲಡ್ಕ ನಿವಾಸಿ ಚೆನ್ನೆ ಫಾರೂಕ್ ಮೇಲೆ ತಲವಾರ್ ನಿಂದ ದಾಳಿ ಮಾಡಲಾಗಿದೆ. ರೌಡಿಶೀಟರ್ ಆಗಿರುವ ಚೆನ್ನೆ ಫಾರೂಕ್ ಗಂಭೀರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದರೂ ಸಾವಿಗೀಡಾಗಿದ್ದಾನೆ.

ಸುರೇಂದ್ರ ಬಂಟ್ವಾಳ ಕೊಂದಿದ್ದು ನಾನೆ, ಯಾವ ಸಾವಿಗೆ ಪ್ರತೀಕಾರ

ಬಂಟ್ವಾಳದ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಹಲ್ಲೆ ನಡೆದಿದೆ. ಕಾರಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ ಎಸಗಿದ್ದಾರೆ. ತಲವಾರಿನಿಂದ  ಕಂಡ ಕಂಡಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

Follow Us:
Download App:
  • android
  • ios