Asianet Suvarna News Asianet Suvarna News

ಸಾಲಗಾರರ ಕಾಟ; ಕರವೇ ಅಧ್ಯಕ್ಷ ನಾರಾಯಣ ಗೌಡ ಸಹೋದರ ಆತ್ಮಹತ್ಯೆ ಯತ್ನ

* ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸಹೋದರ ಆತ್ಮಹತ್ಯೆ ಯತ್ನ‌
* ನಾಗರಬಾವಿಯ ಮನೆಯಲ್ಲಿ ವಿಷ ಸೇವನೆ
* ಪರಮೇಶ್,ನಾರಾಯಣ ಗೌಡ ಸಹೋದರ
* ಸಾಲಗಾರರ ಕಾಟ ಸಹಿಸಲಾರದೆ ಆತ್ಮಹತ್ಯೆ ಯತ್ನ

Karnataka Rakshana Vedike President Narayanagowda Brother try to commit suicide mah
Author
Bengaluru, First Published Jul 27, 2021, 3:51 PM IST

ಬೆಂಗಳೂರು(ಜು. 27)  ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸಹೋದರ ಆತ್ಮಹತ್ಯೆ ಯತ್ನಿಸಿದ್ದಾರೆ. ನಾಗರಬಾವಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ.

ನಾರಾಯಣ ಗೌಡ ಸಹೋದರ ಪರಮೇಶ್  ಸಾಲಗಾರರ ಕಾಟ ಸಹಿಸಲಾರದೆ ಆತ್ಮಹತ್ಯೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ. ಅನೇಕರ ಬಳಿ ಸಾಲ ಮಾಡಿಕೊಂಡಿದ್ದ ಪರಮೇಶ್ ಅವರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು.

ಮಾವನ ಗನ್ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಸೊಸೆ

ವಿಷ ಸೇವಿಸಿದ್ದು ತಡವಾಗಿ ಗೊತ್ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲಗಾರರ ಕಾಟದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎನ್ನುವುದು ಆರಂಭಿಕ ಮಾಹಿತಿ. ಘಟನೆ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಬೇಕಿದೆ.   

Follow Us:
Download App:
  • android
  • ios