Asianet Suvarna News Asianet Suvarna News

ಬನ್ನಿ ಮಾತಾಡೋದಿದೆ...ರಾಧಿಕಾಗೆ ಸಿಸಿಬಿ ಬುಲಾವ್!

ಸಿಸಿಬಿ ಇಂದ ರಾಧಿಕಾ ಕುಮಾರ ಸ್ವಾಮಿಗೆ ನೋಟಿಸ್/ ನೋಟಿಸ್ ಕೊಟ್ಟಿರೋ ಬಗ್ಗೆ ಖಚಿತ ಪಡಿಸಿದ ರಾಧಿಕಾ ಅಣ್ಣ ರವಿರಾಜ್/ ನೋಟಿಸ್ ಬಂದಿರೋದು ನಿಜ.. ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ/ ನಾಳೆ ಬೆಳಗ್ಗೆ 11 ಗಂಟೆಗೆ ಬರುವಂತೆ ಕರೆದಿದ್ದಾರೆ/ ನಾಳೆ ರಾಧಿಕಾ ವಿಚಾರಣೆಗೆ ಹಾಜರಾಗುತ್ತಾರೆ

Fraud Yuvaraj Case CCB Issues Notice To Radhika Kumaraswamy mah
Author
Bengaluru, First Published Jan 7, 2021, 6:20 PM IST

ಬೆಂಗಳೂರು(ಜ. 07)  ವಂಚಕ ಯುವರಾಜ್ ಖಾತೆಯಿಂದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ  ನೋಟಿಸ್ ನೀಡಿದೆ.  ರಾಧಿಕಾ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

ನೋಟಿಸ್ ಕೊಟ್ಟಿರುವುದನ್ನು ರಾಧಿಕಾ ಅಣ್ಣ ರವಿರಾಜ್ ಖಚಿತ ಮಾಡಿದ್ದಾರೆ. ನೋಟಿಸ್ ಬಂದಿರೋದು ನಿಜ.. ವಾಟ್ಸ್ ಆಪ್ ಮೂಲಕ ಕಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯಕ್ಷವಾದ ರಾಧಿಕಾ ಹೇಳದೆ ಉಳಿಸಿದ ವಿಚಾರ

 ದೊಡ್ಡ ದೊಡ್ಡ ರಾಜಕೀಯ ನಾಯಕರು ಗೊತ್ತು ಎಂದು ಹೇಳಿ ಹಲವಾರು ಜನರಿಗೆ ವಂಚನೆ ಮಾಡಿರುವ ಸ್ವಾಮಿ ಅಲಿಯಾಸ್ ಯುವರಾಜ್ ಸಿಸಿಬಿ ವಶದಲ್ಲೇ ಇದ್ದಾನೆ.  ರಾಧಿಕಾ ಖಾತೆಗೆ  ಯುವರಾಜ್ ಖಾತೆಯಿಂದ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂಬ ಆರೋಪ ಇದ್ದು ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ  ನೀಡುವ ಪ್ರಯತ್ನ ಮಾಡಿದ್ದರು. 

Follow Us:
Download App:
  • android
  • ios