Asianet Suvarna News Asianet Suvarna News

Crime News: ಬೈಕ್ ಕೀ ಕೊಡಲು ನಿರಾಕರಿಸಿದ್ದಕ್ಕೆ ಮಗನ ಕೈಯನ್ನೇ ಕತ್ತರಿಸಿದ ಅಪ್ಪ

Father chops off son hand: ಬೈಕಿನ ಕೀ ನೀಡಲು ನಿರಾಕರಿಸಿದ್ದಕ್ಕಾಗಿ ತಂದೆ ಮಗನ ಕೈಯನ್ನು ಕತ್ತರಿಸಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ 

Father chops off son hand for refusing to give him bike keys in Madhya Pradesh mnj
Author
Bengaluru, First Published Aug 5, 2022, 3:54 PM IST

ಮಧ್ಯಪ್ರದೇಶ (ಆ. 05):  ತನ್ನ ಬೈಕಿನ ಕೀ ನೀಡಲು ನಿರಾಕರಿಸಿದ್ದಕ್ಕಾಗಿ ತಂದೆ ಮತ್ತು ಚಿಕ್ಕಪ್ಪ ಯುವಕನ ಥಳಿಸಿ ಕೈಯನ್ನು ಕತ್ತರಿಸಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಬಾಬಾಯಿ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ತಂದೆ ಮೋತಿ ಕಚ್ಚಿ (52)  ಮೋಟಾರ್‌ಸೈಕಲ್‌ನ ಕೀಗಳನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಸಂತೋಷ್‌ ಮೇಲೆ ಹಲ್ಲೆ ನಡೆಸಿದ್ದಾನೆ. "ಮೋತಿ ಕಚ್ಚಿ ಪೊಲೀಸರಿಗೆ ಶರಣಾಗಿದ್ದಾರೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅನ್ವಯ ಅವರನ್ನು ಬಂಧಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. 

“ಮೋತಿ ಬೈಕಿನ ಕೀಗಳನ್ನು ಕೇಳಿದಾಗ ಸಂತೋಷ್ ನೀಡಲು ನಿರಾಕರಿಸಿದ. ಇದು ತಂದೆಗೆ ಕೋಪ ತರಿಸಿತು. ಆತನೊಂದಿಗೆ ಜಗಳವಾಡುತ್ತಿದ್ದ ಸಂತೋಷ್‌ಗೆ ತಂದೆ ಮತ್ತು ಆತನ ಸಹೋದರ ರಾಮ್ ಕಿಶನ್ ಥಳಿಸಿದ್ದಾರೆ. ಮೋತಿ ಸಮೀಪದಲ್ಲಿ ಬಿದ್ದಿದ್ದ ಕೊಡಲಿಯನ್ನು ಎತ್ತಿಕೊಂಡು ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಯುವಕನ ಎಡಗೈಯನ್ನು ಕತ್ತರಿಸಿದ್ದಾನೆ” ಎಂದು ವರದಿಗಳು ತಿಳಿಸಿವೆ. 

ಸಂತೋಷ್‌ ಹೆಂಡತಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಬಲ್ಪುರಕ್ಕೆ ಕರೆದೊಯ್ಯಲಾಗಿತ್ತು ಆದರೆ ಮತ್ತು ದಾರಿಯಲ್ಲಿ ಗಾಯಗೊಂಡು ಸಾವನ್ನಪ್ಪಿದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಮೋತಿ ಕಚ್ಚಿ ಕೈ ಮತ್ತು ಕೊಡಲಿಯೊಂದಿಗೆ ಬಾಬಾಯಿ ಪೊಲೀಸ್ ಠಾಣೆಗೆ ಹೋದರು ಎಂದು ವರದಿಗಳು ತಿಳಿಸಿವೆ. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು. 

ಪತ್ನಿಯನ್ನು ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ!

ಮಗನನ್ನು ಕೊಂದ ತಂದೆ: ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಆಘಾತಕಾರಿ ಘಟನೆ ನಡೆದಿತ್ತು. ಮದ್ಯ ಮತ್ತು ಮಾದಕ ವ್ಯಸನದಿಂದ ಬಳಲುತ್ತಿದ್ದ ತನ್ನ ಮಗನನ್ನು ಕೊಂದ ಆರೋಪದ ಮೇಲೆ 65 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ತಂದೆ ಮಗನ್ನು ಕೊಂದು ದೇಹದ ಭಾಗಗಳನ್ನು ಕತ್ತರಿಸಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದರು. 

ಅಹಮದಾಬಾದ್‌ನ ಅಂಬಾವಾಡಿ ನಿವಾಸಿ ಮತ್ತು ನಿವೃತ್ತ ಟ್ರಾಫಿಕ್ ಇನ್ಸ್‌ಪೆಕ್ಟರ್ ನೀಲೇಶ್ ಜೋಶಿ ಅವರನ್ನು ಶನಿವಾರ ಮಧ್ಯಾಹ್ನ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಅವಧ್ ಎಕ್ಸ್‌ಪ್ರೆಸ್ ರೈಲಿನಿಂದ ಬಂಧಿಸಲಾಗಿದೆ. ಆರೋಪಿ ಉತ್ತರ ಪ್ರದೇಶದ ಗೋರಖ್‌ಪುರ ಮೂಲಕ ನೇಪಾಳ ಗಡಿಗೆ ತೆರಳುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಮೃತರನ್ನು 21 ವರ್ಷದ ಸ್ವಯಂ ಜೋಶಿ ಎಂದು ಗುರುತಿಸಲಾಗಿದೆ. ಯುವಕ ಮಾದಕ ದ್ರವ್ಯ ಮತ್ತು ಮದ್ಯದ ಚಟದಿಂದ ಬಳಲುತ್ತಿದ್ದ, ಇದು ತಂದೆ-ಮಗನ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತುಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios