ಸ್ಟಂಟ್ ಮಿತಿ ಮೀರಿದ್ರೆ ಅಪಾಯ ಗ್ಯಾರಂಟಿ. ಸ್ಟಂಟ್ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯವಿದೆ. ಇಲ್ಲೊಬ್ಬ ವ್ಯಕ್ತಿ ಗೋಣಿ ಚೀಲದಲ್ಲಿ ಬಂಧಿ ಮಾಡ್ಕೊಂಡು ಸಮಾಧಿ ಸೇರಿದ್ದ. ಆಮೇಲೇನಾಯ್ತು ಗೊತ್ತಾ?

ಹರಿಯಾಣದ ನುಹ್ ನಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸ್ಟಂಟ್ ಹೆಸರಿನಲ್ಲಿ ಮೂರ್ಖತನಕ್ಕೆ ಕೈ ಹಾಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ. 27 ವರ್ಷದ ವ್ಯಕ್ತಿ ವಿಚಿತ್ರ ಸರ್ಕಸ್ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಅದೇ ಅವನ ಸಾವಿಗೆ ಕಾರಣವಾಗಿದೆ.

ಜೀವಂತ ಸಮಾಧಿ

ಸ್ಟಂಟ್ ಹೆಸರಿನಲ್ಲಿ ಮೊದಲು ಗೋಣಿ ಚೀಲದಲ್ಲಿ ಈತನನ್ನು ತುಂಬಲಾಗಿದೆ. ನಂತ್ರ ಸಮಾಧಿಗೆ ಹಾಕಿ ಮಣ್ಣು ಮುಚ್ಚಲಾಗಿದೆ. ಇನ್ನು ಮೂರು ದಿನಗಳಲ್ಲಿ ಆತ ಜೀವಂತವಾಗಿ ಹೊರ ಬರ್ತಾನೆ ಅಂತ ಪ್ರಚಾರ ಮಾಡಲಾಗಿದೆ. ಆದ್ರೆ ಮೂರು ದಿನಗಳ ನಂತ್ರ ಅಲ್ಲಿ ಆಗಿದ್ದೇ ಬೇರೆ. 

https://kannada.asianetnews.com/india-news/mohammad-junaid-who-was-seen-during-the-cjp-protest-has-claimed-he-was-ignored-after-the-movement-suc/articleshow-7y2d8ug

ಸಮಾಧಿ ತೆಗೆದಾಗ ಸಿಕ್ಕಿದ್ದು ಶವ

ಸಾಹಸಿಗಳ ಗುಂಪು ಸಮಾಧಿ ಮುಚ್ಚಿದ ಮೇಲೆ ಅದನ್ನು ತೆಗೆಯುವ ಪ್ರಯತ್ನಕ್ಕೆ ಹೋಗಲಿಲ್ಲ. ಮೂರನೇ ದಿನ ಸಮಾಧಿ ತೆಗೆದು, ಗೋಣಿ ಚೀಲ ಬಿಚ್ಚಿದಾಗ ದೀಪಕ್ ಹೆಣವಾಗಿದ್ದ. ಫರಿದಾಬಾದ್ನ ಗೌಂಚಿ ಗ್ರಾಮದ ನಿವಾಸಿ ದೀಪಕ್, ಪ್ರವಾಸಿ ಬೈಸಿಕಲ್ ಸರ್ಕಸ್ ನಲ್ಲಿ ಕೆಲ್ಸ ಮಾಡ್ತಿದ್ದ. ಸರ್ಕಸ್ ಸದ್ಯ ಟೌರುವಿನ ಖೋರಿ ಗ್ರಾಮಕ್ಕೆ ಬಂದಿದೆ.

https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs

ಜೀವಂತ ಸಮಾಧಿ ಮುನ್ನ ದೀಪಕ್ ಸಾಕಷ್ಟು ಸೈಕಲ್ ಸಾಹಸಗಳನ್ನು ಪ್ರದರ್ಶಿಸಿದ್ದರು. ನಂತ್ರ ಅವರನ್ನು ಸಮಾಧಿ ಮಾಡಲಾಯ್ತು. ಅದ್ರೆ ಸಮಾಧಿಯನ್ನು ಯಾವಾಗ ತೆಗೆದ್ರು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜೀವಂತ ಸಮಾಧಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಜೊತೆಗೆ ಒಂದು ದಿನ ಮಾತ್ರ ಅಲ್ಲಿರಲು ಅನುಮತಿ ನೀಡಲಾಗುತ್ತದೆ. ಎಷ್ಟೇ ಜಾಗರೂಕರಾಗಿದ್ದರೂ ಇಂಥಹ ಸಾಹಸಗಳು ಅಪಾಯಕಾರಿ. ಸಮಾಧಿಯ ಸೀಮಿತ ಜಾಗದಲ್ಲಿ ಬದುಕುಳಿಯುವುದು ಲಭ್ಯವಿರುವ ಆಮ್ಲಜನಕದ ಪ್ರಮಾಣ, ವಾತಾಯನ ಮತ್ತು ತಾಪಮಾನವನ್ನು ಅವಲಂಬಿಸಿರುತ್ತದೆ. ಆಮ್ಲಜನಕದ ಮಟ್ಟಗಳು ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಮಟ್ಟಗಳು ಹೆಚ್ಚಾದಂತೆ, ಉಸಿರಾಟವು ಕಷ್ಟಕರವಾಗುತ್ತದೆ. ಆಮ್ಲಜನಕದ ಮಟ್ಟಗಳು ತುಂಬಾ ಕಡಿಮೆಯಾದರೆ, ಅವರು ಪ್ರಜ್ಞಾಹೀನರಾಗಬಹುದು. ಉಸಿರುಗಟ್ಟಿ ಸಾಯುವ ಅಪಾಯವೂ ಇದೆ. ದೀಪಕ್ ಇದ್ರಲ್ಲಿ ಹತ್ತು ವರ್ಷಗಳ ಅನುಭವ ಹೊಂದಿದ್ದ. 2017 ರಲ್ಲಿ, ಪಾಣಿಪತ್ನಲ್ಲಿ 17 ವರ್ಷದ ಬಾಲಕ ಇದೇ ರೀತಿಯ ಸಾಹಸಕ್ಕೆ ಕೈ ಹಾಕಿ ಸಾವನ್ನಪ್ಪಿದ್ದ.