Asianet Suvarna News Asianet Suvarna News

Bengaluru: 19 ವರ್ಷಕ್ಕೆ ದೊಡ್ಡಪ್ಪನ ಮಗಳ ಪ್ರೀತಿಸಿದ ಶಶಾಂಕ: ಪೋಷಕರಿಂದಲೇ ಬೆಂಕಿ ಹಚ್ಚಿಸಿಕೊಂಡು ತ್ಯಜಿಸಿದ ಇಹಲೋಕ

ದೊಡ್ಡಪ್ಪನ ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಸಂಬಂಧಿಕರೇ  ಯುವಕನಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಶೇ.80 ಸುಟ್ಟ ಗಾಯಗಳಾಗಿದ್ದ ಯುವಕ 3 ದಿನದ ಬಳಿಕ ಸಾವನ್ನಪ್ಪಿದ್ದಾನೆ. 

Bengaluru PES college student kidnapped and set on fire case young man death sat
Author
First Published Jul 18, 2023, 5:59 PM IST

ಬೆಂಗಳೂರು (ಜು.18):  ಚಾಮರಾಜನಗರ ಮೂಲದ ದೊಡ್ಡಪ್ಪನ ಮಗಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವತಃ ದೊಡ್ಡಪ್ಪನ ಕುಟುಂಬಸ್ಥರು ಯುವಕನನ್ನು ಕಿಡ್ನಾಪ್‌ ಮಾಡಿ ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಬೆನ್ನಲ್ಲೇ ಶೇ.80 ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 19 ವರ್ಷದ ಯುವಕ ಶಶಾಂಕ್‌ ಇಂದು ಸಾವನ್ನಪ್ಪಿದ್ದಾನೆ.

ಬೆಂಗ​ಳೂರಿನ ಆರ್‌.ಆರ್‌.ನಗರದ 12ನೇ ಕ್ರಾಸ್‌ ನಿವಾಸಿ ರಂಗ​ನಾಥ್‌ ಮತ್ತು ಪ್ರೇಮಾ ದಂಪತಿ ಪುತ್ರ ಶಶಾಂಕ್‌ ಎಂಬಾ​ತನೇ ತನ್ನ ದೊಡ್ಡಪ್ಪನಿಂದ ದುಷ್ಕೃ​ತ್ಯಕ್ಕೆ ಒಳ​ಗಾದ ಯುವ​ಕ​. ಈತ ಎಸಿ​ಎಸ್‌ ಕಾಲೇ​ಜಿ​ನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡು​ತ್ತಿದ್ದಾನೆ. ಈತನ ದೊಡ್ಡಪ್ಪ ಚಾಮ​ರಾ​ಜ​ನ​ಗರ ಜಿಲ್ಲೆ ಹರ​ದ​ನ​ಹಳ್ಳಿ ನಿವಾಸಿ ಮನು (ಮಹೇಶ್‌) ಎಂಬಾತನೇ ಈ ದುಷ್ಕೃತ್ಯ ಎಸಗಿದ್ದು, ಆತ ಹಾಗೂ 6 ಮಂದಿಯ ವಿರುದ್ಧ ಕುಂಬ​ಳ​ಗೂಡು ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖಲಾಗಿದೆ. ಘಟನೆಯಲ್ಲಿ ಶಶಾಂಕ್‌ನಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪ​ತ್ರೆ​ಗೆ ದಾಖ​ಲಿಸಲಾಗಿತ್ತು. ಆದರೆ, ಮೂರು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. 

Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇತ ಊರು ಬಿಟ್ಟ ಆರೋಪಿ

ಘಟನೆ ವಿವ​ರ: ಶಶಾಂಕ್‌ ತನ್ನ ದೊಡ್ಡಪ್ಪ ಮನು​ ಅವರ ಪುತ್ರಿ ಲಹರಿಯನ್ನು ಪ್ರೀತಿ​ಸು​ತ್ತಿ​ದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷ​ಕರ ವಿರೋಧವಿತ್ತು. ಅಲ್ಲದೆ, ಈ ವಿಚಾ​ರ​ವಾಗಿ ಶಶಾಂಕ್‌ಗೆ ಮನು​ ಹಲ​ವಾರು ಬಾರಿ ಬುದ್ಧಿ ಮಾತು ಕೂಡ ಹೇಳಿ​ದ್ದ​ರು. ಆದರೆ, ಬುದ್ಧಿಮಾತಿಗೆ ಶಶಾಂಕ್‌ ಬೆಲೆ ಕೊಟ್ಟಿರಲಿಲ್ಲ. ಈ ಮಧ್ಯೆ, ಜುಲೈ 3ರಂದು ಮೈಸೂ​ರಿ​ನಿಂದ ಬೆಂಗ​ಳೂ​ರಿ​ಗೆ ಬಂದಿದ್ದ ಲಹರಿಯನ್ನು ತನ್ನ ಮನೆಗೆ ಶಶಾಂಕ್‌ ಕರೆ​ದೊ​ಯ್ದಿ​ದ್ದ. ಈ ವಿಷಯ ತಿಳಿದು ಆಕ್ರೋಶಗೊಂಡ ಮನು, ಮನೆಗೇ ನುಗ್ಗಿ ಶಶಾಂಕ್‌ ಮೇಲೆ ಹಲ್ಲೆ ನಡೆಸಿ, ಪುತ್ರಿಯನ್ನು ಕರೆ​ದೊ​ಯ್ದಿದ್ದರು.

ಕೋಪದಿಂದ ಕಿಡ್ನಾಪ್‌ ಮಾಡಿ ಬೆಂಕಿ ಹಚ್ಚಿದರು:  ಈ ಮಧ್ಯೆ, ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಶಶಾಂಕ್‌ ಎಂದಿನಂತೆ ಕಾಲೇ​ಜಿಗೆ ತೆರ​ಳಿದ್ದ. ತರ​ಗ​ತಿ ಇಲ್ಲದ ಕಾರಣ ಬೆಳಗ್ಗೆ 9.30ರ ವೇಳೆ ಮನೆಗೆ ವಾಪ​ಸ್ಸಾ​ಗುತ್ತಿದ್ದ. ಈ ವೇಳೆ, ಆರ್‌.ಆರ್‌.ಮೆಡಿ​ಕಲ್‌ ಕಾಲೇಜು ಬಳಿ ಇನೋವಾ ಕಾರಿ​ನಲ್ಲಿ ಬಂದ ಮನು ಬಲ​ವಂತವಾಗಿ ಎಳೆ​ದು ಶಶಾಂಕ್‌ನನ್ನು ಕಾರಿ​ನಲ್ಲಿ ಕೂರಿ​ಸಿ​ಕೊಂಡರು. ಈ ವೇಳೆ, ಕಾರಿ​ನ​ಲ್ಲಿದ್ದ ಇನ್ನು 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾ​ಯಿಗೆ ಬಟ್ಟೆತುರುಕಿ, ಬಲ​ವಂತ​ವಾಗಿ ಕಣಿ​ಮಿ​ಣಿಕೆ ಟೋಲ್‌ ಬಳಿಯಿರುವ ಖಾಲಿ ಜಾಗಕ್ಕೆ ಕರೆ​ದೊಯ್ದರು. ‘ಲಹ​ರಿ​ಯನ್ನು ಪ್ರೀತಿ ಮಾಡು​ತ್ತೀಯಾ? ನಿನಗೆ ಎಷ್ಟುಬಾರಿ ಹೇಳು​ವುದು’ ಎಂದು ಕೋಪ​ದಿಂದ ಶಶಾಂಕ್‌ನ ಮೇಲೆ ಹಲ್ಲೆ ನಡೆಸಿದರು. ಕಾರಿ​ನಿಂದ ಕೆಳ​ಗಿ​ಳಿಸಿ, ಪೆಟ್ರೋಲ್‌ ಸುರಿದು, ಬೆಂಕಿ ಹಚ್ಚಿ, ಆತನನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದರು.

Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು

ಸಂಬಂಧಿಕರಿಕೆ ಕರೆ ಮಾಡಿ ಆಸ್ಪತ್ರೆ ಸೇರಿದ್ದ: ಇಷ್ಟಾದರೂ ತಾನು ಹೇಗಾದರೂ ಮಾಡಿ ಬದುಕಲೇಬೇಕು ಎಂದು ನಿರ್ಧರಿಸಿದ ಶಶಾಂಕ್‌ ಅಲ್ಲಿಯೇ ನೆಲದ ಮೇಲೆ ಹೊರ​ಳಾಡಿ, ಬೆಂಕಿ ಆರಿಸಿಕೊಂಡಿದ್ದಾನೆ. ಮೈಎಲ್ಲಾ ಸುಟ್ಟಗಾಯಗಳಿಂದ ನರಳುತ್ತಿದ್ದರೂ, ಆ ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ ಎಂಬುವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಹೀರಾ ಮತ್ತು ಶಶಾಂಕನ ಕುಟುಂಬ ಸದಸ್ಯರು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆ​ಗೆ ದಾಖ​ಲಿ​ಸಿದರು. ನಂತರ ಅವನಿಗೆ ಪ್ರಥಮ ಚಿಕಿತ್ಸೆ ನೀಡಿದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇನ್ನು ಶಶಾಂಕ್‌ ಅವರ ದೇಹದ ಶೇ.80ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಬದುಕುಳಿಯದೇ ಮಂಗಳವಾರ ಪ್ರಾಣವನ್ನೇ ಬಿಟ್ಟಿದ್ದಾನೆ.

Follow Us:
Download App:
  • android
  • ios