Asianet Suvarna News Asianet Suvarna News

Bengaluru: ಮಗಳನ್ನು ಪ್ರೀತಿಸಿದ ಯುವಕನ ಕಿಡ್ನಾಪ್ ಮಾಡಿ ಬೆಂಕಿ ಇಟ್ಟ ಪ್ರಕರಣ, ಕುಟುಂಬ ಸಮೇತ ಊರು ಬಿಟ್ಟ ಆರೋಪಿ

ಪುತ್ರಿಯನ್ನು ಶಶಾಂಕ್‌ ಪ್ರೀತಿಸುತ್ತಿದ್ದನೆಂದು ಸಿಟ್ಟಿಗೆದ್ದು ಯುವಕನನ್ನು ಅಪಹರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದ ಮನು ಮತ್ತು ಕುಟುಂಬ ಈಗ ಇಡೀ ಮನೆ ಖಾಲಿ ಮಾಡಿ ಎಸ್ಕೇಪ್ ಆಗಿದೆ

Bengaluru college student kidnapped and set on fire case  accused escaped with family gow
Author
First Published Jul 17, 2023, 1:17 PM IST

ಚಾಮರಾಜನಗರ (ಜು.17): ತನ್ನ ಪುತ್ರಿಯನ್ನು ಪ್ರೀತಿಸುತ್ತಿದ್ದಕ್ಕಾಗಿ ಆಕ್ರೋಶಗೊಂಡು ತನ್ನ ಸೋದರ ಸಂಬಂಧಿ ಯುವಕನ ಮೇಲೆ ಪೆಟ್ರೋಲ್‌ ಸುರಿದು, ಆತನ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಮನು ಅವರು ಕುಟುಂಬ ಸಮೇತರಾಗಿ ಮನೆ ಖಾಲಿ ಮಾಡಿದ್ದಾರೆ.  ಬೆಂಗ​ಳೂರು ದಕ್ಷಿಣ ತಾಲೂ​ಕಿನ ಕಣಿ​ಮಿ​ಣಿಕೆ ಟೋಲ್‌ ಬಳಿ ಶನಿ​ವಾರ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮನು ಹಾಗೂ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಮನು ಹಾಗೂ ಕುಟುಂಬಸ್ಥರು ಊರು ಬಿಟ್ಟಿದ್ದಾರೆ.

ಘಟನೆ  ಹಿನ್ನೆಲೆ: ಬೆಂಗ​ಳೂರಿನ ಆರ್‌.ಆರ್‌.ನಗರದ 12ನೇ ಕ್ರಾಸ್‌ ನಿವಾಸಿ ರಂಗ​ನಾಥ್‌ ಮತ್ತು ಪ್ರೇಮಾ ದಂಪತಿ ಪುತ್ರ ಶಶಾಂಕ್‌ ಎಂಬಾ​ತನೇ ತನ್ನ ದೊಡ್ಡಪ್ಪನಿಂದ ದುಷ್ಕೃ​ತ್ಯಕ್ಕೆ ಒಳ​ಗಾದ ಯುವ​ಕ​. ಈತ ಎಸಿ​ಎಸ್‌ ಕಾಲೇ​ಜಿ​ನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡು​ತ್ತಿದ್ದಾನೆ. ಈತನ ದೊಡ್ಡಪ್ಪ ಚಾಮ​ರಾ​ಜ​ನ​ಗರ ಜಿಲ್ಲೆ ಹರ​ದ​ನ​ಹಳ್ಳಿ ನಿವಾಸಿ ಮನು ಎಂಬಾತನೇ ಈ ದುಷ್ಕೃತ್ಯ ಎಸಗಿದ್ದು, ಆತ ಹಾಗೂ 6 ಮಂದಿಯ ವಿರುದ್ಧ ಕುಂಬ​ಳ​ಗೂಡು ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖಲಾಗಿದೆ. ಘಟನೆಯಲ್ಲಿ ಶಶಾಂಕ್‌ನಿಗೆ 50%ರಷ್ಟುಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪ​ತ್ರೆ​ಗೆ ದಾಖ​ಲಿಸಲಾಗಿದೆ.

ಮೂರು ವರ್ಷಗಳ ಹಿಂದೆ ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದಕ್ಕೆ ಬೆಳಗಾವಿಯಲ್ಲಿ ರಫೀಕ್ ಮುಲ್ಲಾ ಹತ್ಯೆ!

ಘಟನೆ ವಿವ​ರ: ಶಶಾಂಕ್‌ ತನ್ನ ದೊಡ್ಡಪ್ಪ ಮನು​ ಅವರ ಪುತ್ರಿ ಲಹರಿಯನ್ನು ಪ್ರೀತಿ​ಸು​ತ್ತಿ​ದ್ದ. ಇವರಿಬ್ಬರ ಪ್ರೀತಿಗೆ ಯುವತಿಯ ಪೋಷ​ಕರ ವಿರೋಧವಿತ್ತು. ಅಲ್ಲದೆ, ಈ ವಿಚಾ​ರ​ವಾಗಿ ಶಶಾಂಕ್‌ಗೆ ಮನು​ ಹಲ​ವಾರು ಬಾರಿ ಬುದ್ಧಿ ಮಾತು ಕೂಡ ಹೇಳಿ​ದ್ದ​ರು. ಆದರೆ, ಬುದ್ಧಿಮಾತಿಗೆ ಶಶಾಂಕ್‌ ಬೆಲೆ ಕೊಟ್ಟಿರಲಿಲ್ಲ. ಈ ಮಧ್ಯೆ, ಜುಲೈ 3ರಂದು ಮೈಸೂ​ರಿ​ನಿಂದ ಬೆಂಗ​ಳೂ​ರಿ​ಗೆ ಬಂದಿದ್ದ ಲಹರಿಯನ್ನು ತನ್ನ ಮನೆಗೆ ಶಶಾಂಕ್‌ ಕರೆ​ದೊ​ಯ್ದಿ​ದ್ದ. ಈ ವಿಷಯ ತಿಳಿದು ಆಕ್ರೋಶಗೊಂಡ ಮನು, ಮನೆಗೇ ನುಗ್ಗಿ ಶಶಾಂಕ್‌ ಮೇಲೆ ಹಲ್ಲೆ ನಡೆಸಿ, ಪುತ್ರಿಯನ್ನು ಕರೆ​ದೊ​ಯ್ದಿದ್ದರು.

ಈ ಮಧ್ಯೆ, ಜುಲೈ 15ರಂದು ಬೆಳಗ್ಗೆ 8 ಗಂಟೆಗೆ ಶಶಾಂಕ್‌ ಎಂದಿನಂತೆ ಕಾಲೇ​ಜಿಗೆ ತೆರ​ಳಿದ್ದ. ತರ​ಗ​ತಿ ಇಲ್ಲದ ಕಾರಣ ಬೆಳಗ್ಗೆ 9.30ರ ವೇಳೆ ಮನೆಗೆ ವಾಪ​ಸ್ಸಾ​ಗುತ್ತಿದ್ದ. ಈ ವೇಳೆ, ಆರ್‌.ಆರ್‌.ಮೆಡಿ​ಕಲ್‌ ಕಾಲೇಜು ಬಳಿ ಇನೋವಾ ಕಾರಿ​ನಲ್ಲಿ ಬಂದ ಮನು ಬಲ​ವಂತವಾಗಿ ಎಳೆ​ದು ಶಶಾಂಕ್‌ನನ್ನು ಕಾರಿ​ನಲ್ಲಿ ಕೂರಿ​ಸಿ​ಕೊಂಡರು. ಈ ವೇಳೆ, ಕಾರಿ​ನ​ಲ್ಲಿದ್ದ ಇನ್ನು 6 ಮಂದಿ ಆತನ ಕಣ್ಣಿಗೆ ಬಟ್ಟೆಕಟ್ಟಿ, ಬಾ​ಯಿಗೆ ಬಟ್ಟೆತುರುಕಿ, ಬಲ​ವಂತ​ವಾಗಿ ಕಣಿ​ಮಿ​ಣಿಕೆ ಟೋಲ್‌ ಬಳಿಯಿರುವ ಖಾಲಿ ಜಾಗಕ್ಕೆ ಕರೆ​ದೊಯ್ದರು. ‘ಲಹ​ರಿ​ಯನ್ನು ಪ್ರೀತಿ ಮಾಡು​ತ್ತೀಯಾ? ನಿನಗೆ ಎಷ್ಟುಬಾರಿ ಹೇಳು​ವುದು’ ಎಂದು ಕೋಪ​ದಿಂದ ಶಶಾಂಕ್‌ನ ಮೇಲೆ ಹಲ್ಲೆ ನಡೆಸಿದರು. ಕಾರಿ​ನಿಂದ ಕೆಳ​ಗಿ​ಳಿಸಿ, ಪೆಟ್ರೋಲ್‌ ಸುರಿದು, ಬೆಂಕಿ ಹಚ್ಚಿ, ಆತನನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾದರು.

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಕೊಲೆ, 5 ಆರೋಪಿಗಳು ಅರೆಸ್ಟ್, ಹತ್ಯೆಯ ಮಾಸ್ಟರ್‌ ಮೈಂಡ್‌ಗೆ ಶೋಧ

ಶಶಾಂಕ್‌ ಅಲ್ಲಿಯೇ ನೆಲದ ಮೇಲೆ ಹೊರ​ಳಾಡಿ, ಬೆಂಕಿ ಆರಿಸಿಕೊಂಡು, ಆ ನೋವಿನಲ್ಲಿಯೇ ತನ್ನ ಸಂಬಂಧಿ ಹೀರಾ ಎಂಬುವರಿಗೆ ವಿಷಯ ತಿಳಿಸಿದ. ಹೀರಾ ಅವರು ತಮ್ಮ ಕುಟುಂಬ ಸದಸ್ಯರ ಜೊತೆ ಆಗಮಿಸಿ, ಆ್ಯಂಬುಲೆನ್ಸ್‌ನಲ್ಲಿ ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆ​ಗೆ ದಾಖ​ಲಿ​ಸಿದರು. ಶಶಾಂಕ್‌ ಅವರ ದೇಹದ 50%ರಷ್ಟುಭಾಗ ಸುಟ್ಟು ಹೋಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕುಂಬಳಗೋಡು ಠಾಣೆ ಪೊಲೀಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Bengaluru college student kidnapped and set on fire case  accused escaped with family gow

Follow Us:
Download App:
  • android
  • ios