Asianet Suvarna News Asianet Suvarna News

ಬೆಂಗಳೂರಿನ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ತಮಿಳುನಾಡಿನಲ್ಲಿ ಭೀಕರ ಹತ್ಯೆ!

ಬೆಂಗಳೂರು ದಕ್ಷಿಣ ವಿಭಾಗದ ನಟೋರಿಯಸ್ ರೌಡಿಯಾಗಿದ್ದ ಸುರೇಶ್ ಬಾಬು ಅಲಿಯಾಸ್  ಅಲ್ಯೂಮಿನಿಯಂ ಬಾಬುವನ್ನು ಹತ್ಯೆ ಮಾಡಲಾಗಿದೆ.

Bengaluru notorious rowdy Sheeter Aluminum Babu brutally murdered in Tamil Nadu gow
Author
First Published May 21, 2023, 1:20 PM IST

ಬೆಂಗಳೂರು (ಮೇ.21): ಬೆಂಗಳೂರು ದಕ್ಷಿಣ ವಿಭಾಗದ ನಟೋರಿಯಸ್ ರೌಡಿಯಾಗಿದ್ದ ಸುರೇಶ್ ಬಾಬು ಅಲಿಯಾಸ್  ಅಲ್ಯೂಮಿನಿಯಂ ಬಾಬುವನ್ನು ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ  ತಮಿಳುನಾಡಿನ ಕೃಷ್ಣಗಿರಿ ಸಮೀಪ ಭೀಕರ ಹತ್ಯೆ ಮಾಡಲಾಗಿದೆ. ಜಯನಗರ ಠಾಣೆ ರೌಡಿಶೀಟರ್ ಆಗಿದ್ದ ಅಲ್ಯೂಮಿನಿಯಂ ಬಾಬು. ಕೊಲೆ, ಸುಲಿಗೆ, ಬೆದರಿಕೆ, ದರೋಡೆಯಂತ ಹಲವು ಪ್ರಕರಣಗಳಲ್ಲಿ ಬಾಬು ಭಾಗಿಯಾಗಿದ್ದ. ತಿಲಕ್ ನಗರ ಜಲ್ಲಿ ವೆಂಕಟೇಶ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಲ್ಯೂಮಿನಿಯಂ ಬಾಬು ಇತ್ತೀಚೆಗೆ ತಮಿಳುನಾಡು ಕಡೆ ತನ್ನ ವಾಸ್ತವ್ಯ ಬದಲಿಸಿದ್ದ.

ದಾವಣಗೆರೆಯಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸಿದ

ತಮಿಳುನಾಡಿನ ಡೆಂಕಣಕೋಟೆ  ಕಾಡಿನಲ್ಲಿ ಈತನ ಶವ ಪತ್ತೆಯಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಬೆಂಗಳೂರಿನಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈತ ಬೆಂಗಳೂರಿನ ಕೊತ್ತನೂರು ದಿಣ್ಣೆ ಬಳಿ ಹಾಲೋಬ್ರಿಕ್ಸ್   ವ್ಯವಹಾರ ನಡೆಸುತಿದ್ದ. ಬೆಂಗಳೂರಿನ ಕೆಲ ರಾಜಕಾರಣಿ ಗಳನ್ನು ಎದುರು ಹಾಕಿಕೊಂಡಿದ್ದ. ಅರಸಯ್ಯ ನ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಬಾಬು ಹಲವು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿದ್ದ. ಘಟನೆ ಸಂಭಂದ ತಮಿಳುನಾಡಿನ ತಳಿ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

ಪ್ರಭಾವಿ ರಾಜಕಾರಣಿಯ ಕೆರೆ ಸ್ವಚ್ಛಗೊಳಿಸುವ ನೆಪಕ್ಕೆ ಕಲುಷಿತ ನೀರು ಕುಡಿದು ಜಾನುವಾರು ಸಾವು!

Follow Us:
Download App:
  • android
  • ios