Asianet Suvarna News Asianet Suvarna News

Bengaluru: ಹೆತ್ತ ಮಗನನ್ನೇ ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ ನಿಷ್ಕರುಣಿ ತಾಯಿ

ಮದ್ಯವ್ಯಸನಿ ಮಗನನ್ನು ಹೆತ್ತ ತಾಯಿಯೇ ಪೆಟ್ರೋಲ್‌ ಸುರಿದು ಸುಟ್ಟು ಹಾಕಿರುವ ದುರ್ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

Bengaluru heartless mother burnt her son with petrol sat
Author
First Published Jul 17, 2023, 9:38 PM IST

ಬೆಂಗಳೂರು (ಜು.17): ಪ್ರತಿನಿತ್ಯ ಕುಡಿದು ಬಂದು ತಾಯಿ ಎಂಬುದನ್ನೂ ನೋಡದೇ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ ಮದ್ಯವ್ಯಸನಿ ಮಗನನ್ನು ಹೆತ್ತ ತಾಯಿಯೇ ಪೆಟ್ರೋಲ್‌ ಸುರಿದು ಸುಟ್ಟು ಹಾಕಿರುವ ದುರ್ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಹೆತ್ತ ತಾಯಿಯೇ ಮಗನ ಕಿರುಕುಳವನ್ನು ತಾಳಲಾರದೇ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾಳೆ. ಕೊಲೆಯಾದ ವ್ಯಕ್ತಿಯನ್ನು ಚಾಂದ್ ಪಾಷ (40) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ತಾಯಿ ಸೂಫಿಯಾ (60) ಆಗಿದ್ದಾಳೆ. ಇನ್ನು ಘಟನೆಗೆ ಬರುವುದಾದರೆ ಚಾಂದ್‌ ಪಾಷ ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಸೂಖಾಸುಮ್ಮನೆ ಜಗಳ ಮಾಡುತ್ತಿದ್ದನು. ಜೋರಾಗಿ, ಕೂಗಾಡುತ್ತಾ ಹಲ್ಲೆ ಮಾಡುತ್ತಿದ್ದನು. ಗಂಡನ ಹಲ್ಲೆಯನ್ನು ತಾಳಲಾರದೇ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಆದರೂ, ಬುದ್ಧಿ ಕಲಿಯದ ಚಾಂದ್‌ ಪಾಷ ಮತ್ತೆ ಮದ್ಯವ್ಯಸನವನ್ನು ಮುಂದುವರೆಸಿದ್ದನು. ಇನ್ನು ಹೆಂಡತಿ ಇಲ್ಲದ್ದರಿಂದ ಆಕೆಯನ್ನು ಕರೆತರುವಂತೆ ತಾಯಿಯೊಂದಿಗೆ ಜಗಳ ಮಾಡುತ್ತಾ ಹಲ್ಲೆಯನ್ನು ಮಾಡಿದ್ದಾನೆ.

Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು

ಹೆಂಡತಿ ಬಿಟ್ಟು ಹೋದರೂ ಬುದ್ಧಿ ಬರಲಿಲ್ಲ: ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಾ ಹಲ್ಲೆ ನಡೆಸುತ್ತಿದ್ದ ಪುತ್ರ ಚಾಂದ್‌ ಪಾಷನ ಕಿರುಕುಳದಿಂದ ಬೇಸತ್ತಿದ್ದ ವೃದ್ಧೆ ಸೂಫಿಯಾ ಮಗನಿಗೆ ತಿದ್ದಿಕೊಂಡು ಜೀವನ ಮಾಡುವಂತೆ ಹಲವು ಬಾರಿ ಬುದ್ಧಿ ಹೇಳಿದ್ದಾಳೆ. ಆದರೆ, ಇದ್ಯಾವುದನ್ನೂ ಕೇಳದೆ ಕಿರುಕುಳ ನೀಡುತ್ತಿದ್ದ ಮಗನನ್ನೇ ಕೊಲೆ ಮಾಡಲು ತಾಯಿ ಸೂಫಿಯಾ ನಿರ್ಧರಿಸಿದ್ದಾಳೆ. ಅದರಂತೆ, ಸೋಮವಾರವೂ ಎಂದಿನಂತೆ ಚಾಂದ್ ಪಾಷ ಕುಡಿದು ಗಲಾಟೆ ಮಾಡಿದ್ದಾನೆ. ಸಂಜೆ ಸುಮಾರು 4:45ರ ವೇಳೆಗೆ ಜೋರಾಗಿ ಬೈತ್ತಾ ಕುಳಿತಿದ್ದ ವೇಳೆ ಮಗನ ಮೇಲೆ ತಾಯಿಯೇ ಪೆಟ್ರೋಲ್‌ ಸುರಿದು ಕೂಡಲೇ ಬೆಂಕಿ ಹಚ್ಚಿದ್ದಾಳೆ.

ಸ್ಥಳೀಯರು ರಕ್ಷಣೆ ಮಾಡಿದರೂ ಜೀವ ಉಳಿಯಲಿಲ್ಲ:  ಇದರಿಂದ ಬೆಂಕಿಯಲ್ಲಿ ಸುಟ್ಟು ಚೀರಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ನೀರು ಹಾಕಿ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ ಸುರಿದಿದ್ದರಿಂದ ಶೇ.80ಕ್ಕು ಅಧಿಕ ದೇಹದ ಭಾಗಗಳು ಸುಟ್ಟು ಹೋಗಿದ್ದವು. ಹೀಗಾಗಿ, ಆಸ್ಪತ್ರೆಗೆ ಹೋಗುವ ಮೊದಲೇ ಮದ್ಯವ್ಯಸನಿ ಚಾಂದ್‌ಪಾಷ ಜೀವ ಬಿಟ್ಟಿದ್ದಾನೆ. ಈ ದುರ್ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಪೊಲೀಸರು ಮಗನನ್ನೇ ಕೊಲೆ ಮಾಡಿದ ನಿಷ್ಕರುಣಿ ತಾಯಿ ಸೂಫಿಯಾಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಮದ್ಯವ್ಯಸನದಿಂದ ಇಡೀ ಕುಟುಂಬದ ನೆಮ್ಮದಿಯೇ ಹಾಳಾಗಿ ಹೋಗಿದೆ.

ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಕ್ಕೆ ಅವಮಾನ, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ: ಬೆಂಗಳೂರು (ಜು.17): ಬೆಂಗಳೂರಿನ ಪಿಇಎಸ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮೊಬೈಲ್‌ ನೋಡಿಕೊಂಡು ಕಾಪಿ ಮಾಡುತ್ತಿದ್ದುದನ್ನು ಗುರುತಿಸಿದ ಉಪನ್ಯಾಸಕರು ಆತನ ಮೊಬೈಲ್‌ ಕಸಿದುಕೊಂಡು ಹೊರಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಪಿಇಎಸ್‌ ಕಾಲೇಜಿನ 8ನೇ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯನ್ನು ಆದಿತ್ಯ ಪ್ರಭು (19) ಎಂದು ಗುರುತಿಸಲಾಗಿದೆ. 

Temple Mobile Ban:ಕರ್ನಾಟಕದ ಮುಜರಾಯಿ ದೇವಸ್ಥಾನಗಳಲ್ಲಿ ಮೊಬೈಲ್‌ ಬಳಕೆ ನಿಷೇಧ

ತಾಯಿಗೆ ಕರೆ ಮಾಡಿ ತಿಳಿಸಿದ್ದ ಉಪನ್ಯಾಸಕ:  ಬಿಇ ವಿದ್ಯಾರ್ಥಿ ಆಗಿರುವ ಆದಿತ್ಯ ಪ್ರಭು, ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಕಾಪಿ ಹೊಡೆಯುತ್ತಿದ್ದನು. ಈ ವೇಳೆ ಕಾಲೇಜಿನ ಉಪನ್ಯಾಸಕರು ಮೊಬೈಲ್‌ ಕಿತ್ತುಕೊಂಡು ಹೊರಗೆ ಕಳುಹಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಉಪನ್ಯಾಸಕರು ವಿದ್ಯಾರ್ಥಿ ಆದಿತ್ಯ ಪ್ರಭು ಅವರ ತಾಯಿಗೆ ಕರೆ ಮಾಡಿ ಕಾಪಿ ಹೊಡೆಯುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಾಲೇಜಿನ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರ್ಯಾದೆ ಹೋಗುತ್ತೆ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios