Asianet Suvarna News Asianet Suvarna News

Andhra Pradesh: ಡ್ರಮ್‌ನಲ್ಲಿ ಸಿಕ್ತು ಮಹಿಳೆಯ ಡೆಡ್‌ಬಾಡಿ ಪೀಸ್‌; ವರ್ಷದ ಹಿಂದೆ ಪತ್ನಿ ಕೊಂದಿದ್ದ ಪಾಪಿ ಪತಿ..!

ಆಂಧ್ರ ಪ್ರದೇಶದ ವಿಶಾಖಪಟ್ಟಣದ ಲಾಕ್‌ ಆಗಿದ್ದ ಬಾಡಿಗೆ ಮನೆಯಲ್ಲಿದ್ದ ಡ್ರಮ್‌ ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿದೆ. ಈ ಮೃತದೇಹ ಕಳೆದ ಒಂದು ವರ್ಷದಿಂದ ಇಲ್ಲೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

andhra womans body parts found in a drum cops found over a year old ash
Author
First Published Dec 5, 2022, 6:07 PM IST

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಕಳೆದ ತಿಂಗಳು ಅಫ್ತಾಬ್‌ ಅಮೀನ್‌ ಪೂನಾವಾಲ (Aftab Amin Poonawalla) ಅವರನ್ನು ಬಂಧಿಸಿದ ಬಳಿಕ ದೇಶ ಬೆಚ್ಚಿಬಿದ್ದಿತ್ತು. ಇದಕ್ಕೆ ಕಾರಣ ಈ ಆರೋಪಿ ಶ್ರದ್ಧಾ ವಾಕರ್‌ಳನ್ನು (Shraddha Walkar) ಕೊಂದಿರುವ ರೀತಿ. ಲಿವ್ - ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್‌ ಮೃತ ದೇಹವನ್ನು 35 ಪೀಸ್‌ಗಳನ್ನಾಗಿ ಮಾಡಿ ಸಾಯಿಸಿದ್ದಾನೆ ಎನ್ನುವ ಆರೋಪ ಕೇಳಿಬಂದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಈಗ, ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲೂ (Visakhapatnam) ಇಂತದ್ದೇ ಭೀಕರ ಪ್ರಕರಣವೊಂದು ವರದಿಯಾಗಿದೆ. 

ಆಂಧ್ರ ಪ್ರದೇಶದ ವಿಶಾಖಪಟ್ಟಣದ ಲಾಕ್‌ ಆಗಿದ್ದ ಬಾಡಿಗೆ ಮನೆಯಲ್ಲಿದ್ದ ಡ್ರಮ್‌ (Drum) ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿದೆ. ಅಲ್ಲದೆ, ಈ ಮೃತದೇಹದ ಭಾಗ ಕಳೆದ ಒಂದು ವರ್ಷದಿಂದ ಇಲ್ಲೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಡಿಗೆದಾರ ಮನೆಯ ಬಾಡಿಗೆಯನ್ನು ನೀಡಿಲ್ಲದ ಕಾರಣ ಆ ಮನೆಯ ಮಾಲೀಕ, ತನ್ನ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿದ ಬಳಿಕ ಮಹಿಳೆಯ ಮೃತದೇಹದ ಭಾಗಗಳನ್ನು ಮಲೀಕ ಪತ್ತೆಹಚ್ಚಿದ್ದಾರೆ. ನಂತರ ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: Hubli Crime: ಉಪಟಳ ತಾಳಲಾರದೆ ಮಗನನ್ನೇ ಕೊಲೆ ಮಾಡಿಸಿದ ತಂದೆ

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಮಧುರವಾಡದಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಲು ಮನೆಯ ಮಾಲೀಕರು ಬಲವಂತವಾಗಿ ಮನೆಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಜೂನ್ 2021 ರಲ್ಲಿ, ಬಾಡಿಗೆದಾರ ತನ್ನ ಹೆಂಡತಿ ಗರ್ಭಿಣಿಯಾಗಿದ್ದಾರೆಂದು ಹೇಳಿ ಬಾಕಿ ಪಾವತಿಸದೆ ಮನೆ ಖಾಲಿ ಮಾಡಿದ್ದಾನೆ. ಹಾಗೂ, ನಂತರ ಒಮ್ಮೆ ಬಾಡಿಗೆದಾರ ಹಿಂದಿನ ಬಾಗಿಲಿನಿಂದ ಆ ಮನೆಗೆ ಪ್ರವೇಶಿಸಿದ್ದರೂ, ಮಾಲೀಕನಿಗೆ ಹಣ ನೀಡಿರಲಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮನೆಯ ಮಾಲೀಕ ಇಂದು ಬಲವಂತವಾಗಿ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಡ್ರಮ್‌ನಲ್ಲಿ ಮಹಿಳೆಯ ಮೃತ ದೇಹದ ಭಾಗಗಳು ಸಿಕ್ಕಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಶಾಖಪಟ್ಟಣಂ ನಗರ ಪೊಲೀಸ್‌ ಆಯುಕ್ತ ಸಿ.ಎಚ್. ಶ್ರೀಕಾಂತ್ ಹೇಳಿದರು. ಇನ್ನು, ಪ್ರಾಥಮಿಕ ಪುರಾವೆಗಳು ಒಂದು ವರ್ಷದ ಹಿಂದೆ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ತೋರಿಸುತ್ತದೆ. ಆದರೆ, ಅದು ಈಗ ಪತ್ತೆಯಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru crime : ಕೈಕಾಲು ಸ್ವಾಧೀನವಿಲ್ಲದ ಪತ್ನಿಯನ್ನು ಕೊಂದ ಪತಿ

ಅಲ್ಲದೆ, ಈ ಮೃತದೇಹ ಆ ಬಾಡಿಗೆ ಮನೆಯಲ್ಲಿದ್ದ ಹೆಂಡತಿಯದ್ದು ಇರಬಹುದು ಎಂದು ನಾವು ಅನುಮಾನಿಸುತ್ತಿದ್ದೇವೆ. ಈ ಸಂಬಂಧ ಮನೆಯ ಮಾಲೀಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದೂ ವಿಶಾಖಪಟ್ಟಣಂ ನಗರ ಪೊಲೀಸ್‌ ಆಯುಕ್ತ ಸಿ.ಎಚ್. ಶ್ರೀಕಾಂತ್ ಮಾಹಿತಿ ನೀಡಿದ್ದಾರೆ. 
 
ದೆಹಲಿಯಲ್ಲಿ ಬೆಳಕಿಗೆ ಬಂದ 2 ಬರ್ಬರ ಹತ್ಯೆ ಪ್ರಕರಣಗಳು..!
ರಾಷ್ಟ್ರ ರಾಜಧಾನಿ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ 27 ವರ್ಷದ ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು 35 ಪೀಸ್‌ಗಳನ್ನಾಗಿ ಮಾಡಲಾಗಿತ್ತು. ಅಲ್ಲದೆ, ಆಕೆಯ ಮೃತದೇಹವನ್ನು ಹಲವು ದಿನಗಳ ಕಾಲ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಅಫ್ತಾಬ್‌ ಪೂನಾವಾಲಾ, ಆಕೆಯ ದೇಹದ ವಿವಿಧ ಭಾಗಗಳನ್ನು ದೆಹಲಿಯ ವಿವಿಧೆಡೆ ಬಿಸಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅಫ್ತಾಬ್‌ನನ್ನು ನವೆಂಬರ್ 14 ರಂದು ಬಂಧಿಸಲಾಗಿತ್ತು.

ಇದನ್ನೂ ಓದಿ: Anekal News: ಚಿನ್ನಾಭರಣದ ಆಸೆಗೆ ವೃದ್ಧೆ ಕೊಲೆ ಮಾಡಿ ಶವ ವಾರ್ಡ್‌ರೋಬ್‌ನಲ್ಲಿಟ್ಟ ಪಾಪಿ ಮಹಿಳೆ..!

ಈ ಘಟನೆ ಬೆಳಕಿಗೆ ಬಂದ ಕೆಲ ದಿನಗಳ ನಂತರ ದೆಹಲಿ ಪೊಲೀಸರು ಮಹಿಳೆ ಹಾಗೂ ಆತನ ಮಗನನ್ನು ಕೊಲೆ ಪ್ರಕರಣವೊಂದರ ಸಂಬಂಧ ಬಂಧಿಸಿದ್ದರು. ಪತ್ನಿ ಹಾಗೂ ಪುತ್ರ ಸೇರಿಕೊಂಡು ಪತಿ ಅಂಜನ್‌ ದಾಸ್‌ ಅವರನ್ನು ಕೊಲೆ ಮಾಡಿ ಆತನ ಮೃತದೇಹವನ್ನು 22 ಪೀಸ್‌ ಮಾಡಿ ವಿವಿಧೆಡೆ ಬಿಸಾಡಿದ್ದರು. 

Follow Us:
Download App:
  • android
  • ios