ಆಕಸ್ಮಿಕವಾಗಿ ಹಾವು ಕಚ್ಚಿ 7 ವರ್ಷದ ಮಗು ಕೊನೆಯುಸಿರೆಳೆದ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಹರತಾಳುವಿನಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ರಿಪ್ಪನ್‌ಪೇಟೆ(ಜೂ.01): ಆಟವಾಡುತ್ತಿದ್ದ ಬಾಲಕಿಯೊಬ್ಬಳಿಗೆ ಆಕಸ್ಮಿಕವಾಗಿ ಹಾವೊಂದು ಕಚ್ಚಿ ಸಾವನ್ನಪ್ಪಿರುವ ಘಟನೆ ಹರತಾಳು ಗ್ರಾಮದಲ್ಲಿ ನಡೆದಿದೆ. ಸುಮಾರು 7 ವರ್ಷದ ಬಾಲಕಿ ವಿನುತಾ ಮನೆಯಂಗಳದಲ್ಲಿ ಆಟವಾಡುವಾಗ ಈ ಘಟನೆ ಸಂಭವಿಸಿದೆ. ಬಾಲಕಿಯ ಪೋಷಕರು ಕೂಡಲೇ ಸಾಗರ ತಾ ಸರಸೀಪುರಕ್ಕೆ ಚಿಕಿತ್ಸೆ ಕೊಡಿಸಲು ಕರೆದೊಯಿದ್ದಿದ್ದು ಅಲ್ಲಿ ಬಾಲಕಿ ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಆನಂದಪುರಂ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿ ನಂತರ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಗೆ ಬರುವುದರಿಂದ ಪುನಾ ಕರೆತಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಬಾಲಕಿ ವಿನುತಾ ಶವದ ಮರಣೋತ್ತರ ಪರೀಕ್ಷೆಗೆ ಪೊಲೀಸ್‌ ಅಧಿಕಾರಿಗಳು ವಿಳಂಬ ಮಾಡಿದರೆಂಬ ಕಾರಣಕ್ಕೆ ಶಾಸಕ ಹರತಾಳು ಹಾಲಪ್ಪ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿ ಮೇಲೆ ಗರಂ ಅದರು.

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಾಜಿದ್ ಖಾನ್ ಕೊರೋನಾಗೆ ಬಲಿ!

ಅಲ್ಲದೇ ಶಾಸಕರು ಜಿಲ್ಲಾ ರಕ್ಷಣಾಧಿಕಾರಿ ಮತ್ತು ದಾವಣಗೆರೆ ಪೂರ್ವವಲಯ ಪೊಲೀಸ್‌ ವರಿಷ್ಠಾಧಿಕಾರಿ ಜತೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ನಾಪತ್ತೆಯಾಗಿದ್ದ ಖಾಸಗಿ ಬಸ್‌ ಚಾಲಕನ ಮೃತ ದೇಹ ಪತ್ತೆ

ಶಿವಮೊಗ್ಗ: ತೀರ್ಥಹಳ್ಳಿ ತಾ. ಶೇಡ್ಗಾರ್‌ ಗ್ರಾಮದ ಬೊಮ್ಮನಹಳ್ಳಿ ಗದ್ದೆಯ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲೊಂದು ಶವ ಪತ್ತೆಯಾಗಿದೆ. ಈ ಮೃತ ವ್ಯಕ್ತಿಯನ್ನು ಸಹಕಾರ ಸಾರಿಗೆ ಬಸ್‌ ಚಾಲಕ ವಿಜಯ್‌(50) ಎಂದು ಗುರುತಿಸಲಾಗಿದೆ. 

ಕಳೆದ ವಾರ ತಮ್ಮ ಪತಿ ವಿಜಯ್‌ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಸವಿತಾ ಮಾಳೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ಇವರಿಗಾಗಿ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ಇವರ ನಿಗೂಢ ಸಾವು ಸಾರ್ವಜನಿಕರಲ್ಲಿ ಸಂಶಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.