ತಾಯಿ ಬೈದು ಬುದ್ದಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಬಾಲಕ
ತಾಯಿ ಬೈದು ಬುದ್ದಿ ಹೇಳಿದ್ದಕ್ಕೆ 16 ವರ್ಷದ ಬಾಲಕನೋರ್ವ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು [ಜ.13]: ತಾಯಿ ಬೈದಿದ್ದಕ್ಕೆ ನೊಂದು ಬಾಲಕನೋರ್ವ ಮನೆ ಬಿಟ್ಟು ಹೋದ ಘಟನೆ ಬೆಂಗಳೂರನಲ್ಲಿ ನಡೆದಿದೆ.
ಬೆಂಗಳೂರಿನ ಚೋಳರಪಾಳ್ಯದ 16 ವರ್ಷದ ಗಗನ್ ಮನೆ ಬಿಟ್ಟು ಹೋಗಿದ್ದಾನೆ. ಜನವರಿ 9 ರಂದು ಗಗನ್ ಬೈಕಿನಿಂದ ಬಿದ್ದಿದ್ದು, ಇದಕ್ಕೆ ತಾಯಿ ಬೈದು ಬುದ್ದಿ ಹೇಳಿದ್ದರಿಂದ ಮನೆ ಬಿಟ್ಟು ತೆರಳಿದ್ದಾನೆ.
ಬೈಕಲ್ಲಿ ಹೋಗಿ ಬಿದ್ದಿದ್ದ ಗಗನ್ ಗೆ ತಾಯಿ ಬೈದಿದ್ದರು, ಅಂದು ರಾತ್ರಿ ಕಸ ಎಸೆದು ಬರುವುದಾಗಿ ಹೇಳಿ ಹೋದವನು ಮರಳಿ ಬರಲಿಲ್ಲ.
ಪರೀಕ್ಷೆಯಲ್ಲಿ ಫೇಲ್: 300 ವಿದ್ಯಾರ್ಥಿಗಳ ಅಂಕಪಟ್ಟಿ ಕದಿಯಲು ಮುಂದಾದ ಭೂಪ!...
ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡ್ತಾ ಇದ್ದ ಗಗನ್ ಜನವರಿ 9 ರಂದು ಮನೆ ಬಿಟ್ಟು ಹೋಗಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿ ಹೆಡೆಮುರಿ ಕಟ್ಟಿದ ಖಾಕಿ!...
ಸದ್ಯ ಈ ಸಂಬಂಧ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.