Asianet Suvarna News Asianet Suvarna News

Irani Cup: ಶೇಷ ಭಾರ​ತ ಇರಾ​ನಿ ಕಪ್‌ ಚಾಂಪಿ​ಯ​ನ್‌..!

ಮಧ್ಯಪ್ರದೇಶ ಮಣಿಸಿ ಇರಾನಿ ಕಪ್ ಗೆದ್ದ ಶೇಷ ಭಾರತ
ಸತತ ಎರಡನೇ ಬಾರಿಗೆ ಇರಾನಿ ಕಪ್ ಶೇಷ ಭಾರತದ ಪಾಲು
ಎರಡು ಇನಿಂಗ್ಸ್‌ನಲ್ಲೂ ಶತಕ ಸಿಡಿಸಿ ಮಿಂಚಿದ ಯಶಸ್ವಿ ಜೈಸ್ವಾಲ್

Yashasvi Jaiswal powerful century helps Rest of India thrash Madhya Pradesh to win Irani Cup kvn
Author
First Published Mar 6, 2023, 9:21 AM IST | Last Updated Mar 6, 2023, 9:21 AM IST

ಗ್ವಾ​ಲಿ​ಯ​ರ್‌(ಮಾ.06): 2021-22ರ ರಣಜಿ ಟ್ರೋಫಿ ಚಾಂಪಿ​ಯನ್‌ ಮಧ್ಯ​ಪ್ರ​ದೇ​ಶ​ವನ್ನು 238 ರನ್‌​ಗ​ಳಿಂದ ಮಣಿ​ಸಿದ ಶೇಷ ಭಾರತ ಸತತ 2ನೇ ಬಾರಿ ಇರಾನಿ ಕಪ್‌ ಗೆದ್ದು​ಕೊಂಡಿದೆ. ಗೆಲು​ವಿಗೆ 437 ರನ್‌​ಗಳ ಬೃಹತ್‌ ಗುರಿ ಪಡೆ​ದು​ಕೊಂಡಿದ್ದ ಮಧ್ಯ​ಪ್ರ​ದೇಶ 58.4 ಓವ​ರ್‌​ಗ​ಳಲ್ಲಿ 198ಕ್ಕೆ ಆಲೌಟ್‌ ಆಯಿತು. 4ನೇ ದಿನ​ದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿದ್ದ ಮಧ್ಯ​ಪ್ರ​ದೇ​ಶ ಕೊನೆ ದಿನ ಯಾವುದೇ ಪ್ರತಿ​ರೋಧ ತೋರ​ಲಿಲ್ಲ.ಮೊದಲ ಅವ​ಧಿ​ಯಲ್ಲೇ ಪಂದ್ಯ ಮುಕ್ತಾ​ಯಗೊಂಡಿ​ತು. 

ನಾಯಕ ಹಿಮಾಂಶು ಮಂತ್ರಿ​(51), ಹರ್ಷ್ ಗಾವ್ಲಿ(48) ಹೊರ​ತು​ಪ​ಡಿಸಿ ಉಳಿ​ದ​ವ​ರಿಂದ ಹೋರಾಟ ಕಂಡು​ಬ​ರ​ಲಿ​ಲ್ಲ. ಮೊದಲ ಇನ್ನಿಂಗ್‌್ಸ​ನ​ಲ್ಲಿ​ನಲ್ಲಿ 213, 2ನೇ ಇನ್ನಿಂಗ್‌್ಸನಲ್ಲಿ 144 ರನ್‌ ಸಿಡಿ​ಸಿದ ಯಶಸ್ವಿ ಜೈಸ್ವಾಲ್‌ ಪಂದ್ಯ​ಶ್ರೇಷ್ಠ ಪ್ರಶ​ಸ್ತಿಗೆ ಭಾಜ​ನ​ರಾ​ದರು. ಮೊದಲ ಇನ್ನಿಂಗ್‌್ಸ​ನಲ್ಲಿ ಶೇಷ ಭಾರತ 484, ಮಧ್ಯ​ಪ್ರ​ದೇಶ 294 ರನ್‌ ಗಳಿ​ಸಿತ್ತು. 190 ರನ್‌ ಮುನ್ನಡೆ ಪಡೆ​ದಿದ್ದ ಶೇಷ ಭಾರತ 2ನೇ ಇನ್ನಿಂಗ್‌್ಸ​ನಲ್ಲಿ 246ಕ್ಕೆ ಆಲೌ​ಟಾ​ಗಿತ್ತು.

4ನೇ ಟೆಸ್ಟ್‌ಗೂ ಕಮಿನ್ಸ್‌ ಗೈರಾ​ಗು​ವ ಸಾಧ್ಯತೆ

ಅಹ​ಮ​ದಾ​ಬಾದ್‌(ಮಾ.06): ತಾಯಿಯ ಅನಾ​ರೋಗ್ಯ ಕಾರಣ ತವ​ರಿಗೆ ಮರ​ಳಿ​ರುವ ಆಸ್ಪ್ರೇ​ಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಭಾರತ ವಿರುದ್ಧದ 4ನೇ ಟೆಸ್ಟ್‌ ಪಂದ್ಯಕ್ಕೂ ಅಲ​ಭ್ಯ​ರಾ​ಗುವ ಸಾಧ್ಯತೆ ಇದೆ ವರ​ದಿ​ಯಾ​ಗಿದೆ. ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ರುವ ತಾಯಿಯ ಆರೋ​ಗ್ಯ ಮತ್ತಷ್ಟು ಹದ​ಗೆ​ಟ್ಟಿ​ದ್ದ​ರಿಂದ 3ನೇ ಟೆಸ್ಟ್‌ಗೂ ಮುನ್ನ ಕಮಿನ್ಸ್‌ ಆಸ್ಪ್ರೇ​ಲಿ​ಯಾಕ್ಕೆ ತೆರ​ಳಿ​ದ್ದರು. ಅವರು ಇನ್ನೂ ಗಂಭೀರ ಸ್ಥಿತಿ​ಯ​ಲ್ಲಿ​ರುವ ಕಾರಣ ಕಮಿನ್ಸ್‌ ಭಾರ​ತಕ್ಕೆ ಆಗ​ಮಿ​ಸು​ವುದು ಅನು​ಮಾನವೆನಿಸಿದೆ. 

ಪ್ಯಾಟ್ ಕಮಿನ್ಸ್‌ ಅನು​ಪ​ಸ್ಥಿ​ತಿ​ಯಲ್ಲಿ 3ನೇ ಟೆಸ್ಟ್‌ನಲ್ಲಿ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌ 4ನೇ ಟೆಸ್ಟ್‌ನಲ್ಲೂ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇದೀಗ ಮಾರ್ಚ್‌ 9ರಿಂದ ಅಹಮದಾಬಾದ್‌ನಲ್ಲಿ 4ನೇ ಟೆಸ್ಟ್‌ ಆರಂಭಗೊಳ್ಳಲಿದೆ.

ಶಸ್ತ್ರಚಿ​ಕಿ​ತ್ಸೆಗೆ ನ್ಯೂಜಿ​ಲೆಂಡ್‌​ಗೆ ತೆರ​ಳಿದ ವೇಗಿ ಬುಮ್ರಾ

ನವ​ದೆ​ಹ​ಲಿ: ದೀರ್ಘ ಸಮ​ಯ​ದಿಂದ ಬೆನ್ನು ನೋವಿ​ನ ​ಸಮಸ್ಯೆಯಿಂದ ಬಳಲು​ತ್ತಿ​ರುವ ಭಾರ​ತೀಯ ವೇಗಿ ಜಸ್‌​ಪ್ರೀತ್‌ ಬುಮ್ರಾ ಶಸ್ತ್ರ​ಚಿ​ಕಿ​ತ್ಸೆ​ಗಾಗಿ ನ್ಯೂಜಿ​ಲೆಂಡ್‌ಗೆ ತೆರ​ಳಿ​ದ್ದಾರೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿ​ದ್ದಾಗಿ ಮಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಅವರು 2-3 ದಿನ​ಗ​ಳ​ಲ್ಲಿ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗ​ಲಿದ್ದು, ಬಳಿಕ ಸುಮಾರು 20ರಿಂದ 24 ವಾರ​ಗಳ ಕಾಲ ವಿಶ್ರಾಂತಿ ಪಡೆ​ಯ​ಲಿ​ದ್ದಾರೆ ಎಂದು ತಿಳಿ​ದು​ಬಂದಿದೆ. 

WPL 2023: ಇಂದು ಮುಂಬೈಗೆ ಆರ್‌ಸಿಬಿ ಸವಾಲು..! ಗೆಲುವಿನ ಹಳಿಗೆ ಮರಳುತ್ತಾ ಮಂಧನಾ ಪಡೆ?

ಬೆನ್ನು ನೋವಿ​ನಿಂದಾಗಿ ಬುಮ್ರಾ 5 ತಿಂಗ​ಳು​ಗ​ಳಿಂದ ಸ್ಪರ್ಧಾ​ತ್ಮಕ ಕ್ರಿಕೆ​ಟ್‌​ನಿಂದ ದೂರ ಉಳಿ​ದಿ​ದ್ದಾರೆ. ಇನ್ನೂ ಕೂಡಾ ಗುಣ​ಮು​ಖ​ರಾಗದ ಹಿನ್ನೆ​ಲೆ​ಯಲ್ಲಿ ಹಲವು ಕ್ರಿಕೆ​ಟಿ​ಗ​ರಿಗೆ ಯಶ​ಸ್ವಿ​ಯಾಗಿ ಶಸ್ತ್ರ​ಚಿ​ಕಿತ್ಸೆ ನಡೆ​ಸಿದ ಡಾ.ರೋವನ್‌ ಶೌಟೆನ್‌ ಅವರಿಂದ ನ್ಯೂಜಿ​ಲೆಂಡ್‌​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳ​ಗಾ​ಗ​ಲಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ.

Latest Videos
Follow Us:
Download App:
  • android
  • ios