Asianet Suvarna News Asianet Suvarna News

ಇಂದು ಮಹಿಳಾ ಏಕದಿನ ಫೈನಲ್: ಕರ್ನಾಟಕ-ರೈಲ್ವೇಸ್ ಫೈಟ್

ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿ ಫೈನಲ್ ಆರಂಭಕ್ಕೆ ಕ್ಷಣಗಣನೆ
ಪ್ರಶಸ್ತಿಗಾಗಿ ಕರ್ನಾಟಕ ಹಾಗೂ ರೈಲ್ವೇಸ್ ನಡುವೆ ಪೈಪೋಟಿ
ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಕರ್ನಾಟಕ ತಂಡ

Womens National Cricket League Karnataka take on Railways in Final clash kvn
Author
First Published Feb 7, 2023, 9:12 AM IST

ರಾಂಚಿ(ಫೆ.07): ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ತಂಡ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿದ್ದು, ಮಂಗ​ಳವಾರ ಫೈನ​ಲ್‌​ನಲ್ಲಿ 13 ಬಾರಿ ಚಾಂಪಿ​ಯನ್‌ ರೈಲ್ವೇಸ್‌ ವಿರುದ್ಧ ಸೆಣ​ಸಲಿದೆ.

ಕಳೆದ ಆವೃ​ತ್ತಿ​ಯಲ್ಲೂ ಉಭಯ ತಂಡ​ಗಳು ಫೈನ​ಲ್‌​ನಲ್ಲಿ ಮುಖಾ​ಮುಖಿ​ಯಾ​ಗಿ​ದ್ದವು. ಕರ್ನಾ​ಟ​ಕ​ವನ್ನು 8 ವಿಕೆ​ಟ್‌​ಗ​ಳಿಂದ ಮಣಿ​ಸಿ ರೈಲ್ವೇಸ್‌ ಪ್ರಶಸ್ತಿ ಜಯಿಸಿತ್ತು. ಕರ್ನಾ​ಟಕ ಕಳೆದ ಆವೃ​ತ್ತಿಯ ಫೈನ​ಲ್‌ ಸೋಲಿಗೆ ಸೇಡು ತೀರಿಸಿ ಪ್ರಶಸ್ತಿ ಗೆಲ್ಲಲು ಪಣ ತೊಟ್ಟಿದೆ. ಈ ಬಾರಿ ‘ಬಿ’ ಗುಂಪಿ​ನಲ್ಲಿ 20 ಅಂಕ​ಗ​ಳೊಂದಿಗೆ ದ್ವಿತೀಯ ಸ್ಥಾನಿ​ಯಾ​ಗಿದ್ದ ಕರ್ನಾ​ಟ​ಕ ಪ್ರಿ ಕ್ವಾರ್ಟ​ರ್‌​ ಫೈನ​ಲ್‌ನಲ್ಲಿ ಮಧ್ಯ​ಪ್ರ​ದೇಶ, ಕ್ವಾರ್ಟ​ರ್‌​ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು. ಬಳಿಕ ರಾಜ​ಸ್ಥಾ​ನ​ವನ್ನು ಸೆಮೀ​ಸ್‌​ನಲ್ಲಿ ಸೋಲಿಸಿ ಫೈನಲ್‌ ತಲು​ಪಿದೆ. ಮತ್ತೊಂದೆ​ಡೆ ‘ಎ’ ಗುಂಪಿ​ನಲ್ಲಿ 2ನೇ ಸ್ಥಾನ ಪಡೆ​ದಿದ್ದ ರೈಲ್ವೇಸ್‌ ಪ್ರಿ ಕ್ವಾರ್ಟ​ರ್‌​ನಲ್ಲಿ ತಮಿ​ಳು​ನಾಡು, ಕ್ವಾರ್ಟ​ರ್‌​ನಲ್ಲಿ ಕೇರಳ ಹಾಗೂ ಸೆಮಿ​ಫೈ​ನ​ಲ್‌​ನಲ್ಲಿ ಉತ್ತ​ರಾ​ಖಂಡ​ವನ್ನು ಮಣಿ​ಸಿತ್ತು.

10 ಪಂದ್ಯ​ಗ​ಳಲ್ಲಿ 470 ರನ್‌ ಸಿಡಿ​ಸಿ​ರುವ ವೃಂದಾ, 327 ರನ್‌ ಗಳಿ​ಸಿ​ರುವ ದಿವ್ಯಾ ಕರ್ನಾ​ಟಕದ ಆಧಾ​ರ​ಸ್ತಂಭ​ಗ​ಳಾ​ಗಿದ್ದು, ಇವರ ಪ್ರದ​ರ್ಶ​ನವೇ ತಂಡಕ್ಕೆ ನಿರ್ಣಾ​ಯಕ ಎನಿ​ಸಿ​ಕೊಂಡಿದೆ. ತಾರಾ ಆಟಗಾರ್ತಿ, ನಾಯಕಿ ವೇದಾ ಕೃಷ್ಣ​ಮೂರ್ತಿ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

ಪಂದ್ಯ: ಬೆಳಗ್ಗೆ 9.15ಕ್ಕೆ
ನೇರ ಪ್ರಸಾರ: ಡಿಸ್ನಿ+ ಹಾಟ್‌ಸ್ಟಾರ್‌

ಫೈನ​ಲಲ್ಲಿ ರೈಲ್ವೇ​ಸ್‌ ಅಜೇಯ ದಾಖ​ಲೆ!

ರೈಲ್ವೇಸ್‌ ಟೂರ್ನಿಯ ಫೈನ​ಲ್‌​ನಲ್ಲಿ ಅಜೇಯ ದಾಖಲೆ ಹೊಂದಿದ್ದು, ಈವ​ರೆ​ಗಿನ 15 ಟೂರ್ನಿ​ಗ​ಳಲ್ಲಿ 13 ಬಾರಿ ಫೈನಲ್‌ ಪ್ರವೇ​ಶಿಸಿ ಎಲ್ಲಾ ಬಾರಿಯೂ ಚಾಂಪಿ​ಯನ್‌ ಆಗಿ ಹೊರಹೊಮ್ಮಿದೆ. ತಂಡ​ಕ್ಕಿದು 14ನೇ ಫೈನಲ್‌. ಇನ್ನು ಡೆಲ್ಲಿ, ಬಂಗಾಳ ತಲಾ 1 ಬಾರಿ ಪ್ರಶಸ್ತಿ ಗೆದ್ದಿದೆ. ಕರ್ನಾ​ಟಕ 2ನೇ ಬಾರಿ ಫೈನಲ್‌ನಲ್ಲಿ ಆಡಲಿದೆ.

ಮಹಿಳಾ ಐಪಿ​ಎಲ್‌ ಮಾ.4ಕ್ಕೆ ಆರಂಭ, ಫೆ.13ಕ್ಕೆ ಹರಾ​ಜು

ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಮಹಿಳಾ ಐಪಿಎಲ್‌) ಮಾ.4ರಿಂದ 26ರ ವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಐಪಿ​ಎಲ್‌ ಮುಖ್ಯಸ್ಥ ಅರುಣ್‌ ಧುಮಾಳ್‌ ಖಚಿ​ತ​ಪ​ಡಿ​ಸಿ​ದ್ದಾರೆ. ಜೊತೆಗೆ ಮಹಿಳಾ ಆಟ​ಗಾ​ರರ ಹರಾಜು ಪ್ರಕ್ರಿಯೆ ಮುಂಬೈ​ನಲ್ಲೇ ಫೆ.13ರಂದು ನಡೆ​ಯ​ಲಿದೆ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ.

'ಭಾರತ ಏಷ್ಯಾಕಪ್ ಆಡಲು ಬರದೇ ಹೋದ್ರೆ ತೊಂದರೆಯೇನಿಲ್ಲ': ಜಾವೇದ್ ಮಿಯಾಂದಾದ್ ಉದ್ದಟತನ..!

ಟೂರ್ನಿಯ ಎಲ್ಲಾ 22 ಪಂದ್ಯಗಳಿಗೂ ಬ್ರೆಬೋರ್ನ್‌ ಹಾಗೂ ಡಿ.ವೈ.ಪಾಟೀಲ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಹರಾಜಿಗೆ 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಗುಜ​ರಾತ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ.

ರಣಜಿ ಸೆಮೀಸ್‌: ರಾಜ್ಯ ತಂಡದಲ್ಲಿ 1 ಬದಲಾವಣೆ

ಬೆಂಗಳೂರು: ಬುಧವಾರದಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಒಂದು ಬದಲಾವಣೆ ಮಾಡಲಾಗಿದೆ. ವಿಕೆಟ್‌ ಕೀಪರ್‌ ಬಿ.ಆರ್‌.ಶರತ್‌ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಬದಲು ನಿಹಾಲ್‌ ಉಳ್ಳಾಲ ಆಯ್ಕೆಯಾಗಿದ್ದಾರೆ. ಶರತ್‌ 7 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 267 ರನ್‌ ಗಳಿಸಿದ್ದಾರೆ.

ತಂಡ: ಮಯಾಂಕ್‌ ಅಗರ್‌ವಾಲ್(ನಾಯಕ), ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್‌, ನಿಕಿನ್‌ ಜೋಶ್, ಮನೀಶ್‌ ಪಾಂಡೆ, ಸಿದ್ಧಾರ್ಥ್‌, ಶ್ರೇಯಸ್‌ ಗೋಪಾಲ್, ಶರತ್‌ ಶ್ರೀನಿವಾಸ್‌, ಕೆ.ಗೌತಮ್‌, ಕೌಶಿಕ್‌, ವಿದ್ವತ್‌ ಕಾವೇರಪ್ಪ, ವೈಶಾಖ್‌, ಎಂ ವೆಂಕಟೇಶ್‌, ಶುಭಾಂಗ್‌ ಹೆಗ್ಡೆ, ನಿಹಾಲ್‌ ಉಲ್ಲಾಳ.

Follow Us:
Download App:
  • android
  • ios