Asianet Suvarna News Asianet Suvarna News

ವಿಂಡೀಸ್ ಸರಣಿ: ರೋಹಿತ್‌ಗೆ ವಿಶ್ರಾಂತಿ, ಧವನ್‌ಗೆ ಕೊಕ್‌?

ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಇಂದು ಆಯ್ಕೆ ಸಮಿತಿ ಭಾರತ ತಂಡವನ್ನು ಆಯ್ಕೆ ಮಾಡಲಿದ್ದು, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Team India Selection for West Indies Series Rohit Sharma workload to be discussed
Author
Kolkata, First Published Nov 21, 2019, 10:25 AM IST

"

ಕೋಲ್ಕ​ತಾ[ನ.21]: ಬಾಂಗ್ಲಾ​ದೇಶ ವಿರು​ದ್ಧದ ಐತಿ​ಹಾ​ಸಿಕ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯದ ಬಳಿಕ ಭಾರತ ಕ್ರಿಕೆಟ್‌ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ 3 ಪಂದ್ಯ​ಗಳ ಟಿ20, 3 ಪಂದ್ಯ​ಗಳ ಏಕ​ದಿನ ಸರ​ಣಿ​ಗ​ಳನ್ನು ಆಡ​ಲಿದೆ. ಗುರು​ವಾರ ಎಂ.ಎಸ್‌.ಕೆ.​ಪ್ರಸಾದ್‌ ನೇತೃ​ತ್ವದ ಬಿಸಿ​ಸಿಐ ಆಯ್ಕೆ ಸಮಿತಿ ಇಲ್ಲಿ ಸಭೆ ಸೇರ​ಲಿದ್ದು, ಎರಡೂ ಸರ​ಣಿ​ಗ​ಳಿಗೆ ಭಾರತ ತಂಡವನ್ನು ಆಯ್ಕೆ ಮಾಡ​ಲಿದೆ.

ಎಲ್ಲವೂ ಅಂದು​ಕೊಂಡಂತೆ ನಡೆ​ದರೆ ಉಪನಾ​ಯಕ ರೋಹಿತ್‌ ಶರ್ಮಾಗೆ ವಿಶ್ರಾಂತಿ ಸಿಗ​ಲಿದೆ. ಮುಂದಿ​ನ ವರ್ಷ ನ್ಯೂಜಿ​ಲೆಂಡ್‌ ಪ್ರವಾಸಕ್ಕೆ ಅವರು ಮಾನ​ಸಿಕ, ದೈಹಿಕವಾಗಿ ಸದೃಢರಾಗಿ ತೆರ​ಳಲು ಅನು​ಕೂ​ಲ​ವಾ​ಗ​ಲಿದೆ. ನ್ಯೂಜಿ​ಲೆಂಡ್‌ ಪ್ರವಾಸದಲ್ಲಿ ಭಾರತ 5 ಟಿ20, 3 ಏಕ​ದಿನ ಹಾಗೂ 2 ಟೆಸ್ಟ್‌ ಪಂದ್ಯ​ಗ​ಳನ್ನು ಆಡ​ಲಿದೆ.

ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ವಿಂಡೀಸ್‌ ವಿರುದ್ಧ 3 ಪಂದ್ಯ​ಗಳ ಸರ​ಣಿಯ ಮೊದಲ ಪಂದ್ಯ ಡಿ.6ರಂದು ಮುಂಬೈ​ನಲ್ಲಿ ನಡೆ​ಯ​ಲಿದ್ದು, ಡಿ.8ರಂದು ತಿರು​ವ​ನಂತಪುರಂನಲ್ಲಿ 2ನೇ ಪಂದ್ಯ ನಡೆ​ಯ​ಲಿದೆ. ಡಿ.11ಕ್ಕೆ ಹೈದ​ರಾ​ಬಾದ್‌ನಲ್ಲಿ 3ನೇ ಪಂದ್ಯ ನಿಗ​ದಿ​ಯಾ​ಗಿದೆ. 3 ಏಕ​ದಿ​ನ ಪಂದ್ಯ​ಗಳು ಚೆನ್ನೈ (ಡಿ.15), ವಿಶಾ​ಖ​ಪ​ಟ್ಟಣಂ (ಡಿ.18) ಹಾಗೂ ಕಟಕ್‌ (ಡಿ.22)ನಲ್ಲಿ ನಡೆ​ಯ​ಲಿವೆ.

ರೋಹಿತ್‌ ಶರ್ಮಾ ಕೆಲ​ಸದ ಒತ್ತಡದ ಬಗ್ಗೆ ಸಭೆಯಲ್ಲಿ ಹೆಚ್ಚಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. ಈ ವರ್ಷ ಐಪಿ​ಎಲ್‌ ಸೇರಿ ಸುಮಾರು 60 ಪಂದ್ಯ​ಗ​ಳನ್ನು ಅವರು ಆಡಿ​ದ್ದಾರೆ. ಹಾಲಿ ಕ್ಯಾಲೆಂಡರ್‌ ವರ್ಷದಲ್ಲಿ ರೋಹಿತ್‌ 25 ಏಕ​ದಿನ, 11 ಅಂತಾ​ರಾ​ಷ್ಟ್ರೀಯ ಟಿ20 ಪಂದ್ಯ​ಗ​ಳನ್ನು ಆಡಿ​ದ್ದಾರೆ. ರೋಹಿತ್‌ ಕೊನೆ ಪಕ್ಷ ಒಂದು ಸರ​ಣಿ​ಯಿಂದ ಹೊರ​ಗು​ಳಿ​ಯಲು ಇಚ್ಛಿ​ಸ​ಬ​ಹುದು ಎನ್ನ​ಲಾ​ಗಿದೆ.

3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!

ಸಭೆಯಲ್ಲಿ ಶಿಖರ್‌ ಧವನ್‌ ಲಯದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಹೆಚ್ಚಿದೆ. ಧವನ್‌ ವಿಶ್ವ​ಕಪ್‌ ವೇಳೆ ಆದ ಗಾಯ​ದಿಂದ ಚೇತ​ರಿ​ಸಿ​ಕೊಂಡ ತಂಡಕ್ಕೆ ಮರ​ಳಿದ ನಂತರ ಕಳಪೆ ಪ್ರದ​ರ್ಶನ ತೋರು​ತ್ತಿ​ದ್ದಾರೆ. ಬಾಂಗ್ಲಾ​ದೇಶ ವಿರುದ್ಧ ಟಿ20 ಸರ​ಣಿ​ಯಲ್ಲಿ ಸಾಧಾ​ರಣ ಆಟ​ವಾ​ಡಿದ್ದ ಧವನ್‌, ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಕೆಲ ಪಂದ್ಯ​ಗ​ಳಲ್ಲಿ ಆಡಿ​ದ್ದರು. ಆದರೆ ಅಲ್ಲೂ ಸಹ ಅವ​ರಿಗೆ ಲಯ ಕಂಡು​ಕೊ​ಳ್ಳಲು ಸಾಧ್ಯ​ವಾ​ಗಿ​ರ​ಲಿಲ್ಲ. ಹೀಗಾಗಿ ಧವನ್‌ರನ್ನು ಕೈಬಿಡುವ ಸಾಧ್ಯತೆ ಇದೆ.

ರೋಹಿತ್‌ಗೆ ವಿಶ್ರಾಂತಿ ನೀಡಿ​ದರೆ ಇಲ್ಲವೇ ಧವನ್‌ರನ್ನು ಕೈಬಿ​ಟ್ಟರೆ ಆರಂಭಿಕನ ಸ್ಥಾನ​ವನ್ನು ಮಯಾಂಕ್‌ ಅಗರ್‌ವಾಲ್‌ಗೆ ನೀಡಬಹುದು ಎನ್ನ​ಲಾ​ಗಿದೆ. ಕೆ.ಎಲ್‌.ರಾ​ಹುಲ್‌ ಹಾಗೂ ಮಯಾಂಕ್‌ ಆರಂಭಿ​ಕ​ರಾಗಿ ಆಯ್ಕೆಯಾದರೆ ಅಚ್ಚ​ರಿ​ಯಿಲ್ಲ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.

ರಿಷಭ್‌ ಪಂತ್‌ ಕಳಪೆ ಆಟ ಮುಂದು​ವ​ರಿ​ಸಿ​ದ್ದರೂ, ಅವರಿಗೆ ಮತ್ತೊಂದು ಅವ​ಕಾಶ ಸಿಗ​ಬ​ಹುದು. ಸಂಜು ಸ್ಯಾಮ್ಸನ್‌ ಸಹ ತಂಡ​ದಲ್ಲಿ ಇರ​ಲಿ​ದ್ದಾರೆ ಎನ್ನಲಾ​ಗಿದೆ. ಆಲ್ರೌಂಡರ್‌ ಕೃನಾಲ್‌ ಪಾಂಡ್ಯ ಇಲ್ಲವೇ ವಾಷಿಂಗ್ಟನ್‌ ಸುಂದರ್‌ ನಿರೀ​ಕ್ಷಿತ ಪ್ರದ​ರ್ಶನ ತೋರು​ತ್ತಿಲ್ಲ. ಇವ​ರಿ​ಬ್ಬರ ಪೈಕಿ ಒಬ್ಬ​ರಿಗೆ ಕೊಕ್‌ ಕೊಡುವ ಸಾಧ್ಯತೆ ಇದೆ. ಯಜು​ವೇಂದ್ರ ಚಹಲ್‌ ಇಲ್ಲವೇ ರವೀಂದ್ರ ಜಡೇಜಾ ತಂಡಕ್ಕೆ ಮರ​ಳ​ಲಿ​ದ್ದಾರೆ. ದೀಪಕ್‌ ಚಹರ್‌ ವೇಗದ ಬೌಲಿಂಗ್‌ ಪಡೆ ಮುನ್ನ​ಡೆ​ಸ​ಲಿದ್ದು, ದುಬಾ​ರಿ​ಯಾ​ಗು​ತ್ತಿ​ರುವ ಖಲೀಲ್‌ ಅಹ್ಮದ್‌ ಆಯ್ಕೆ ಅನು​ಮಾ​ನ​ವೆ​ನಿ​ಸಿದೆ.
 

Follow Us:
Download App:
  • android
  • ios