ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವತ್ತ ಸೌರಾಷ್ಟ್ರ ದಿಟ್ಟ ಹೆಜ್ಜೆಬೆಂಗಾಲ್ ಎದುರು ಮೊದಲ ಇನಿಂಗ್ಸ್‌  ಮುನ್ನಡೆ ಗಳಿಸಿದ ಸೌರಾಷ್ಟ್ರಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯ

ಕೋಲ್ಕ​ತಾ(ಫೆ.18): 2022-23ರ ರಣಜಿ ಟ್ರೋಫಿ ಫೈನ​ಲ್‌​ನಲ್ಲಿ ಬಂಗಾಳ ವಿರುದ್ಧ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿ​ಸಿದ್ದು, ಬೃಹತ್‌ ಮೊತ್ತ​ದತ್ತ ದಾಪು​ಗಾ​ಲಿ​ಟ್ಟಿದೆ. ಬಂಗಾ​ಳದ 174 ರನ್‌ಗೆ ಉತ್ತ​ರ​ವಾಗಿ ಇನ್ನಿಂಗ್‌್ಸ ಆರಂಭಿ​ಸಿ​ರುವ ಸೌರಾಷ್ಟ್ರ 2ನೇ ದಿನ​ದಂತ್ಯಕ್ಕೆ 5 ವಿಕೆ​ಟ್‌ಗೆ 317 ರನ್‌ ಕಲೆ​ಹಾ​ಕಿದ್ದು, 143 ರನ್‌ ಮುನ್ನಡೆ ಪಡೆ​ದಿದೆ. 

ಶನಿ​ವಾರ ಮತ್ತಷ್ಟುರನ್‌ ಸೇರಿಸಿ ಬಂಗಾ​ಳ​ವನ್ನು ಬೇಗನೇ ಆಲೌಟ್‌ ಮಾಡಿ ಇನ್ನಿಂಗ್‌್ಸ ಗೆಲು​ವು ಸಾಧಿ​ಸುವ ನಿರೀ​ಕ್ಷೆ​ಯ​ಲ್ಲಿದೆ. ಮೊದಲ ದಿನ 2 ವಿಕೆ​ಟ್‌ಗೆ 81 ರನ್‌ ಗಳಿ​ಸಿದ್ದ ಸೌರಾ​ಷ್ಟ್ರ ಶುಕ್ರ​ವಾ​ರ ಬ್ಯಾಟಿಂಗ್‌​ನಲ್ಲಿ ಪ್ರಾಬಲ್ಯ ಸಾಧಿ​ಸಿ​ತು. ಆರಂಭಿಕ ಹಾರ್ವಿಕ್‌ ದೇಸಾ​ಯಿ​ 50 ರನ್‌ ಗಳಿ​ಸಿ​ದರು. 109ಕ್ಕೆ 4 ವಿಕೆಟ್‌ ಕಳೆ​ದು​ಕೊಂಡ ಬಳಿಕ ಅರ್ಪಿತ್‌ ವಸ​ವಾಡ 5ನೇ ವಿಕೆ​ಟ್‌ಗೆ ಶೆಲ್ಡಾನ್‌ ಜ್ಯಾಕ್ಸ​ನ್‌​(59) ಜೊತೆ 95, ಮುರಿ​ಯದ 6ನೇ ವಿಕೆ​ಟ್‌ಗೆ ಚಿರಾಗ್‌ ಜಾನಿ​(57) ಜೊತೆ 113 ರನ್‌ ಜೊತೆ​ಯಾ​ಟ​ವಾ​ಡಿ​ದರು. ವಸ​ವಾ​ಡ 81 ರನ್‌ ಸಿಡಿಸಿದ್ದು ಮತ್ತೊಂದು ಶತ​ಕ​ದತ್ತ ದಾಪು​ಗಾ​ಲಿ​ಟ್ಟಿ​ದ್ದಾ​ರೆ.

ಸ್ಕೋರ್‌: 
ಬಂಗಾಳ 174/10 
ಸೌರಾಷ್ಟ್ರ 317/5 (ವ​ಸ​ವಾಡ 81*, ಜ್ಯಾಕ್ಸನ್‌ 59, ಚಿರಾಗ್‌ 57*, ಇಶಾನ್‌ 2-72)

Scroll to load tweet…

ಇಂಗ್ಲೆಂಡ್‌ಗೆ ಇನ್ನಿಂಗ್‌್ಸ ಲೀಡ್‌

ಮೌಂಟ್‌ ಮಾಂಗನ್ಯುಯಿ: ಟಾಮ್‌ ಬ್ಲಂಡೆಲ್‌ ಹೋರಾ​ಟದ ಶತ​ಕದ ಹೊರ​ತಾ​ಗಿಯೂ ನ್ಯೂಜಿ​ಲೆಂಡ್‌ ವಿರು​ದ್ಧದ ಹಗ​ಲು-ರಾತ್ರಿ ಮೊದಲ ಟೆಸ್ಟ್‌​ನಲ್ಲಿ ಪ್ರವಾಸಿ ಇಂಗ್ಲೆಂಡ್‌ ಇನ್ನಿಂಗ್‌್ಸ ಮುನ್ನಡೆ ಸಾಧಿ​ಸಿದೆ. ಇಂಗ್ಲೆಂಡ್‌ನ 325 ರನ್‌ಗೆ ಉತ್ತ​ರ​ವಾಗಿ ಕಿವೀಸ್‌ ಶುಕ್ರ​ವಾರ 306 ರನ್‌ಗೆ ಆಲೌ​ಟಾ​ಯಿತು. 83ಕ್ಕೆ 5 ವಿಕೆ​ಟ್‌ ಕಳೆ​ದು​ಕೊಂಡರೂ ಬ್ಲಂಡೆಲ್‌ 138 ರನ್‌ ಸಿಡಿಸಿ ತಂಡ​ವನ್ನು ಮೇಲೆ​ತ್ತಿ​ದರು. 

ಒಟ್ಟಾರೆ 19 ರನ್‌ ಮುನ್ನ​ಡೆ​ಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿ ಇಂಗ್ಲೆಂಡ್‌ 2ನೇ ದಿನ​ದಂತ್ಯ​ಕ್ಕೆ 2ಕ್ಕೆ 79 ರನ್‌ ಗಳಿ​ಸಿದ್ದು, ಒಟ್ಟು 98 ರನ್‌ ಲೀಡ್‌ ಪಡೆ​ದಿದೆ.

ರಹಸ್ಯ ಕಾರಾರ‍ಯ​ಚ​ರಣೆ ಎಫೆಕ್ಟ್: ಚೇತನ್‌ ಶರ್ಮಾ ರಾಜೀ​ನಾ​ಮೆ!

ನವ​ದೆ​ಹ​ಲಿ: ರಾಷ್ಟ್ರೀಯ ಸುದ್ದಿ ವಾಹಿನಿ ‘ಝೀ ನ್ಯೂಸ್‌’ನ ರಹಸ್ಯ ಕಾರ್ಯಾಚರಣೆಯಲ್ಲಿ ಭಾರ​ತೀಯ ಕ್ರಿಕೆಟ್‌ ತಂಡದ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿ, ಭಾರೀ ಸಂಚ​ಲ​ನಕ್ಕೆ ಕಾರ​ಣ​ವಾಗಿದ್ದ ಚೇತನ್‌ ಶರ್ಮಾ ಶುಕ್ರ​ವಾರ ಬಿಸಿ​ಸಿಐ ಪ್ರಧಾನ ಆಯ್ಕೆಗಾರ ಸ್ಥಾನಕ್ಕೆ ರಾಜೀ​ನಾಮೆ ನೀಡಿ​ದ್ದಾರೆ. ರಾಜೀ​ನಾ​ಮೆ​ಯನ್ನು ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಸ್ವೀಕ​ರಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿದೆ.

Delhi Test: ಶಮಿ, ಅಶ್ವಿನ್, ಜಡ್ಡು ಮಾರಕ ದಾಳಿ, ಆಸ್ಟ್ರೇಲಿಯಾ 263ಕ್ಕೆ ಆಲೌಟ್‌

ಚೇತನ್‌ ಸ್ವ ಇಚ್ಚೆ​ಯಿಂದ ರಾಜೀ​ನಾಮೆ ನೀಡಿದ್ದು, ಯಾರಿಂದಲೂ ಒತ್ತ​ಡ​ವಿ​ರ​ಲಿಲ್ಲ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾಗಿ ವರ​ದಿ​ಯಾ​ಗಿದೆ. ಚೇತನ್‌ ಇರಾನಿ ಕಪ್‌ ಆಟ​ಗಾ​ರರ ಆಯ್ಕೆ​ಗಾಗಿ ಕೋಲ್ಕ​ತಾ​ದ​ಲ್ಲಿ ರಣಜಿ ಫೈನ​ಲ್‌ ಪಂದ್ಯ ವೀಕ್ಷ​ಣೆಗೆ ಹಾಜ​ರಾ​ಗಿ​ದ್ದರು. ರಾಜೀ​ನಾಮೆ ಬಳಿಕ ನೇರ​ವಾಗಿ ದೆಹ​ಲಿಗೆ ತೆರ​ಳಿ​ದ್ದಾ​ರೆ. ಕಳೆದ ಟಿ20 ವಿಶ್ವ​ಕಪ್‌ ಸೋಲಿನ ಬಳಿಕ ಚೇತನ್‌ ಶರ್ಮಾ​ರನ್ನು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನ​ದಿಂದ ವಜಾ​ಗೊ​ಳಿ​ಸ​ಲಾ​ಗಿತ್ತು. ಜನ​ವ​ರಿ​ಯಲ್ಲಿ ಅವ​ರು ಮತ್ತೆ ಅದೇ ಹುದ್ದೆ​ಗೇ​ರಿ​ದ್ದರು. ಚೇತನ್‌ ನಿರ್ಗ​ಮ​ನ​ದಿಂದ ತೆರ​ವಾ​ಗಿ​ರುವ ಸ್ಥಾನಕ್ಕೆ ಸಮಿ​ತಿ​ಯ ಸದ​ಸ್ಯ​ರಾ​ಗಿ​ರುವ ಶಿವ​ಸು​ಂದರ್‌ ದಾಸ್‌ ಹಂಗಾ​ಮಿ​ ಅಧ್ಯ​ಕ್ಷ​ರಾಗಿ ನೇಮ​ಕ​ಗೊಳ್ಳುವ ಸಾಧ್ಯ​ತೆ​ಗ​ಳಿ​ವೆ. ದಾಸ್‌ ಭಾರತ ಪರ 23 ಟೆಸ್ಟ್‌ ಪಂದ್ಯ​ಗ​ಳ​ನ್ನಾ​ಡಿ​ದ್ದಾ​ರೆ.