ಕಾಫಿ ವಿತ್ ಕರಣ್ ಟಿವಿ ಶೋನಲ್ಲಿ ವಿವಾದಿತ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾದ ಕ್ರಿಕೆಟಿಗ ಕೆ.ಎಲ್.ರಾಹುಲ್ ಇದೀಗ ಅದ್ಬುತ ಪ್ರದರ್ಶನ ಮೂಲಕ ಹಿನ್ನೆಡೆಯಿಂದ ಹೊರಬಂದಿದ್ದಾರೆ. ರಾಹುಲ್ ತಮ್ಮ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ಕಾರಣ ಎಂದಿದ್ದಾರೆ.
ಬೆಂಗಳೂರು(ಫೆ.28): ಟೀಂ ಇಂಡಿಯಾ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಫಾರ್ಮ್ಗೆ ಮರಳಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಾಫಿ ವಿತ್ ಕರಣ್ ಶೋನಲ್ಲಿನ ವಿವಾದ ರಾಹುಲ್ ಕರಿಯರ್ಗೆ ಕಪ್ಪು ಚುಕ್ಕೆ ಇಟ್ಟಿತು. ಅಮಾನತು ಶಿಕ್ಷೆಯಿಂದ ತವರಿಗೆ ವಾಪಾಸಾದ ರಾಹುಲ್ಗೆ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೆರವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: ಐಸಿಸಿ ಟಿ20 ರ್ಯಾಂಕಿಂಗ್ ಪ್ರಕಟ- ಕೊಹ್ಲಿ, ಧೋನಿಗೆ ಬಡ್ತಿ!
ಅಮಾನತು ಶಿಕ್ಷೆ ಹಿಂಪಡೆ ಬಿಸಿಸಿಐ ರಾಹುಲ್ಗೆ ಭಾರತ ಎ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿತು. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕೆ.ಎಲ್.ರಾಹುಲ್ ಆರಂಭದಲ್ಲಿ ಎಡವಿದ್ದರೂ ಬಳಿಕ ಉತ್ತಮ ಪ್ರದರ್ಶನ ನೀಡಿದರು. ಇಷ್ಟೇ ಅಲ್ಲ ರಾಹುಲ್ ನೀಡಿರುವ ಸಲಹೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ನೆರವಾಯ್ತು ಎಂದು ರಾಹುಲ್ ಹೇಳಿದ್ದಾರೆ.
"
ಇದನ್ನೂ ಓದಿ: ಪಂದ್ಯದಲ್ಲಿ ಮುಗ್ಗರಿಸಿದರೂ ಧೋನಿ ಶ್ಲಾಘಿಸಿದ ಬಿಸಿಸಿಐ !
ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯದ ಟಿ20 ಸರಣಿಯಲ್ಲಿ ರಾಹುಲ್ 90 ರನ್ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಾಹುಲ್, ದ್ವಿತೀಯ ಪಂದ್ಯದಲ್ಲಿ 47 ರನ್ ಭಾರಿಸಿದ್ದರು. ಈ ಮೂಲಕ ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 1, 2019, 4:33 PM IST