Asianet Suvarna News Asianet Suvarna News

ರಾಹುಲ್‌ ಗಾಂಧಿಯ 'ಪನೌತಿ ಮೋದಿ' ಟೀಕೆಗೆ ತಿರುಗೇಟು ನೀಡಿದ ಮೊಹಮದ್‌ ಶಮಿ!

ಪ್ರಧಾನಿ ಮೋದಿ ಫೈನಲ್‌ ಪಂದ್ಯ ನೋಡಲು ಹೋಗಿದ್ದ ಕಾರಣಕ್ಕೆ ಟೀಮ್‌ ಇಂಡಿಯಾ ವಿಶ್ವಕಪ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು. ಅವರು ಪಿಎಂ ಅಲ್ಲ, ಪನೌತಿ ಮೋದಿ ಎಂದಿದ್ದ ರಾಹುಲ್‌ ಗಾಂಧಿ ಟೀಕೆಗೆ ಮೊಹಮದ್‌ ಶಮಿ ತಿರುಗೇಟು ನೀಡಿದ್ದಾರೆ.

Mohammed Shami on Panauti Modi jibe of Rahul Gandhi says PM Modi visit to dressing room gave us confidence san
Author
First Published Nov 23, 2023, 7:26 PM IST

ನವದೆಹಲಿ (ನ.23): ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್‌ ಫೈನಲ್‌ ನೋಡಲು ಮೈದಾನಕ್ಕೆ ಹೋಗಿದ್ದ ಕಾರಣದಿಂದಲೇ, ಟೀಮ್‌ ಇಮಡಿಯಾ ವಿಶ್ವಕಪ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು. ಅವರು ಪಿಎಂ ಅಲ್ಲ, ಪನೌತಿ ಮೋದಿ ಎಂದು ಟೀಕೆ ಮಾಡಿದ್ದ ರಾಹುಲ್‌ ಗಾಂಧಿಗೆ ತಿರುಗೇಟು ಎನ್ನುವಂತೆ ಟೀಮ್‌ ಇಂಡಿಯಾ ಕ್ರಿಕೆಟಿಗ ಮೊಹಮದ್‌ ಶಮಿ ಮಾತನಾಡಿದ್ದಾರೆ. ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೃದಯಭಗ್ನವಾಗುವ ಸೋಲಿನ ನಂತರ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊಹಮ್ಮದ್ ಶಮಿ ಮೆಚ್ಚಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ನಿರಾಶಾದಾಯಕ ಸೋಲಿನ ನಂತರ, ಆಟಗಾರರು ಸ್ವಾಭಾವಿಕವಾಗಿ ಭಾವನಾತ್ಮಕ ಮತ್ತು ದುಃಖಿತರಾಗಿದ್ದರು, ನಂತರ ಪ್ರಧಾನಿ ಮೋದಿ ಸಾಂತ್ವನ ಮಾಡಲು ಮತ್ತು ಆತ್ಮವಿಶ್ವಾಸವನ್ನು ನೀಡಲು ಡ್ರೆಸ್ಸಿಂಗ್‌ಗೆ ಭೇಟಿ ನೀಡಿದರು. ಡ್ರೆಸ್ಸಿಂಗ್ ರೂಮ್‌ನಲ್ಲಿ ಶಮಿಯನ್ನು ಪ್ರಧಾನಿ ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ವಿಶ್ವಕಪ್‌ನಲ್ಲಿ ಮೊಹಮದ್‌ ಶಮಿ 24 ವಿಕೆಟ್‌ ಉರುಳಿಸುವ ಮೂಲಕ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ ಎನಿಸಿಕೊಂಡಿದ್ದರು.

ಪ್ರಧಾನಿ ಮೋದಿ ಅವರ ಭೇಟಿಯು ಆಟಗಾರರು ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡಿತು ಎಂದು ಶಮಿ ಹೇಳಿದರು. ಆ ಸಮಯದಲ್ಲಿ ನಾವು ಪಂದ್ಯವನ್ನು ಸೋತಿದ್ದೆವು, ಅಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನಿಮಗೆ ವಿಶ್ವಾಸವನ್ನು ನೀಡಿದಾಗ ಅದು ವಿಭಿನ್ನ ಕ್ಷಣವಾಇತ್ತು. ಆ ಕ್ಷಣದಲ್ಲಿ ಅದು ಬಹಳ ಮುಖ್ಯವಾಗಿತ್ತು. ನೈತಿಕ ಸ್ಥೈರ್ಯ ಕಡಿಮೆಯಾದಾಗ ನಿಮ್ಮ ಪ್ರಧಾನಿ ನಿಮ್ಮೊಂದಿಗಿದ್ದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ.



ಭಾರತದ ಸೋಲಿಗೆ ಕಾರಣಗಳ ಕುರಿತು ಮಾತನಾಡಿದ ಶಮಿ, ತಂಡವು ಸಾಕಷ್ಟು ರನ್‌ ಗಳಿಸಿರಲಿಲ್ಲ ಎಂದು ಹೇಳೀದರು. ಭಾರತ 240 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ ಚೇಸಿಂಗ್ ಅನ್ನು ಪೂರ್ಣಗೊಳಿಸಿತು. 'ನಮ್ಮಲ್ಲಿ ಸಾಕಷ್ಟು ರನ್ ಇರಲಿಲ್ಲ. ನಾವು 300 ರನ್ ಗಳಿಸಿದ್ದರೆ, ನಾವು ಅದನ್ನು ಸುಲಭವಾಗಿ ರಕ್ಷಿಸಿಕೊಳ್ಳುತ್ತಿದ್ದೆವು. ಆದರೆ ಒಂದು ವಿಷಯವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ' ಎಂದು ಶಮಿ ಹೇಳಿದ್ದಾರೆ.

ಪಿಎಂ ಅಂದ್ರೆ 'ಪನೌತಿ ಮೋದಿ' ಪ್ರೈಮ್‌ ಮಿನಿಸ್ಟರ್‌ ಘನತೆಗೆ ಅವಮಾನಿಸಿದ್ರಾ ರಾಹುಲ್‌ ಗಾಂಧಿ?

ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಶಮಿ ಅವರ ಗ್ರಾಮವು ಶೀಘ್ರದಲ್ಲೇ ಮಿನಿ ಕ್ರೀಡಾಂಗಣ ಮತ್ತು ಜಿಮ್ನಾಷಿಯಂ ಅನ್ನು ಹೊಂದಲಿದೆ. ಈಗಾಗಲೇ ಜಿಲ್ಲಾಡಳಿತವು ಇದಕ್ಕಾಗಿ ಪ್ರಸ್ತಾವನೆಯನ್ನು ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಕ್ರೀಡಾಂಗಣವನ್ನು ನಿರ್ಮಿಸಲು ಈ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಯುಪಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಮ್ಮಲ್ಲಿ ಸಾಕಷ್ಟು ಪ್ರತಿಭೆ ಇದೆ. ನಮ್ಮ ಪ್ರದೇಶದಲ್ಲಿ ಉತ್ತಮ ಕ್ರೀಡಾಂಗಣ ಮತ್ತು ಅಕಾಡೆಮಿಯನ್ನು ಸ್ಥಾಪಿಸುವುದು ಮುಖ್ಯವಾಗಿದೆ, ಇದರಿಂದಾಗಿ ಯುವ ಆಟಗಾರರು ಆಟದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು' ಎಂದರು.

ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಸೋಲಿಲ್ಲದ ಸರದಾರ: 'ಅಪಶಕುನ' ಎಂದವರಿಗೆ ಕಂಗನಾ ತಿರುಗೇಟು

Follow Us:
Download App:
  • android
  • ios