Asianet Suvarna News Asianet Suvarna News

ರಾಜ್ಯದ ಮಾಜಿ ಕ್ರಿಕೆ​ಟಿಗ ಕಸ್ತೂ​ರಿ ​ರಂಗನ್‌ ನಿಧ​ನ

ಕರ್ನಾಟಕ ಕ್ರಿಕೆಟ್ ಕಂಡ ಸ್ಟಾರ್ ಆಲ್ರೌಂಡರ್ ಗೋಪಾಲಸ್ವಾಮಿ ಕಸ್ತೂರಿರಂಗನ್‌ (89) ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Karnataka loses legendary Cricketer G Kasturirangan
Author
Bengaluru, First Published Aug 20, 2020, 1:37 PM IST

ಬೆಂಗಳೂರು(ಆ.20): ಹಿರಿಯ ಕ್ರಿಕೆ​ಟಿಗ ಗೋಪಾ​ಲ​ಸ್ವಾಮಿ ಕಸ್ತೂರಿರಂಗನ್‌ (89) ಬುಧ​ವಾರ ಇಲ್ಲಿನ ತಮ್ಮ ನಿವಾಸದಲ್ಲಿ ಹೃದ​ಯಾ​ಘಾತದಿಂದ ನಿಧ​ನ​ರಾ​ದರು. ಕಸ್ತೂರಿರಂಗನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

1948ರಿಂದ 1963ರವರೆಗೂ ಮೈಸೂರು ರಾಜ್ಯದ ಪರ 36 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ ಆಡಿದ್ದ ವೇಗಿ 94 ವಿಕೆಟ್‌ ಕಬ​ಳಿ​ಸಿ​ದ್ದರು. ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಅತ್ಯು​ತ್ತಮ ಜ್ಞಾನ ಹೊಂದಿದ್ದ ಕಸ್ತೂರಿರಂಗನ್‌ ಬಿಸಿ​ಸಿಐ ಪಿಚ್‌ ಕ್ಯುರೇ​ಟರ್‌ ಸಮಿ​ತಿಯ ಅಧ್ಯಕ್ಷರಾಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಕರ್ನಾ​ಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ​ಎಸ್‌ಸಿಎ) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿ​ಸಿ​ದ್ದರು. ಅವರ ನಿಧ​ನಕ್ಕೆ ಕೆಎಸ್‌ಸಿಎ ಸಂತಾಪ ಸೂಚಿ​ಸಿದೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

Former Mysuru (Karnataka) cricketer Gopalswamy Kasturirangan has passed away at the age of 89, in Bengaluru. He’d played 36 FC matches and picked 94 wickets. He also served as an administrator and pitch curator after his playing days. Rest in peace, sir.

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) August 19, 2020

ಇನ್ನುಳಿದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ವಿಜಯ್‌ ಭಾರದ್ವಾಜ್‌, ದೊಡ್ಡ ಗಣೇಶ್‌ ಸೇರಿ​ದಂತೆ ಅನೇಕ ಮಾಜಿ ಕ್ರಿಕೆ​ಟಿ​ಗರು ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. 

Follow Us:
Download App:
  • android
  • ios