ಐಪಿಎಲ್ 2025ರ ಪ್ಲೇಆಫ್ ಹಂತಕ್ಕೆ ತಲುಪುತ್ತಿರುವಾಗ, ಕೆಲವು ಆಟಗಾರರು ತಮ್ಮ ತಂಡಗಳಿಗೆ ಗಮನಾರ್ಹ ವ್ಯತ್ಯಾಸವನ್ನುಂಟುಮಾಡಬಹುದು.
Parimatch sports analyst Sir Vivian Richards: ಐಪಿಎಲ್-2025 ಪಂದ್ಯಗಳನ್ನು ಧರ್ಮಶಾಲಾದಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಭಾರತ ಮತ್ತು ಅದರ ನೆರೆಯ ರಾಷ್ಟ್ರ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ದಿನೇದಿನೇ ಹೆಚ್ಚುತ್ತಿರುವುದರಿಂದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಅನುಮಾನದ ಕಾರ್ಮೋಡಕ್ಕೆ ಸಿಲುಕಿದೆ, ಅಷ್ಟೇ ಅಲ್ಲದೆ ಮುಂದಿನ ಕೆಲವು ದಿನಗಳವರೆಗೆ ಐಪಿಎಲ್ ಸಮಿತಿಯು ಪಂದ್ಯಗಳನ್ನು ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದೆ.
ಇಡೀ ರಾಷ್ಟ್ರವು ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ಹಿಡಿತದಲ್ಲಿರುವಾಗ, ಐಪಿಎಲ್ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ತಮ್ಮ ನಗರಗಳಲ್ಲಿನ ಹೆಚ್ಚಿನ ಉದ್ವಿಗ್ನ ವಾತಾವರಣದಿಂದ ಉಂಟಾದ ಭಯ-ಬಿಗುಮಾನದಿಂದ ಪಾರಾಗಲು ಒಂದು ಮನೋರಂಜನಾ ಮಾರ್ಗವನ್ನು ಒದಗಿಸುತ್ತದೆ.
ಪ್ಲೇಆಫ್ಗಳು ಸಮೀಪಿಸುತ್ತಿರುವುದರಿಂದ, ಮುಂದಿನ ಕೆಲವು ಪಂದ್ಯಗಳು ಟಾಪ್ 6-ರಲ್ಲಿರುವ ಎಲ್ಲಾ ತಂಡಗಳಿಗೆ ನಿರ್ಣಾಯಕ ವಾಗಿವೆ. ಏಕೆಂದರೆ ಮುಂಬೈ ಇಂಡಿಯನ್ಸ್, ದೆಹಲಿಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ನಂತಹ ತಂಡಗಳ ನಡುವೆ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಟ ಬಿಸಿಯಾಗಲಿದೆ, ಆದರೆ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿವೆ.
ಐಪಿಎಲ್ 2025ರ ಪ್ಲೇಆಫ್-ನಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದಾದ ಟಾಪ್ ಐದು ತಾರಾ ಪಟುಗಳನ್ನು ನೋಡೋಣ, ಏಕೆಂದರೆ ಅವರ ತಂಡವು ಲೀಗ್ ಹಂತದ ಕೊನೆಯಲ್ಲಿ ಅಂತಿಮ ನಾಲ್ಕಕ್ಕೆ ಎಂಬ ಹಂತಕ್ಕೆ ಇನ್ನೇನು ತಲುಪಿದೆ:
#5 ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)

ಮುಂಬೈ ಇಂಡಿಯನ್ಸ್ ತಂಡವು ಈ ಐಪಿಎಲ್ ಸೀಜನ್ ಅನ್ನು 4 ಪಂದ್ಯಗಳಲ್ಲಿ 3 ಸೋಲುಗಳೊಂದಿಗೆ ಆರಂಭಿಸಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಹಲವು ವಿಭಿನ್ನ ಕಾಂಬಿನೇಷನ್ಗಳನ್ನು ಪ್ರಯತ್ನಿಸಿದೆ. ಆದರೆ, ಮುಂಬೈ ಬೌಲರ್ಗಳಲ್ಲಿ ಯಾರಿಗೂ ಜಸ್ಪ್ರೀತ್ ಬುಮ್ರಾ ರವರ ಸ್ಥಾನವನ್ನು ತುಂಬಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ, ನಮ್ಮ ವಿಮರ್ಶಕರ ಅಭಿಪ್ರಾಯಕ್ಕೆ, ಅವರ ಡೆತ್ ಬೌಲಿಂಗ್ನಲ್ಲಿ ತಮ್ಮದೇ ಆದ ಸಾಧನೆ ಮಾಡಿರುವುದು ಕಂಡುಬಂದಿದೆ.
ಬುಮ್ರಾ ತಂಡಕ್ಕೆ ಮರಳಿದಾಗಿನಿಂದ, ಮುಂಬೈ ಮೂಲದ ಫ್ರಾಂಚೈಸಿ ಆರು ಪಂದ್ಯಗಳ ಗೆಲುವಿನ ಓಟವನ್ನು ಸಾಕಾರ ಗೊಳಿಸುವ ವ್ಯೂಹ ತನ್ನ ಗುರಿ ಸಾಧಿಸಿದೆ- ಇದು ಮಳೆಯಿಂದ ಬಾಧಿತ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಅಲ್ಪ ಸೋಲಿನೊಂದಿಗೆ ಕೊನೆಗೊಂಡಿತು, ಅಲ್ಲಿ ಬುಮ್ರಾ ಮುಂಬೈ ತಂಡದ ಪುನರಾಗಮನಕ್ಕೆ ಕಾರಣರಾಗಿದ್ದಾರೆ, ಆದರೆ ನಾಲ್ಕನೇ ಸೀಮರ್ ಕೊರತೆಯು ಮಹೇಲ ಜಯವರ್ಧನೆ ತರಬೇತಿ ನೀಡಿದ ತಂಡವನ್ನು ಮತ್ತೊಮ್ಮೆ ಕಾಡಲು ಪ್ರಾರಂಭಿಸಿತು ಎನ್ನುವುದು ಕ್ರಿಕೆಟ್ ಪಂಡಿತರು ಹೇಳುವ ಹಾಗೆ ಸುಳ್ಳಲ್ಲ.
ಈ ಸೀಸನಿನಲ್ಲಿ ಬುಮ್ರಾ 8 ಇನ್ನಿಂಗ್ಸ್ಗಳಲ್ಲಿ 13 ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು 6.68 ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಹಾಲಿ ಭಾರತೀಯ ಟೆಸ್ಟ್ ನಾಯಕ ಯಾವಾಗಲೂ ತಮ್ಮ ತಂಡಕ್ಕೆ ಕಠಿಣ ಓವರ್ಗಳನ್ನು ಬೌಲ್ ಮಾಡುವುದುಂಟು.
#4 ಕೃನಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಐಪಿಎಲ್-2025 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ದಿಕ್ಕನ್ನು ಬದಲಾಯಿಸಿದ ಕೃನಾಲ್ ಪಾಂಡ್ಯ ವಾಷಿಂಗ್ಟನ್ ಸುಂದರ್ ಮತ್ತು ವಿಲ್ ಜ್ಯಾಕ್ಸ್ರಂತಹ ಸ್ಪಿನ್ ಆಲ್ರೌಂಡರ್ಗಳು, ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಜರುಗಿದ್ದ, ಕ್ರೀಡಾಗಾರರ ಮೆಗಾ ಹರಾಜಿನಲ್ಲಿ ತೀರಾ ಕಡಿಮೆ ಮೊತ್ತಕ್ಕೆ ಮಾರಾಟವಾದಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೃಣಾಲ್ ಪಾಂಡ್ಯರವರನ್ನು ಮೆಗಾ-ಹರಾಜಿನಲ್ಲಿ ₹ 5.75 ಕೋಟಿ ಖರ್ಚು ಮಾಡಿದಾಗ ಕೆಲವರು ಹುಬ್ಬೇರಿಸಿದರು.
ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧದ ಈ ಸೀಸನ್ನಿನ ಆರಂಭಿಕ ಪಂದ್ಯದಲ್ಲಿ ಪಾಂಡ್ಯ 29 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಎಲ್ಲಾ ಅನುಮಾನಗಳನ್ನು ನಿವಾರಿಸಿದರು ಮತ್ತು ತಮ್ಮ ಹಿಂದಿನ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೃನಾಲ್ 4 ವಿಕೆಟ್ ಪಡೆದು 45 ರನ್ ನೀಡಿ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧದ ದೊಡ್ಡ ಗೆಲುವಿನಲ್ಲಿ ಎಕಾನಮಿಕಲಿ ಬೌಲಿಂಗ್ ಮಾಡಿದನಂತರ, ಪಾಂಡ್ಯ ಮುಲ್ಲನ್ಪುರದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡದ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು 2/25 ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ಗೆ ಅವರದೇ ಅಂಗಳದಲ್ಲಿ ಆಘಾತ ನೀಡಿದ್ದಾರೆ. ರಾಯಲ್ಸ್ ವಿರುದ್ಧ 2/31 ರನ್ ಗಳಿಸಿದ ನಂತರ ಬ್ಯಾಟಿಂಗ್ನಲ್ಲಿ ಅವರ ಮೊದಲ ಬೃಹತ್ ಕೊಡುಗೆ ಎಂದರೆ ಕೃನಾಲ್ 47 ಎಸೆತಗಳಲ್ಲಿ 73 ರನ್ ಗಳಿಸಿದ್ದು, ಇದು ಆರ್ಸಿಬಿ ರಾಷ್ಟ್ರೀಯ ರಾಜಧಾನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಲು ಸಹಾಯ ಮಾಡಿತು.
ರಾಯಲ್ ಚಾಲೆಂಜರ್ಸ್ ಈಗ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಎಂಬ ಇಬ್ಬರು ವಿದೇಶಿ ಫಿನಿಷರ್ಗಳೊಂದಿಗೆ ಆಡುತ್ತಿರುವುದರಿಂದ, ಈಡನ್ ಗಾರ್ಡನ್ಸ್ ಮ್ಯಾಚ್ ಕೊನೆಯಲ್ಲಿ ನಿಧಾನ ಗತಿಯ ಬೌಲರ್ಗಳಿಗೆ ಸಹಾಯ ಮಾಡುವ ಮೈದಾನ ಒದಗಿಬಂದಿದ್ದು, ಹಿಂದೆ ಎಂದಿಗಿಂದಲೂ ಹೆಚ್ಚು ನಿರೀಕ್ಷೆಯಿರುವುದರಿಂದ ಪ್ಲೇಆಫ್ನಲ್ಲಿ ಕೃನಾಲ್ ಪ್ರಮುಖ ಸ್ಪಿನ್ನರ್ ಆಗಿ ಅಗತ್ಯವಾಗಿಬಿಟ್ಟಿದ್ದಾರೆ.
#3 ಕೆ.ಎಲ್. ರಾಹುಲ್ (ದೆಹಲಿ ಕ್ಯಾಪಿಟಲ್ಸ್)

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿದಾಗಿನಿಂದ, ಕೆ.ಎಲ್.ರಾಹುಲ್ ಹೊಸ ಚೈತನ್ಯ ಪಡೆದಂತೆ ಆಡುತ್ತಿದ್ದಾರೆ, ವಿಕೆಟ್ಕೀಪರ್ ಬ್ಯಾಟ್ಸ್ಮನ್ ತಮ್ಮ ಶಾಂತ ಸ್ವಭಾವ ಮತ್ತು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿಬೇಕಾದರೂ ಆಡುವ ಸಾಮರ್ಥ್ಯದಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ.
ಕಳೆದ ಕೆಲವು ಪಂದ್ಯಗಳಲ್ಲಿ DC ತಂಡ ಈ ಕ್ರೀಡಾಪಟುವಿನ ಪ್ರದರ್ಶನದಲ್ಲಿ ಕುಸಿತ ಕಂಡಿದ್ದರೂ, DC ತಂಡದ ಪ್ರಮುಖ ಬ್ಯಾಟ್ಸ್ಮ್ ಫಾರ್ಮ್ನಲ್ಲಿ ಹಿನ್ನಡೆ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಕಳೆದ ಮೂರು ಇನ್ನಿಂಗ್ಸ್ಗಳಲ್ಲಿ 58 ರನ್ ಗಳಿಸಿದ್ದ ಇವರು, ಇದರ ಹಿಂದೆ 8 ಇನ್ನಿಂಗ್ಸ್ಗಳಲ್ಲಿ ಒಟ್ಟು 324 ರನ್ ಗಳಿಸಿಕೊಂಡು ಉತ್ತಮ ಸ್ಟ್ರೈಕ್-ರೇಟ್ನಲ್ಲಿ ಆಡಿದ್ದರು.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ಗಳಿಗೆ ಚೆನ್ನಾಗಿ ಒಗ್ಗಿಕೊಂಡಿದ್ದರೂ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರಂತಹ ಬಿಗಿ ಪಟ್ಟು ಹಾಡಿಯಬಲ್ಲ ಆಟಗಾರರು ಆ ಪಿಚ್ನಲ್ಲಿ ಕಷ್ಟ ಪಡುತ್ತಿದ್ದಾಗ, ಬ್ಯಾಟಿಂಗ್ಗೆ ಅನುಕೂಲಕರವಲ್ಲದ ಮೇಲ್ಮೈಯಲ್ಲಿ ತಯಾರಾಗಿಬಿಟ್ಟಿದ್ದ ಮೈದಾನದಲ್ಲಿ ರಾಹುಲ್ 53 ಎಸೆತಗಳಲ್ಲಿ 93 ರನ್ ಗಳಿಸುವ ಮೂಲಕ ಕ್ಯಾಪಿಟಲ್ಸ್ ಪರ ಅವರು ಅತ್ಯುತ್ತಮ ಇನ್ನಿಂಗ್ಸ್ ನೀಡಿದರು.
ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಕೇವಲ 51 ಎಸೆತಗಳಲ್ಲಿ 77 ರನ್ಗಳಿಸಿದರು, ಮತ್ತು ಸೀಜನ್-ನ ಅಂತ್ಯ ಸಮೀಪಿಸುತ್ತಿದ್ದಂತೆ ರಾಹುಲ್ ಮತ್ತೆ ಅತ್ಯುತ್ತಮ ಪ್ರದರ್ಶನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವ DC ಅಭಿಮಾನಿಗಳು ಹಾಗೂ ತಂಡದ ನಿರ್ವಾಹಕರು ಆಶಿಸುತ್ತಾರೆ.
#2 ಅರ್ಷದೀಪ್ ಸಿಂಗ್(ಪಂಜಾಬ್ ಕಿಂಗ್ಸ್)

ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಪರ ಪಾದಾರ್ಪಣೆ ಮಾಡಿದಾಗಿನಿಂದ ಅರ್ಶ್ದೀಪ್ ಸಿಂಗ್ ಕಳೆದ ಕೆಲವು ಸೀಸನ್-ಗಳಲ್ಲಿ ಕ್ಯಾಷ್-ರಿಚ್ ಲೀಗ್ನಲ್ಲಿ ಅತ್ಯಂತ ಸ್ಥಿರವಾದ ವೇಗದ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ. ಈ ಎಡಗೈ ಸೀಮರ್ ಹೊಸ ಬಾಲ್-ಅನ್ನು ಎರಡೂ ಕಡೆ ಸ್ವಿಂಗ್ ಮಾಡುತ್ತಾರೆ ಮತ್ತು ಅವರ ಅತ್ಯುತ್ತಮ ಯಾರ್ಕರ್ಗಳು, ಕಟ್ಟರ್ಗಳು ಮತ್ತು ನಿಧಾನಗತಿಯ ಎಸೆತಗಳಿಂದಾಗಿ ಪರಿಣಾಮಕಾರಿ ಮಾರಣಾಂತಿಕ ಬೌಲರ್ ಕೂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಾಕಿ ಫರ್ಗುಸನ್ ಈ ಸೀಜನ್ನಿಂದ ಹೊರಗುಳಿದ ನಂತರ, ಆರ್ಶದೀಪ್ ಸಿಂಗ್ ಮತ್ತು ಮಾರ್ಕೊ ಜಾನ್ಸೆನ್ ಪವರ್ಪ್ಲೇ ಮತ್ತು ಡೆತ್ ಓವರ್ಗಳನ್ನು ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು, ಅಜ್ಮತುಲ್ಲಾ ಒಮರ್ ಜೈ ಇಲ್ಲಿ-ಅಲ್ಲಿ ಒಂದಷ್ಟು ಸಹಕಾರಿಯಾದರು.
ಹೈದರಾಬಾದ್ನ ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಫ್ರಾಂಚೈಸಿಗಳು ರನ್ಗಳನ್ನು ಉಳಿಸುವ ಬದಲು ಎದುರಾಳಿ ತಂಡದ ಬ್ಯಾಟ್ಸಮನ್-ಗಳ ಪಾಲುದಾರಿಕೆಯನ್ನು ಮುರಿಯಲು ನೋಡುತ್ತಿರುವುದರಿಂದ ಅರ್ಶ್ದೀಪ್ ರಂತಹ ವಿಕೆಟ್ ಟೇಕರ್ಗಳು ಇನ್ನೂ ಹೆಚ್ಚು ಮುಖ್ಯವಾಗುತ್ತಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಸೀಸನ್ನಿನಲ್ಲಿ, ಅರ್ಶ್ದೀಪ್ 10 ಇನ್ನಿಂಗ್ಸ್ಗಳಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು ಅವರ ಎಕಾನಮಿ ದರವನ್ನು 8.0 ನಲ್ಲಿ ಕಾಯ್ದುಕೊಂಡಿದ್ದಾರೆ, ಈ ಭಾರತದ ಅಂತರರಾಷ್ಟ್ರೀಯ ಆಟಗಾರ ಯಾವಾಗಲೂ ಪವರ್ಪ್ಲೇ ಓವರ್ಗಳಲ್ಲಿ ಬೌಲಿಂಗ್ ಮಾಡುತ್ತಾರೆ ಮತ್ತು ಡೆತ್ ಓವರ್ಗಳಲ್ಲಿಯೂ ಕೊಡುಗೆ ನೀಡುತ್ತಾರೆ ಎಂಬುದನ್ನು ಗಮನಿಸಿದರೆ ಇದು ಬಹಳ ಪ್ರಭಾವಶಾಲಿಯಾಗಿದೆ.
#1 ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್)

ಕಗಿಸೊ ರಬಾಡ 2025 ರ ಐಪಿಎಲ್ ಸೀಸನ್ನಿನಲ್ಲಿ ತ್ವರಿತ ಪರಿಣಾಮ ಬೀರುವ ಪ್ರಮುಖ ಆಟಗಾರ ಆಗಿದ್ದಾರೆ.
ಕಳೆದ ಕೆಲವು ವಾರಗಳಿಂದ ಗುಜರಾತ್ ಟೈಟಾನ್ಸ್ನ ಬೌಲಿಂಗ್ ಕ್ರಿಕೆಟ್ ಪ್ರೇಮಿಗಳ ಲೋಕದಲ್ಲಿ ಎಲ್ಲೆಡೆ ಹೆಚ್ಚು ಚರ್ಚೆಯಲ್ಲಿದ್ದರೂ, ಈ ಚರ್ಚೆಗಳಿಂದ ಮೌನವಾಗಿ ತಪ್ಪಿಸಿಕೊಂಡಿರುವ ಒಂದು ಹೆಸರು ಕಗಿಸೊ ರಬಾಡ. ಟೈಟಾನ್ಸ್ ಪರ ಒಂದೆರಡು ಪಂದ್ಯಗಳಲ್ಲಿ ಆಡಿದ ನಂತರ ಪ್ರೋಟಿಯಸ್ ನಗರದ ಮೂಲದವರಾದ ವೇಗದ ಬೌಲರ್ ತವರಿಗೆ ಮರಳಿದ್ದರು. ಮತ್ತು ಉದ್ದೀಪನ ಔಷಧಿಗಳನ್ನು ಬಳಸಿದ್ದಕ್ಕಾಗಿ ಅವರ ತಾತ್ಕಾಲಿಕ ಒಂದು ತಿಂಗಳ ಅಮಾನತು ಶಿಕ್ಷೆಯನ್ನು ಪೂರೈಸಿದರು. ಮತ್ತು ನಂತರ ಮಾದಕ ವ್ಯಸನ ಚಿಕಿತ್ಸಾಕಾರ್ಯಕ್ರಮದ ಒಂದೆರಡು ಅವಧಿಗಳನ್ನು ಒಳಗೊಂಡಿರುವ ಕೋರ್ಸ್-ಅನ್ನು ಪೂರ್ಣಗೊಳಿಸಿ ಮತ್ತೆ ಮೈದಾನದ ಕಡೆ ಮುಖ ಮಾಡಿದರು.
ಜೆರಾಲ್ಡ್ ಕೋಟ್ಜೀ ನಿಧಾನವಾಗಿ ಆಡುವ XI-ಗೆ ಪ್ರವೇಶ ಪಡೆದಿದ್ದರೂ, ಆಶಿಶ್ ನೆಹ್ರಾ ಮತ್ತು ತಂಡವು ರಬಾಡ ರವರನ್ನು ಮ್ಯಾಚ್-ಫಿಟ್ ಎಂದು ಪರಿಗಣಿಸಿದ್ದಾರೆ, ಸಮ್ಮ-ಸುಮ್ಮನೆ ಗೂಬೆಕೂರಿಸುವ ಈ ಸಂದರ್ಭದಲ್ಲಿ ಯುವ ಆಟಗಾರನು ತನ್ನ ಸಹ ಆಟಗಾರನಿಗೆ ದಾರಿ ತೋರಿಸುವುದು ಅಗತ್ಯ, ಅವರು ಸಂಭಾವ್ಯ ಪಂದ್ಯ ಗೆಲ್ಲುವ ಆಟಗಾರನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಈಗ, ಟೈಟಾನ್ಸ್ ತಂಡವು ಅತ್ಯಂತ ದೊಡ್ಡ ವೇದಿಕೆಯಲ್ಲಿ ತನ್ನ ಮೇಲೆ ಏಕೆ 10.75 ಕೋಟಿ ರೂಪಾಯಿಗಳನ್ನು ತೆತ್ತಿದೆ ಎಂಬುದನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತು GT ಪ್ಲೇಆಫ್ಗೆ ತಲುಪಿ ತನ್ನ ಎರಡನೇ ಟ್ರೋಫಿಯನ್ನು ಎತ್ತಿ ಹಿಡಿಯಲು ಸಹಾಯ ಮಾಡುವ ಜವಾಬ್ದಾರಿ ಈಗ ರಬಾಡರವರ ಹೆಗಲ ಮೇಲಿದೆ.
