ಲಖನೌ ಎದುರು ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿತವರಿನ ಸೋಲಿನ ಸೇಡು ತೀರಿಸಿಕೊಂಡ ಬೆಂಗಳೂರುಮುಗಿಲುಮುಟ್ಟಿದ ಆರ್‌ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ

ಲಖನೌ(ಮೇ.02): ಮತ್ತೊಂದು ರೋಚಕ ಪಂದ್ಯಾಟಕ್ಕೆ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್‌ ಸಾಕ್ಷಿಯಾಗಿದೆ. ಮೇ 01ರಂದು ಇಲ್ಲಿನ ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್‌ ಮೈದಾನದಲ್ಲಿ ನಡೆದ ಕಡಿಮೆ ಮೊತ್ತದ ಪಂದ್ಯವೊಂದರಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಎದುರು ಆರ್‌ಸಿಬಿ 18 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಆಘಾತಕಾರಿ ಸೋಲಿನ ಲೆಕ್ಕಾಚುಕ್ತಾ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. 

ತನ್ನದೇ ತವ​ರಿ​ನಲ್ಲಿ ಲಖನೌ ವಿರುದ್ಧ ಎದು​ರಾ​ಗಿದ್ದ ಸೋಲಿನ ಮುಖ​ಭಂಗ ಹಾಗೂ ಅತಿ​ರೇ​ಕದ ಸಂಭ್ರ​ಮಾ​ಚ​ರ​ಣೆಗೆ ಸೋಮ​ವಾರ ಆರ್‌​ಸಿಬಿ ಸರಿ​ಯಾ​ಗಿಯೇ ಸೇಡು ತೀರಿ​ಸಿ​ಕೊಂಡಿದೆ. ಲಖ​ನೌನ ಸ್ಪಿನ್‌ ಪಿಚ್‌​ನಲ್ಲಿ ನಡೆದ ಕಡಿಮೆ ಮೊತ್ತದ ಥ್ರಿಲ್ಲ​ರ್‌​ನಲ್ಲಿ 18 ರನ್‌​ಗ​ಳಿಂದ ಗೆದ್ದ ಆರ್‌​ಸಿಬಿ, ಅಂಕ​ಪ​ಟ್ಟಿ​ಯಲ್ಲಿ 5ನೇ ​ಸ್ಥಾ​ನ​ಕ್ಕೇ​ರಿದರೆ, ತವ​ರಿ​ನಲ್ಲಿ ಸತತ 2ನೇ ಪಂದ್ಯ​ದಲ್ಲೂ 135ಕ್ಕಿಂತ ಕಡಿಮೆ ಮೊತ್ತ ಚೇಸ್‌ ಮಾಡ​ಲಾಗದ ಲಖ​ನೌ 3ನೇ ಸ್ಥಾನಕ್ಕೆ ಕುಸಿ​ಯಿ​ತು.

150 ಕೂಡಾ ಉತ್ತಮ ಮೊತ್ತ ಎನಿ​ಸಿದ್ದ ಪಿಚ್‌​ನಲ್ಲಿ ಮೊದಲು ಬ್ಯಾಟಿಂಗ್‌​ಗಿ​ಳಿದ ಆರ್‌​ಸಿಬಿ ಗಳಿ​ಸಿದ್ದು 9 ವಿಕೆ​ಟ್‌ಗೆ ಕೇವಲ 126 ರನ್‌. ಬ್ಯಾಟ​ರ್‌​ಗಳು ನಿರೀ​ಕ್ಷಿತ ಮೊತ್ತ ಗಳಿಸ​ದಿ​ದ್ದ​ರೂ ಬೌಲ​ರ್‌​ಗಳು ತಂಡದ ಕೈಹಿ​ಡಿ​ದರು. ಬಿಗು ದಾಳಿ ನಡೆಸಿ 19.5 ಓವ​ರಲ್ಲಿ ಲಖನೌ ತಂಡವನ್ನು 108ಕ್ಕೆ ಆಲೌಟ್‌ ಮಾಡಿತು. ಶೂನ್ಯಕ್ಕೇ ವಿಕೆಟ್‌ ಕಳೆ​ದು​ಕೊಂಡ ತಂಡದ ಪೆವಿ​ಲಿ​ಯನ್‌ ಪರೇಡ್‌ ಕೊನೆವರೆಗೂ ನಿಲ್ಲಿ​ಲಿ​ಲ್ಲ. ಕೆ.ಗೌ​ತ​ಮ್‌​(23), ಕೃನಾ​ಲ್‌​(14), ಸ್ಟೋಯ್ನಿ​ಸ್‌​(13) ಬಿಟ್ಟರೆ ಉಳಿ​ದ​ವ​ರಾರ‍ಯರೂ ಮಿಂಚ​ಲಿಲ್ಲ. 38ಕ್ಕೆ ಪ್ರಮುಖ 5 ವಿಕೆಟ್‌ ಕಿತ್ತ ಆರ್‌​ಸಿಬಿ ಬೌಲ​ರ್ಸ್‌ ಪಂದ್ಯದ ಮೇಲಿನ ಹಿಡಿತ ಕೈಜಾ​ರ​ದಂತೆ ನೋಡಿ​ಕೊಂಡರು. ಅಮಿತ್‌ ಮಿಶ್ರಾ​(​19), ನವೀನ್‌-ಉಲ್‌-ಹಕ್‌(13) ಹೋರಾಟ ತಂಡದ ಗೆಲು​ವಿಗೆ ಸಾಕಾ​ಗ​ಲಿಲ್ಲ. ಗಾಯ​ದಿಂದಾಗಿ ಕೊನೆ ಕ್ರಮಾಂಕ​ದಲ್ಲಿ ಕ್ರೀಸ್‌​ಗಿ​ಳಿದ ರಾಹು​ಲ್‌​(00) ಖಾತೆ ತೆರೆಯಲೂ ಸಾಧ್ಯ​ವಾ​ಗ​ಲಿ​ಲ್ಲ. ಜೋಶ್ ಹೇಜ​ಲ್‌​ವುಡ್‌, ಕರ್ಣ್ ಶರ್ಮಾ ತಲಾ 2 ವಿಕೆಟ್‌ ಪಡೆ​ದ​ರು.

IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!

ಕೊಹ್ಲಿ-ಗಂಭೀರ್‌ ವಾಗ್ವಾದ

ಬೆಂಗ​ಳೂ​ರಿನ ಪಂದ್ಯ​ದಲ್ಲಿ ಆರ್‌​ಸಿಬಿ ಅಭಿ​ಮಾ​ನಿ​ಗ​ಳನ್ನು ಗಂಭೀ​ರ್‌ ಕೆಣ​ಕ್ಕಿ​ದ್ದಕ್ಕೆ ಆಕ್ರೋ​ಶಿ​ತ​ರಾ​ಗಿದ್ದ ಕೊಹ್ಲಿ, ಈ ಬಾರಿ ಮೈದಾ​ನ​ದಲ್ಲೇ ಬಾಯಿ ಮುಚ್ಚಿಸುವ ಸನ್ನೆ ಮೂಲಕ ಉತ್ತರ ಕೊಟ್ಟರು. ಪಂದ್ಯದ ಬಳಿಕವೂ ಇವ​ರಿ​ಬ್ಬರ ನಡುವೆ ತೀವ್ರ ಮಾತಿನ ಚಕ​ಮಕಿ ನಡೆ​ಯಿತು. ಈ ವೇಳೆ ಅವ​ರ​ನ್ನು ಆಟ​ಗಾ​ರರು, ಅಂಪೈ​ರ್‌​ಗಳು ಸಮಾ​ಧಾನಪಡಿ​ಸಲು ಯತ್ನಿ​ಸಿ​ದರು.

View post on Instagram

ಆರ್‌ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್‌ ನಡುವಿನ ಈ ಪಂದ್ಯವು ಸಾಕಷ್ಟು ಕಾರಣಗಳಿಗೆ ಮಹತ್ವ ಪಡೆದುಕೊಂಡಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ ಎದುರು ಆರ್‌ಸಿಬಿ ವಿರೋಚಿತ ಸೋಲು ಅನುಭವಿಸಿತ್ತು. ಆ ಸಂದರ್ಭದಲ್ಲಿ ಗೆಲುವಿನ ರನ್ ಓಡಿದ್ದ ಆವೇಶ್‌ ಖಾನ್ ಮೈದಾನದಲ್ಲೇ ಹೆಲ್ಮೆಟ್ ಎಸೆದು ಅತಿರೇಕದ ವರ್ತನೆ ತೋರಿದ್ದರು. ಇನ್ನು ಕೊನೆಯವರೆಗೂ ತವರಿನ ತಂಡವು ಗೆಲ್ಲಲಿ ಎಂದು ಆರ್‌ಸಿಬಿ... ಆರ್‌ಸಿಬಿ.. ಎಂದು ಘರ್ಜಿಸುತ್ತಿದ್ದ ಅಭಿಮಾನಿಗಳು ಸೈಲೆಂಟ್ ಆಗಿರಿ ಎಂದು ತಂಡದ ಮೆಂಟರ್ ಗೌತಮ್‌ ಗಂಭೀರ್ ತುಟಿಮೇಲೆ ಕೈಯಿಟ್ಟು ಹುಷಾರ್ ಎನ್ನುವಂತಹ ಸೂಚನೆ ನೀಡಿದ್ದರು. ಆದರೆ ಇದೀಗ ಲಖನೌ ತಂಡವನ್ನು ಅವರದ್ದೇ ಮೈದಾನದಲ್ಲಿ ಅಲ್ಪಮೊತ್ತಕ್ಕೆ ಆಲೌಟ್ ಮಾಡುವುದಷ್ಟೇ ಅಲ್ಲದೇ ತಾವು ಯಾವುದನ್ನೂ ಇಟ್ಟುಕೊಳ್ಳುವುದಿಲ್ಲ, ಬಡ್ಡಿಸಹಿತ ವಾಪಾಸ್ ನೀಡುತ್ತೇವೆ ಎನ್ನುವುದನ್ನು ಆರ್‌ಸಿಬಿ ತನ್ನ ಪ್ರದರ್ಶನದ ಮೂಲಕ ಮಾಡಿ ತೋರಿಸಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಮುಗಿಲು ಮುಟ್ಟಿದ್ದು, ಅದರ ಒಂದಷ್ಟು ಸ್ಯಾಂಪಲ್‌ಗಳು ಇಲ್ಲಿವೆ ನೋಡಿ....

Scroll to load tweet…
View post on Instagram
View post on Instagram
View post on Instagram
View post on Instagram
View post on Instagram