* ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್‌ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಫೇಲ್* ಇತಿಹಾಸ ಮರುಕಳಿಸಿದರೆ 4ನೇ ಪಂದ್ಯದಿಂದ ರನ್ ಮಳೆ ಗ್ಯಾರಂಟಿ* ಈ ಹಿಂದಿನ ಆವೃತ್ತಿಗಳಲ್ಲೂ ಮೊದಲ 3 ಪಂದ್ಯ ಫೇಲ್ ಆಗಿದ್ದ ಗಾಯಕ್ವಾಡ್‌

ಬೆಂಗಳೂರು(ಏ.06): 0,1,1. ಕಳೆದ ಐಪಿಎಲ್​ ಶೂರ, ಆರೆಂಜ್​​ ಕ್ಯಾಪ್ (Orange Cap) ವಿನ್ನರ್​ ಋತುರಾಜ್​​ ಗಾಯಕ್ವಾಡ್ (Ruturaj Gaikwad)​ ಪ್ರಸಕ್ತ ಐಪಿಎಲ್​​ನಲ್ಲಿ ಗಳಿಸಿದ ರನ್​​ಗಳಿವು. ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಡಕೌಟ್​ ಆದ್ರೆ, ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್​ ಕಿಂಗ್ಸ್ (Punjab Kings) ವಿರುದ್ಧ ತಲಾ 1 ರನ್​ಗೆ ಆಟ ನಿಲ್ಲಿಸಿದ್ರು. ಆರಂಭಿಕ ಮೂರು ಪ್ಲಾಫ್​ ಶೋ ನೀಡಿರೋ ಚೆನ್ನೈ ಓಪನರ್ ವಿರುದ್ಧ ಟೀಕಾಸ್ತ್ರ ಪ್ರಯೋಗವಾಗ್ತಿದೆ. ಆದ್ರೆ ಋತುರಾಜ್​​​​ರನ್ನ ಟೀಕಿಸೋ ಮುನ್ನ ಇನ್ನೂ ಒಮ್ಮೆ ಯೋಚಿಸಿ. ಯಾಕಂದ್ರೆ ಮೊದಲ ಮೂರು ಬ್ಯಾಡ್ ಇನ್ನಿಂಗ್ಸ್​​ ಕೊನೆಯಲ್ಲ. ಅದನ್ನು ಕೊನೆಯಾಗಿಸುವ ಪ್ಲೇಯರ್​ ಗಾಯಕ್ವಾಡ್​ ಅಲ್ಲ ಅನ್ನೋದು ಕೂಡ ನಿಮಗೆ ನೆನಪಿರ್ಲಿ. ಯಾಕಂದ್ರೆ ಋತುರಾಜ್​ ಐಪಿಎಲ್​​ ಹಿಸ್ಟರಿ ಕೆದಕಿದ್ರೆ ಆತನ ಆಸಲಿ ಆಟ ಶುರುವಾಗೋದೆ 4ನೇ ಪಂದ್ಯದಿಂದ. 

ಮೂರು ಅವೃತ್ತಿ. ಮೊದಲ 3 ಪಂದ್ಯದಲ್ಲಿ ಪ್ಲಾಫ್ ಶೋ, 4ನೇ ಪಂದ್ಯದಿಂದ ಗಾಯಕ್ವಾಡ್​ರ ಅಸಲಿ ಆಟ ಶುರು: ​​​ಹೌದು, ರನ್​ ಮಶೀನ್ ಗಾಯಕ್ವಾಡ್ ಈ ಸೀಸನ್​ ಮಾತ್ರವಲ್ಲ, ಹಿಂದಿನ ಎರಡು ಸೀಸನ್​​​ನ ಆರಂಭಿಕ ಮೂರು ಪಂದ್ಯಗಳಲ್ಲಿ ರನ್​ ಬರ ಎದುರಿಸಿದ್ದಾರೆ. ನಂತರವಷ್ಟೇ ರನ್​ ಹೊಳೆ ಹರಿಸ್ತಾರೆ, ಟೆರಿಬಲ್​ ಪರ್ಫಾಮೆನ್ಸ್​ ನೀಡ್ತಾರೆ.

IPL 2020. ಫಸ್ಟ್​ 3 ಮ್ಯಾಚ್ 5 ರನ್​​​. ಬಳಿಕ 199 ರನ್​​

​​​2020ರಲ್ಲಿ ಐಪಿಎಲ್​ ಲೋಕಕ್ಕೆ ಎಂಟ್ರಿಕೊಟ್ಟ ಋತುರಾಜ್, ಮೊದಲ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ರು. ಎರಡು ಪಂದ್ಯಗಳಲ್ಲಿ ಡಕೌಟ್ ಆದ್ರೆ, ಒಂದು ಪಂದ್ಯದಲ್ಲಿ 5 ರನ್​​ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಬಳಿಕ ಸಿಡಿದೆದ್ದ ಗಾಯಕ್ವಾಡ್​​​ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ್ರು. ಟೂರ್ನಿಯಲ್ಲಿ 204 ರನ್​ ಬಾರಿಸಿದ್ರು. ಇದರ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು (Chennai Super Kings) ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

IPL 2022 'ಆರ್‌ಸಿಬಿ ಐ ಯಾಮ್ ಸಾರಿ' ಎಂದುಬಿಟ್ರಾ ಯುಜುವೇಂದ್ರ ಚಹಲ್..!

IPL 2021. ಫಸ್ಟ್​​​​ 3 ಮ್ಯಾಚ್​​ ಫೇಲ್​​. ಕೊನೆಗೆ ಆರೆಂಜ್​ ಕ್ಯಾಪ್ ವಿನ್ನರ್​​

​​​ಇನ್ನು 2020ರಂತೆ 2021ರಲ್ಲೂ ಆರಂಭಿಕ ಮೂರು ಐಪಿಲ್‌ ಮ್ಯಾಚ್​​ನಲ್ಲಿ ಕಳಪೆ ಆಟವಾಡಿದ್ರು. ಆದ್ರೆ ಆ ಬಳಿಕ ಹಿಸ್ಟರಿ ಸೃಷ್ಟಿಸಿದ್ರು. 4ನೇ ಮ್ಯಾಚ್​ನಿಂದ ರನ್​​ ಗುಡ್ಡೆ ಹಾಕಿ ಆರೆಂಜ್​ ಕ್ಯಾಪ್​ ವಿನ್ನರ್​ ಆದ್ರು. 1 ಸೆಂಚುರಿ, 4 ಹಾಫ್​ಸೆಂಚುರಿ ಸಹಿತ ಒಟ್ಟು 635 ರನ್​ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್​ಗೆ ಕಾರಣರಾಗಿದ್ರು. ಫಾಫ್ ಡು ಪ್ಲೆಸಿಸ್‌ ಹಾಗೂ ಋತುರಾಜ್ ಗಾಯಕ್ವಾಡ್‌ ಸ್ಪರ್ಧೆಗೆ ಬಿದ್ದವರಂತೆ ರನ್‌ ಬಾರಿಸುವ ಮೂಲಕ ಅಬ್ಬರಿಸಿದ್ದರು.

ಈ ಬಾರಿಯೂ 2020-21ರ ಆರ್ಭಟ ರಿಪೀಟ್ ಆಗುತ್ತಾ..? 

ಈ ಹಿಂದಿನ ಆವೃತ್ತಿಗಳಂತೆ ಋತುರಾಜ್​ ಪ್ರಸಕ್ತ ಐಪಿಎಲ್​​ನಲ್ಲಿ 4ನೇ ಪಂದ್ಯದಿಂದ ಲಯಕ್ಕೆ ಮರಳಬೇಕಿದೆ. ಆ ಕೆಪಾಸಿಟಿ ಗಾಯಕ್ವಾಡ್​​ಗಿದೆ.ಆದರೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಋತುರಾಜ್ ಗಾಯಕ್ವಾಡ್‌ಗೆ ಸೂಕ್ತ ಮಾರ್ಗದರ್ಶನ ನೀಡಲು ಫಾಫ್ ಡು ಪ್ಲೆಸಿಸ್ (Faf du Plessis) ಇದ್ರು, ಆದರೆ ಈ ಬಾರಿ ಫಾಫ್ ಆರ್‌ಸಿಬಿ ತಂಡದಲ್ಲಿದ್ದಾರೆ. ಇದೆಲ್ಲದರ ಹೊರತಾಗಿ ಇತಿಹಾಸ ಮರುಕಳಿಸಿದರೆ, ಋತುರಾಜ್‌ ಗಾಯಕ್ವಾಡ್ ಅಬ್ಬರವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ಯಂಗ್​ಮ್ಯಾನ್​​ಗೆ ಶನಿವಾರದಿಂದ ಕೇಡುಗಾಲ ಮುಗಿಯಲಿದೆ. ಇನ್ನೇನಿದ್ರು ಶುಭಕಾಲ. ಹಾಫ್​ ಸೆಂಚುರಿ, ಸೆಂಚುರಿ ವೈಭವವನ್ನ ನೀವು ಕಣ್ತುಂಬಿಕೊಳ್ಳಲು ಸಜ್ಜಾಗಿ.