userpic
user icon
0 Min read

ಭಾರತೀಯ ಸೇನೆ ಪ್ರತಿದಾಳಿಗೆ ನಾಲಗೆ ಹರಿಬಿಟ್ಟ ಅಂಬಾಟಿ ರಾಯುಡು ವಿರುದ್ಧ ಆಕ್ರೋಶ

Fans Slams Ambati Rayudu over disgusting tweet amid India Pakistan war tension

Synopsis

ಆರ್‌ಸಿಬಿ ವಿರುದ್ಧ, ಬೆಂಗಳೂರಿಗರ ವಿರುದ್ಧ ಸದಾ ದ್ವೇಷ ಹೊರಹಾಕುವ ಅಂಬಾಟಿ ರಾಯುಡು ಇದೀಗ ಭಾರತೀಯರ ಕೆಂಗಣ್ಮಿಗೆ ಗುರಿಯಾಗಿದ್ದಾರೆ. ಕಾರಣ ಭಾರತೀಯ ಸೇನಾ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ಅಡಿರುವ ಮಾತು.

ನವೆದೆಹಲಿ(ಮೇ.08)  ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ. ಇದರ ನಡುವೆ ಅಂಬಾಟಿ ರಾಯುಡು ಭಾರತೀಯ ಸೇನೆಗೆ ಉಪದೇಶ ಮಾಡಿದ್ದಾರೆ. ಪಾಕಿಸ್ತಾನದ ಡ್ರೋನ್, ಮಿಸೈಲ್ ದಾಳಿ ಸೇರಿದಂತೆ ಹಲವು ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುವಂತೆ ಜನ ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಇದೀಗ ಶಾಂತಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಭಾರತೀಯ ಸೇನೆಗೆ ಉಪದೇಶ ಕೊಟ್ಟಿದ್ದಾರೆ. ಕಣ್ಣಿಗೆ ಕಣ್ಣಿಗೆ ಎಂದಾದರೆ ಜಗತ್ತೆ ಕುರುಡಾಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅಂಬಾಟಿ ರಾಯುಡು ಟ್ವೀಟ್‌ನಿಂದ ಇದ್ದ ನಾಲ್ಕು ಫಾಲೋವರ್ಸ್ ಕೂಡ ಅಂಬಾಟಿ ವಿರುದ್ದ ತಿರುಗು ಬಿದಿದ್ದಾರೆ.

ಕಣ್ಣಿಗೆ ಕಣ್ಣು ಅಂದರೆ ಜಗತ್ತೆ ಕುರುಡಾಗುತ್ತೆ ಹೇಳಿ ಕೆಟ್ಟ ರಾಯುಡು
ಪಾಕಿಸ್ತಾನದ ದಾಳಿ, ಭಾರತದ ಪ್ರತಿದಾಳಿಯನ್ನು ಉದ್ದೇಶಿಸಿ ಅಂಬಾಟಿ ರಾಯುಡು ಟ್ವೀಟ್ ಮಾಡಿದ್ದಾರೆ. ಕಣ್ಣಿಗೆ ಕಣ್ಣೇ ಪರಿಹಾರ ಎಂದಾದರೆ ಈ ಜಗತ್ತಿನಲ್ಲಿ ಯಾರಿಗೂ ಕಣ್ಣೇ ಇರುವುದಿಲ್ಲ, ಎಲ್ಲರು ಕುರುಡರಾಗುತ್ತಾರೆ ಎಂದು ಅಂಬಾಟಿ ರಾಯುಡು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾರತೀಯ ಸೇನೆ ಹಾಗೂ ಭಾರತ ಪಾಕಿಸ್ತಾನದ ಜೊತೆಗೆ ಶಾಂತಿ ಮಾತುಕತೆ ನಡೆಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಮುಯ್ಯಿಗೆ ಮುಯ್ಯಿ ಅಲ್ಲ, ಇದರ ಬದಲಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅನ್ನೋ ಪರೋಕ್ಷ ಸಂದೇಶನ್ನು ಅಂಬಾಟಿ ರಾಯುಡು ಹರಡಿದ್ದಾರೆ. 

ಸೇನೆ ಸೂಚನೆ ಮೇರೆಗೆ ಲೈಟ್ ಆಫ್, ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದು

ಅಂಬಾಟಿ ವಿರುದ್ಧ ಭಾರಿ ಆಕ್ರೋಶ
ಇಷ್ಟು ದಿನ ಅಂಬಾಟಿ ರಾಯುಡು ಹೇಳಿಕೆ, ಮಾತುಗಳು ಕನಿಷ್ಠ ಪಕ್ಷ ಕಟ್ಟರ್ ಸಿಎಸ್‌ಕೆ ಅಭಿಮಾನಿಗಳು, ಧೋನಿ ಅಭಿಮಾನಿಗಳಿಗೆ ಒಕೆ ಎನಿಸುತ್ತಿತ್ತು. ಆದರೆ ಬೆಂಗಳೂರಿಗರೂ, ಆರ್‌ಸಿಬಿ ಅಭಿಮಾನಿಗಳು ಅಂಬಾಟಿ ರಾಯುಡುವನ್ನು ಯಾವತ್ತೂ ಲಿಸ್ಟ್‌ನಿಂದ ತೆಗೆದು ಬಿಟ್ಟಿದ್ದರು. ಹೀಗಾಗಿ ರಾಯುಡು ಹೇಳಿಕೆಗೆ ಯಾವುದೇ ಮಹತ್ವ ಸಿಗುತ್ತಿರಲಿಲ್ಲ. ರಾಯುಡುವನ್ನು ಬೆಂಗಳೂರು ಹಾಗೂ ಆರ್‌ಸಿಬಿ ಅಭಿಮಾನಿಗಳು ದ್ವೇಷಿಸುತ್ತಿದ್ದರು. ಇದೀಗ ಅಂಬಾಟಿ ರಾಯುಡು ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.ಅಂಬಾಟಿ ರಾಯುಡು ಕುರಿತು ಹಲವರು ಟ್ವೀಟ್ ಮಾಡಿದ್ದಾರೆ. ಅಂಬಾಟಿ ರಾಯುಡುಗೆ ಅವಕಾಶ ಸಿಗದಾಗ ಮರುಗಿದ್ದೇನೆ. ರಾಯುಡುಗೆ ಅನ್ಯವಾಗಿದ್ದೆ ಎಂದು ರಾಯುಡು ಪರ ನಿಂತಿದ್ದೆ. ಆದರೆ ಈ ಟ್ವೀಟ್ ಮೂಲಕ ರಾಯುಡುಗೆ ಯಾಕೆ ಅವಕಾಶ ಸಿಗಲಿಲ್ಲ ಅನ್ನೋದು ಸ್ಪಷ್ಟವಾಯಿತು. ಇಷ್ಟೇ ಅಲ್ಲ ಇನ್ಮೆಂದು ಅಂಬಾಟಿ ರಾಯುಡು ಪರ ನಿಲ್ಲುವುದಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

 

 

ಅಂಬಾಟಿ ಅಭಿಮಾನಿಗಳಿಂದರೂ ಛೀಮಾರಿ
ಅಂಬಾಟಿ ರಾಯುಡು ಅಭಿಮಾನಿಗಳು ಕೂಡ ಛೀಮಾರಿ ಹಾಕಿದ್ದಾರೆ. ತಕ್ಷಣವೇ ಟ್ವೀಟ್ ಡೀಲೀಟ್ ಮಾಡಿ ಕ್ಷಮೆ ಕೇಳಲು ಅಂಬಾಟಿ ರಾಯುಡು ಅಭಿಮಾನಿಗಳು ಆಗ್ರಹಿಸಿದ್ದಾರೆ. ಈ ಟ್ವೀಟ್‌ನಿಂದ ಅಂಬಾಟಿ ಪರ ನಿಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

Breaking ಪಾಕಿಸ್ತಾನ ಫೈಟರ್ ಜೆಟ್ ಹೊಡೆದುರುಳಿಸಿ ಪೈಲೆಟ್ ವಶಕ್ಕೆ ಪಡೆದ ಭಾರತ

Download App

Latest Videos