ಚೆನ್ನೈ ಸೂಪರ್ ಕಿಂಗ್ಸ್ ತೊರೆಯುವ ಸೂಚನೆ ನೀಡಿದ ರವೀಂದ್ರ ಜಡೇಜಾರವೀಂದ್ರ ಜಡೇಜಾ ಬೆನ್ನಲ್ಲೇ ಮತ್ತಿಬ್ಬರು ಆಟಗಾರರು ಚೆನ್ನೈ ತೊರೆಯಲು ಸಿದ್ದತೆಚೆನ್ನೈಗೆ ಶಾಕ್ ನೀಡಲು ನಂಬಿಕಸ್ಥ ಆಟಗಾರರಿಂದಲೇ ತೀರ್ಮಾನ?
ಬೆಂಗಳೂರು(ಜು.11): 15ನೇ ಐಪಿಎಲ್ ಸದ್ಯ ಮುಗಿದ ಅಧ್ಯಾಯ. 16ನೇ ಐಪಿಎಲ್ ಸೀಸನ್ ಆರಂಭಕ್ಕೆ ಇನ್ನು ಸಾಕಷ್ಟು ಟೈಮ್ ಇದೆ. ಆದರೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಕಷ್ಟು ಸುದ್ದಿಯಾಗಗತಿದೆ. ಭಿನ್ನಾಭಿಪ್ರಯಾದಿಂದಾಗಿ ಈಗಾಗಲೇ ಆಲ್ರೌಂಡರ್ ರವೀಂದ್ರ ಜಡೇಜಾ ಚೆನ್ನೈ ತಂಡಕ್ಕೆ ಗುಡ್ಬೈ ಹೇಳಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಪೋಸ್ಟ್ಗಳನ್ನ ಡಿಲೀಟ್ ಮಾಡಿದ್ರು. ಆ ಮೂಲಕ ನೆಚ್ಚಿನ ತಂಡವನ್ನ ತೊರೆವ ಸೂಚನೆಯನ್ನು ಎಡಗೈ ಆಲ್ರೌಂಡರ್ ನೀಡಿದ್ರು. ಈ ಸುದ್ದಿ ನಿಮಗೆಲ್ಲರಿಗೂ ಗೊತ್ತೇ ಇದೆ. ಸದ್ಯದ ಅಪ್ಡೇಟ್ ನ್ಯೂಸ್ ಏನಂದ್ರೆ ರವೀಂದ್ರ ಜಡೇಜಾ ಜೊತೆ ಮತ್ತಿಬ್ಬರು ಆಟಗಾರರು ಸಿಎಸ್ಕೆ ಸಂಬಂಧವನ್ನ ಮುರಿದುಕೊಳ್ಳಲು ಸಜ್ಜಾಗಿದ್ದಾರೆ.
ಮನವೊಲಿಕೆಗೆ ಬಗ್ಗದ ರಾಯುಡು ಚೆನ್ನೈ ತೊರೆಯಲು ಪ್ಲಾನ್ :
ಸದ್ಯ, ರವೀಂದ್ರ ಜಡೇಜಾ ಇನ್ಸ್ಟಾದಲ್ಲಿ ಪೋಸ್ಗಳನ್ನ ಡಿಲೀಟ್ ಮಾಡಿದ್ದು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಟೆನ್ಷನ್ ತಂದೊಡ್ಡಿದೆ. ಎಲ್ಲಿ ಜಡೇಜಾ ಫ್ರಾಂಚೈಸಿಗೆ ಗುಡ್ಬೈ ಹೇಳ್ತಾರೋ ಅನ್ನೋ ಆತಂಕದಲ್ಲಿದೆ. ಇದೆ ಟೈಮಲ್ಲಿ ಸಿಎಸ್ಕೆ ಮ್ಯಾಚ್ ವಿನ್ನರ್ ಅಂಬಟಿ ರಾಯುಡು ಕೂಡ ಚೆನ್ನೈ ತಂಡ ತೊರೆಯುವ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಹೌದು, ಜಡೇಜಾರಂತೆ ಅಂಬಟಿ ರಾಯುಡು ಹಾಗೂ ಸಿಎಸ್ಕೆ ನಡುವೆ ಮುನಿಸಿದೆ. ಇದೇ ಕಾರಣಕ್ಕೆ ಆಂಧ್ರವಾಲಾ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ರು. ಆದ್ರೆ ಸಿಇಒ ಕಾಶೀ ವಿಶ್ವನಾಥನ್, ಅಂಬಟಿ ರಾಯುಡು ಜೊತೆ ಮಾತಾಡಿ, ರಿಸೈನ್ ನಿರ್ಧಾರ ಹಿಂತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ರು. ಇಷ್ಟಾದ್ರು ಅಂಬಟಿಗೆ ಚೆನ್ನೈ ಮೇಲಿನ ಕೋಪ ಇನ್ನೂ ತಣ್ಣಗಾಗಿಲ್ಲ. ಹೀಗಾಗಿ ಚೆನ್ನೈ ತಂಡದ ಸಖ್ಯ ಕಳೆದುಕೊಳ್ಳಲು ರಾಯುಡು ಚಿಂತಿಸಿದ್ದಾರೆ.
CSK ಜೊತೆಗಿನ ದಶಕದ ಸಂಬಂಧ ಕಳೆದುಕೊಂಡ್ರಾ ಜಡ್ಡು..?
ಚೆನ್ನೈಗೆ ಗೂಗ್ಲಿ ಎಸೆಯಲು ದೀಪಕ್ ಚಹರ್ ತಯಾರಿ :
ಇನ್ನು 14 ಕೋಟಿ ಒಡೆಯ ದೀಪಕ್ ಚಹರ್ ಕೂಡ ತಮ್ಮ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಂಬಂಧ ಕಟ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ದೀಪಕ್ ಚಹರ್ ಇಂಜುರಿಗೆ ತುತ್ತಾಗಿದ್ರು. ಈ ಟೈಮಲ್ಲಿ ಫ್ರಾಂಚೈಸಿ, ದೀಪಕ್ ಚಹರ್ ಎನ್ನುವ ಸ್ವಿಂಗ್ ಸ್ಪೆಶಲಿಸ್ಟ್ರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅಸಡ್ಡೆ ಮನೋಭಾವನೆ ತೋರಿತು. ಇದರಿಂದ ಆಕ್ರೋಶಗೊಂಡಿರೋ ಯುವ ವೇಗಿ ಚಹರ್, ಸಿಎಸ್ಕೆಗೆ ಗುಡ್ಬೈ ಅನ್ನೋ ಗೂಗ್ಲಿ ಎಸೆಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಿಂದಲೂ ಪ್ಲೇಯರ್ಸ್ ಹೊಂದಾಣಿಕೆ ವಿಚಾರದಲ್ಲಿ ಒಂದು ಕೈ ಮೇಲೂ. ಸದ್ಯ ಇದೇ ಫ್ರಾಂಚೈಸಿಯನ್ನ ತೊರೆಯಲು ಮೂವರು ಮ್ಯಾಚ್ ವಿನ್ನರ್ಸ್ ರೆಡಿಯಾಗಿರೋದು ಹಲವು ಅಚ್ಚರಿ ಜೊತೆ ಅನೇಕ ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿದೆ. ಮಾಹಿ ನೇತೃತ್ವದ ಸಿಎಸ್ಕೆ ತಂಡವು 4 ಬಾರಿ ಚಾಂಪಿಯನ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಆದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ಗೇರುವಲ್ಲಿ ವಿಫಲವಾಗಿತ್ತು. ಈ ಆಘಾತದಿಂದ ಹೊರಬರುವ ಮುನ್ನವೇ ಒಂದು ವೇಳೆ ಈ ಮೂವರು ಆಟಗಾರರು ಸಿಎಸ್ಕೆ ತಂಡಕ್ಕೆ ಬಲವಾದ ಪೆಟ್ಟು ಬೀಳಲಿದೆ
