ಬಿಸಿಸಿಐ ಅಧ್ಯಕ್ಷರಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅ.23ಕ್ಕೆ ಪದಗ್ರಹಣ ಮಾಡಲಿದ್ದಾರೆ. ನೂತನ ಅಧ್ಯಕ್ಷ ಗಂಗೂಲಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.

ಮುಂಬೈ(ಅ.16): ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರ​ಲಿ​ರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯ​ಕ ಸೌರವ್‌ ಗಂಗೂಲಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌, ವಿವಿಎಸ್‌ ಲಕ್ಷ್ಮಣ್‌, ಮೊಹಮ್ಮದ್‌ ಕೈಫ್‌, ಬ್ರಾಡ್‌ ಹಾಡ್ಜ್‌, ಮೊಹಮ್ಮದ್‌ ಶಮಿ ಸೇರಿದಂತೆ ಅನೇಕರು ಗಂಗೂಲಿಯನ್ನು ಅಭಿ​ನಂದಿ​ಸಿ​ದ್ದಾರೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮನತಾ ಬ್ಯಾನರ್ಜಿ ಅಭಿನಂದನೆ ಸಲ್ಲಿಸಿದ್ದಾರೆ. ಗಂಗೂಲಿ ಅಧ್ಯಕ್ಷರಾಗೋ ಮೂಲಕ ಬಂಗಾಳವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಇದನ್ನೂ ಓದಿ: BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!

‘ತಡವಾದರೂ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯ ಭವಿಷ್ಯವಿದೆ. ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಮುಂದುವರಿಯಲಿ’ ಎಂದು ಸೆಹ್ವಾಗ್‌ ಟ್ವೀಟರ್‌ನಲ್ಲಿ ಹಾರೈ​ಸಿದ್ದಾರೆ. ‘ನಿಮ್ಮ ನೇತೃತ್ವದಲ್ಲಿ ಕ್ರಿಕೆಟ್‌ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ಲಕ್ಷ್ಮಣ್‌ ಟ್ವೀಟ್‌ ಮಾಡಿ​ದ್ದಾರೆ. ‘ಬಿಸಿಸಿಐ ಅಧ್ಯಕ್ಷರಾಗುವ ನಿಮಗೆ ಅಭಿನಂದನೆಗಳು, ಈ ಹಿಂದಿನಂತೆಯೇ ನಿಮ್ಮ ಕೊಡುಗೆ ನೀಡುವಿರೆಂಬ ನಂಬಿಕೆ ನನಗಿದೆ’ ಎಂದು ತೆಂಡುಲ್ಕರ್‌ ಟ್ವೀಟಿ​ಸಿದ್ದಾರೆ.

ಇದನ್ನೂ ಓದಿ: ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿ​ರುವ ಸವಾ​ಲು​ಗಳೇ​ನು?

ರಾಜ​ಕೀಯ ನಾಯ​ಕರು, ಸಾವಿ​ರಾರು ಕ್ರಿಕೆಟ್‌ ಅಭಿ​ಮಾ​ನಿ​ಗಳು ಸಹ ಗಂಗೂಲಿ ಬಿಸಿ​ಸಿಐ ಅಧ್ಯಕ್ಷರಾಗು​ತ್ತಿ​ರು​ವು​ದಕ್ಕೆ ಸಂತಸ ವ್ಯಕ್ತ​ಪ​ಡಿ​ಸಿದ್ದಾರೆ.


Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…