Asianet Suvarna News Asianet Suvarna News

ಫಿಕ್ಸಿಂಗ್‌ ಭೀತಿಯಿಂದಲೇ KPL ನಿಲ್ಲಿ​ಸಿದ್ರಾ ಕುಂಬ್ಳೆ?

ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ನಂತಹ ಭ್ರಷ್ಟಾಚಾರ ನಡೆಯಬಹುದು ಎಂದು ಮನಗಂಡಿದ್ದ ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್ ಕುಂಬ್ಳೆ 2010-11ರ ಆವೃತ್ತಿ ನಂತರ ಕೆಪಿ​ಎಲ್‌ ಟೂರ್ನಿ​ಯನ್ನು ನಿಲ್ಲಿ​ಸಿ​ದ್ದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Anil Kumble stopped KPL in fear of fixing match during his tenure as KSCA president
Author
Bengaluru, First Published Nov 9, 2019, 2:02 PM IST

ಬೆಂಗ​ಳೂ​ರು[ನ.09]: 2009ರಲ್ಲಿ ಕೆಪಿ​ಎಲ್‌ ಟೂರ್ನಿ ಆರಂಭ​ಗೊಂಡಿತು. ಟೂರ್ನಿ ಆರಂಭ​ವಾಗುವ ಸಮ​ಯ​ದಲ್ಲಿ ಕುಂಬ್ಳೆ ಹಾಗೂ ಶ್ರೀನಾಥ್‌ ಕೆಎಸ್‌ಸಿಎ ನಿರ್ಧಾರವನ್ನು ವಿರೋ​ಧಿ​ಸಿ​ದ್ದರು. ಕಾರ್ಪೋ​ರೇಟ್‌ ಮಾದ​ರಿ​ಯಲ್ಲಿ ಟಿ20 ಟೂರ್ನಿ ಆಯೋ​ಜಿ​ಸುವ ಅವ​ಶ್ಯ​ಕತೆ ಏನು ಎಂದು ರಾಜ್ಯದ ಇಬ್ಬರು ದಿಗ್ಗಜ ಕ್ರಿಕೆ​ಟಿ​ಗರು ಪ್ರಶ್ನಿ​ಸಿ​ದ್ದರು. 

ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!

ಬಿಸಿ​ಸಿಐನಿಂದ ಬರುವ ಹಣದಲ್ಲೇ ಕೆಎಸ್‌ಸಿಎ, ಟಿ20 ಟೂರ್ನಿ​ಯನ್ನು ಆಯೋ​ಜಿಸಬಹುದು. ಅನ​ಗ​ತ್ಯ​ವಾಗಿ ಕ್ರಿಕೆಟ್‌ ಬಗ್ಗೆ ಪ್ರೀತಿ, ಕಾಳಜಿ ಇಲ್ಲದ ವ್ಯಕ್ತಿ​ಗ​ಳಿಗೆ ರಾಜ್ಯ ಕ್ರಿಕೆಟ್‌ ಆಡ​ಳಿತದೊಳಗೆ ಹಿಂದಿನ ಬಾಗಿಲ ಪ್ರವೇಶ ನೀಡಿ​ದಂತಾ​ಗು​ತ್ತ​ದೆ ಎಂದು ಆತಂಕ ವ್ಯಕ್ತ​ಪ​ಡಿ​ಸಿ​ದ್ದರು. ಐಪಿ​ಎಲ್‌ನಲ್ಲಿ ಆಡಿದ್ದ ಕುಂಬ್ಳೆಗೆ ಹಣದ ಹೊಳೆ ಹರಿ​ಸುವ ಟಿ20 ಲೀಗ್‌ನಿಂದ ಎದು​ರಾ​ಗುವ ಸಮಸ್ಯೆಗಳ ಬಗ್ಗೆ ಅರಿ​ವಿತ್ತು.’

KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

‘ಕೆ​ಪಿ​ಎಲ್‌ ಆರಂಭಿ​ಸು​ವು​ದ​ರಿಂದ ಯುವ ಆಟ​ಗಾ​ರ​ರು ಟಿ20 ಕ್ರಿಕೆಟ್‌ನತ್ತ ಹೆಚ್ಚು ಆಕ​ರ್ಷಿತಗೊಳ್ಳು​ತ್ತಾರೆ. ಆಟ​ಗಾ​ರ​ರನ್ನು ಮೊದಲು ಸಾಂಪ್ರ​ದಾ​ಯಿಕ ಟೆಸ್ಟ್‌ ಹಾಗೂ ಏಕ​ದಿನ ಮಾದರಿಗೆ ಕರೆ​ತಂದು ಬಳಿಕ ಟಿ20ಗೆ ಪರಿ​ಚ​ಯಿ​ಸ​ಬೇಕು. 17 ವಯ​ಸ್ಸಿ​ನಲ್ಲೇ ವೃತ್ತಿ​ಪರ ಟಿ20 ಟೂರ್ನಿ ಆಡಿ​ಸು​ವುದು ಸರಿ​ಯ​ಲ್ಲ. ಅಂತಹ ವಯ​ಸ್ಸಿ​ನಲ್ಲಿ ದೊಡ್ಡ ಮೊತ್ತದ ಹಣ ಸಂಪಾ​ದಿಸಿದರೆ ಅದರ ನಿರ್ವ​ಹಣೆ ಬಹಳ ಕಷ್ಟ’ ಎಂದು ಶ್ರೀನಾಥ್‌ 2009ರಲ್ಲಿ ಮಾಧ್ಯ​ಮ​ವೊಂದಕ್ಕೆ ಹೇಳಿಕೆ ನೀಡಿ​ದ್ದರು.

2010ರಲ್ಲಿ ಅನಿಲ್‌ ಕುಂಬ್ಳೆ ಕೆಎಸ್‌ಸಿಎ ಅಧ್ಯಕ್ಷರಾಗಿ ಚುನಾ​ಯಿತರಾದರು. ಜಾವಗಲ್‌ ಶ್ರೀನಾಥ್‌ ಕಾರ್ಯ​ದರ್ಶಿ ಹುದ್ದೆ ಅಲಂಕ​ರಿ​ಸಿ​ದರು. 2010-11ರ ಆವೃತ್ತಿ ನಂತರ ಕುಂಬ್ಳೆ ಹಾಗೂ ಶ್ರೀನಾಥ್‌ ಕೆಪಿ​ಎಲ್‌ ಟೂರ್ನಿ​ಯನ್ನು ನಿಲ್ಲಿ​ಸಿ​ದರು. ಬಳಿಕ 2014ರಲ್ಲಿ ಕುಂಬ್ಳೆ, ಶ್ರೀನಾಥ್‌ ಅಧಿ​ಕಾ​ರ​ದಿಂದ ಹಿಂದೆ ಸರಿದ ಬಳಿಕ 2014ರಲ್ಲಿ ಕಾರ್ಯ​ದರ್ಶಿಯಾಗಿ ಆಯ್ಕೆಯಾದ ಬ್ರಿಜೇಶ್‌ ಪಟೇಲ್‌, ಪುನಃ ಕೆಪಿಎಲ್‌ ಆರಂಭಿ​ಸಿದರು.

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios