Asianet Suvarna News Asianet Suvarna News

ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ 1 ಕೋಟಿ ಪರಿಹಾರ!

ಚಿಕಿತ್ಸೆ ವೇಳೆ ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ ಕುಟುಂಬಕ್ಕೆ 1 ಕೋಟಿ| ವೈದ್ಯರೊಂದಿಗೆ ಸಂವಾದ ವೇಳೆ ಸಿಎಂ ಘೋಷಣೆ

Arvind Kejriwal announces Rs 1 crore for kin of healthcare staff who die dealing with Covid cases
Author
Bangalore, First Published Apr 2, 2020, 9:16 AM IST

ನವದೆಹಲಿ(ಏ.02): ಕೊರೋನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಒಂದೊಮ್ಮೆ ಸೊಂಕು ತಗುಲಿ ಸಾವಿಗೀಡಾದರೆ ಅವರ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಬುಧವಾರ ವೈದ್ಯರೊಂದಿಗೆ ಸಂವಾದ ನಡೆಸಿದ ಅವರು, ‘ವೈದ್ಯರ ಸೇವೆ ದೇಶ ಕಾಯುವ ಯೋಧರಿಗಿಂತ ಕಡಿಮೆಯಾದುದೇನಲ್ಲ. ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.

ಮುಂಬೈ ಸ್ಲಂನಲ್ಲಿ ಮೊದಲ ಕೊರೋನಾ ವೈರಸ್ ಪತ್ತೆ; ಹೆಚ್ಚಾಯ್ತು ಬಡಪಾಯಿಗಳ ಆತಂಕ!

ಅಲ್ಲದೇ ಒಂದೊಮ್ಮೆ ಸೇವೆಯಲ್ಲಿರುವ ಸರ್ಕಾರಿ ಅಥವಾ ಖಾಸಗಿ ವೈದ್ಯರು, ನರ್ಸ್‌ಗಳು ಹಾಗೂ ಸಹಾಯಕರು ಸಾವಿಗೀಡಾದಲ್ಲಿ ಅವರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವುದು’ ಎಂದು ಭರವಸೆ ನೀಡಿದರು.

Follow Us:
Download App:
  • android
  • ios